ಕುಟ್ಟಿಯಣ್ಣ ಬಿಸ್ನೆಸ್ ಲಾಸ್ ಆದ್ದ್ ಸುದ್ದಿ ಎಲ್ಲಾ ಬದ್ಯಗೂ ಪ್ರಚಾರ ಆಯಿ ಕುಟ್ಟಿಯಣ್ಣ ಹೈಲ್ ಆದ್ರು. ಇದಾಯ್ ಒಂದ್ ವಾರ ಬಿಟ್ಟ್ ಕುಟ್ಟಿಯಣ್ಣ ಕೈ ಬೆರ್ಲಿಗ್ ಗಾಯ ಆಯಿತ್ ಅಂದೇಳಿ ಡಾಕ್ಟ್ರ ಹತ್ರ ಹೋದ್ರು. ಡಾಕ್ಟರ್ ಕೇಂಡ್ರು ಇದ್ ಹ್ಯಾಂಗ್ ಕೈ ಗಾಯ ಆದ್ದ್? ಕುಟ್ಟಿ ಅಣ್ಣನಿಗೆ ಉಭಯ ಸಂಕಟ. ಹೇಳ್ದಿರೆ ಉಪಾಯ ಇಲ್ಲ. ಮೆಲ್ಲಗ್ ಬಾಯ್ ಬಿಟ್ರ್…
ನನ್ನ ಬಿಸ್ನೆಸ್ ಲಾಸ್ ಆದ ಸುದ್ದಿ ನಿಮ್ಗ್ ಗೊತ್ತ್ ಅಲ್ದಾ? ಅದೇ ಬೇಜಾರಗೆ ಜೀವ್ ತೆಕ್ಕಂಬ ಅಂತ್ ಹೋದೆ.
ಡಾಕ್ಟ್ರ್ ಮಧ್ಯ ಬಾಯ್ ಹಾಕಿ ಕೇಂಡ್ರು… ಅಲ್ಲ ಜೀವ್ ತೆಕ್ಕಂಬ್ಕ್ ಹೋರೆ ಕೈ ಗಾಯ ಆದ್ದ್ ಹ್ಯಾಂಗೆ.
ಕುಟ್ಟಿಯಣ್ಣ ಸಿಟ್ಟಿನಗೆ ನೀವ್ ಸ್ವಲ್ಪ ಬಾಯ್ ಮುಚ್ಕಂಡ್ ನಾ ಹೇಳುದ್ ಪೂರಾ ಕೇಣಿ. ಕಡೀಗ್ ಎಲ್ಲಾ ಗೊತ್ತಾತ್ ಅಂದ್ರು. ಕತಿ ಮುಂದ್ವರ್ಸುಕ್ ಸುರು ಮಾಡ್ರು. ಜೀವ ತೆಕ್ಕಂಬ ಅಂದ್ ಪಿಸ್ತೂಲ್ ಗುರಿ ಬಲ್ದಾ ಕಿಮಿಗ್ ಇಟ್ಕಂಡ್ ಶಬ್ದ ಕೇಂಬುದ್ ಬ್ಯಾಡಾ ಅಂದ್ ಕೈ ಬೆರ್ಲಗೆ ಎಡ್ದಾ ಕಿಮಿ ಮುಚ್ಕಂಡಿದ್ದೆ. ಗುಂಡ್ ಹೊಡ್ದ್ ಕಂಡ್ರೆ ಕೈ ಬೆರ್ಲ್ ಗಾಯ ಮರ್ರೆ. “ಮಧ್ಯ ಖಾಲಿ” ಅಲ್ದಾ… ಗುಂಡ್ ಸೀದಾ ಈಚಿಗೆ ಬಂದಿತೆ.
ಎಂತ ಯಾಪಾರ ಮಾಡುದ್ ಅಂತ ಸುಮಾರ್ ಆಲೋಚ್ನಿ ಮಾಡಿ ಕಡಿಗೆ ಈಗ ಪೆಟ್ರೋಲ್-ಡೀಸಲ್ಲಿಗೆ ಒಳ್ಳೇ ಯಾಪಾರ…ಅದ್ನೆ ಮಾಡ್ವ ಅಂತ ಎಲ್ಲ ಒಟ್ಟ್ ದುಡ್ಡ್ ಹಾಕಿ ಒಂದ್ ಪೆಟ್ರೊಲ್ ಬಂಕು ಹಾಕುದ್ ಅಂತ ತೀರ್ಮಾನ ಆಯ್ತ್…
ಒಂದ್ ದಿನ ಆಯ್ತ್….ಎರ್ಡ್ ದಿನ ಆಯ್ತ್…ಒಂದ್ ವಾರವೇ ಹೋಯ್ತ್….ಕಡಿಗ್ ಒಂದ್ ತಿಂಗ್ಳೂ ಕಳೀತ್…
ಒಂದ್ ರೂಪಾಯಿದು ಯಾಪಾರ ಆಯಲ್ಲ…
ಅಲ್ಲ ಹೋಯಿ ಹೋಯಿ ಸೆಕೆಂಡ್ ಫ್ಲೋರಗೆ ಪೆಟ್ರೊಲ್ ಬಂಕು ಇದ್ರೆ ಯಾರ್ಬತ್ರ್ ಮಾರ್ರೇ….
ಮತ್ತ್ ಸುಮಾರ್ ದಿನ ಹೋರ್ ಮೇಲೆ…ಇದೆ ನಾಕ್ ಜನ ಮತ್ತ್ ಒಟ್ಟಾರ್…ಇದ್ ಯಾಪಾರ ಸುಖ ಇಲ್ಲ ಬೇರೆ ಎಂತಾದಾರು ಮಾಡ್ವ..ಅಂದೇಳಿ ಎಲ್ಲಾ ತೀರ್ಮಾನ ಮಾಡ್ರ್… ನಾವ್ ಅದೇ ಜಾಗದಗೆ ಒಂದ್ ಹೋಟ್ಲು ಮಾಡ್ರೆ ಹ್ಯಾಂಗೆ?
ಸರಿ ನಾಕು ಜನ ಸೇರಿ ಹೋಟ್ಲು ಶುರು ಮಾಡ್ರ್….ಹೋಟ್ಲು ಶುರುವಾಯಿ ಒಂದಿನ ಆಯ್ತ್……ಯಾರು ಗಿರಾಕಿ ಬರಲ್ಲ….
ಒಂದ್ ವಾರ ಒಂದ್ ತಿಂಗ್ಳೂ…ಹೀಂಗೆ ಮುಂದುವರಿತ್……ಯಾಪಾರ ಎಂಥದೂ ಇಲ್ಲ…
ಆದ್ರೆ ಹೋಟ್ಲಿಗೆ ಜನ ಎಂಥಕೆ ಬರಲ್ಲ ಅಂತ ಬ್ರಹ್ಮಾಂಡ ಜ್ಯೋತಿಷಿ ಹತ್ರ ಕುಟ್ಟಿ ನಿಮಿತ್ತ್ಯ ಕೆಂಬುಕ್ ಹೋದ… ಹೋಯಿ, ನಾವ್ ಒಂದು ಹೋಟ್ಲ್ ಮಾಡಿತ್ ಮಾರ್ರೇ ಯಂತಾ ಯಾಪಾರವೇ ಇಲ್ಲ… ಕಾಣಿ ಇದಕ್ಕ್ ಒಂದು ಪರಿಹಾರ ಹೇಳಿ…
ಜ್ಯೋತಿಷಿ ಹೇಳ್ರ್.. ಹ್ವಾಯ್ ಇದು ವಾಸ್ತು ದೋಷ ಆಯಿ ಕಾಣತ್ತ್..ಎಂತಕೂ ನಿಮ್ಮ ಹೋಟ್ಲು ನಾ ಒಂದ್ ಸರ್ತಿ ಕಾಣ್ಕ್.. ಕಂಡಾರ್ ಮೇಲೆ ಹೇಳ್ತೆ ಅಂದ್ರು….
ಸರಿ ಅವ್ರನ್ನ್ ಹೋಟ್ಲಿಗೆ ಕರ್ಕಂಡ್ ಬಂದ…
ಹೋಟ್ಲ್ ಬಾಗ್ಲ್ ಬುಡಕ್ಕ್ ಬಪ್ಕೂ ಜ್ಯೋಯಿಸ್ರ್ ಅಲ್ಲೇ ನಿಂತಕಂಡ್ ಬಿಟ್ರು… ಹ್ವಾಯ್ ಕುಟ್ಟಿಯಣ್ಣ…ನಿಮ್ಗ್ ಮಂಡಿ ಸಮಾ ಇತ್ತಾ ಮಾರ್ರೇ… ಪೆಟ್ರೊಲ್ ಬಂಕಿನ ಬೋರ್ಡ್ ಮೊದ್ಲು ತೆಗ್ದ ಹಾಕಿ….ಹೋಟ್ಲ್ ಮಾಡಿ ಪೆಟ್ರೊಲ್ ಬಂಕಿನ ಬೋರ್ಡ್ ಇದ್ರೆ ಜನ ಬಪ್ದಾರು ಹ್ಯಾಂಗ್ ಮರ್ರೆ… ಅಂತ ಹೇಳಿ…ಇಗಾಣಿ ಈ ದುಡ್ಡ್ ನೀವೇ ಇಟ್ಕಣಿ..ಮೊದ್ಲು ಹೋಟ್ಲಿನ ಬೋರ್ಡ್ ಬರ್ಸಿ ಹಾಕಿ ಅಂತ ಹೇಳಿ… ದಡದಡಾ ಕೈ ಬೀಸ್ಕ ನೆಡ್ಕಂಡ್ ಹೋದ್ರು….
ಹೋಟ್ಲಿನ್ ಕತಿ ಇಲ್ಲಿಗೆ ಮುಗೀತಾ….
ಈಗ ಒಂದ್ ಕಾರ್ ಬಾಡ್ಗಿಗೆ ಬಿಡುವ..ಒಳ್ಳೇ ದುಡ್ಡ್ ಆತ್ತ್…ಅಂದ್ ಜೋಯಿಸ್ರ ಮಾತ್ ಕೇಂಬ ಅಂದೇಳಿ ಕಾರ್ ಬಂತ್.
ಆರೇ ಏನ್ ಮಾಡ್ರೂ ಯಾರು ಗಿರಾಕಿಯೇ ಸಿಕ್ಕಲ್ಲ…ಬರೀ ಪೆಟ್ರೊಲ್ ಕರ್ಚ್ ಮಾಡದ್ದೆ ಬಂತ್..
ಹೊಯ್ಲಿ..ಈ ಕಿಚ್ ಹಿಡಿದ್ದ್ ರಗ್ಳಿಯೆ ಬ್ಯಾಡಾ…ಕಾರಗೆ ಮನಿಗ್ ಹೋಪ ಅಂತ ಕಾರ್ ಸ್ಟಾರ್ಟ್ ಮಾಡುಕ್ ಹೋರೆ… ಕಾರ್ ಏನ್ ಮಾಡ್ರು ನಂಗೆಡಿಯ ಅಂತ ಕೂಕಂಡ್ ಬಿಡ್ತ್…
ಸರಿ ಎಂತ ಮಾಡುದ್ ಅಂತ ನಾಕೂ ಜನ ಇಳ್ದ್ ಬಂದ್… ಜೋಯಿಸ್ರೆ ನೀವೋಂಚೂರ್ ಸ್ಟೇರಿಂಗ್ ಹಿಡ್ಕ ಕೂಕಣಿ ನಾವು ನಾಕೂ ಜನ ಕಾರ್ ದೂಡ್ತೊ.. ಅಂದ್ರು…
ಜೋಯಿಸ್ರ್.. ಸರಿ ಅಂತ ಹೇಳಿ ಕೂಕಂಡ್ರು… 1 ನಿಮಿಷ ಆಯ್ತ್.. 2 ನಿಮಿಷ ಆಯ್ತ್… ಕಾರ್ ಹನಿ ಹಂದಲಿಲ್ಲ… ಅಲ್ಲ ಇವ್ರ್ ಎಂಥ ಮಾಡ್ತ್ರ್ ಕಾಂಬ ಅಂತ ಜೋಯಿಸ್ರ್ ಕಾರ್ ಇಳ್ಕ ಕಂಡ್ರೆ….ಕತಿ ಎಂಥ ಹೇಳುದ್… ಇಬ್ರ್ ಹಿಂದಿಂದ ಕಾರ್ ದೂಡ್ತಾ ಇದ್ರು… ಇಬ್ರು ಮುಂದಿಂದ ಕಾರ್ ದೂಡ್ತಾ ಇದ್ರು…
ನೂರನೇ ಪೋಸ್ಟ್ ಹಾಕಿ ಈ ಬದಿಗ್ ಮಂಡಿ ಹಾಕಿ ಮಲ್ಕಣಲ್ಲ ಈ ಜನ ಅಂದ್ಕಂಡ್ರ್ಯಾ ಹ್ಯಾಂಗೆ? ನೂರನೇ ಪೋಸ್ಟ್ ಹಾಕಿದ್ ವಿಜಯ ಕರ್ನಾಟಕದ ಬ್ಲಾಗ್ ಪರಿಚಯದಗೆ ಬಂದಿತ್ತ್ ಮರ್ರೆ ಗೊತ್ತಾ. ಕಂಡ್ ಮಸ್ತ್ ಖುಷಿ ಆಯ್ತ್. ಹಾಂಗಾಯ್ ನೂರ ಒಂದ್ನೇದ್ ಬರ್ದೆ ಇದ್ರ್ ಆತ್ತಾ. ಒಟ್ಟ್ ಕೌರವರ ಸಂಖ್ಯೆ ಮುಟ್ಟತ್ ಅಲ್ಲಿಗೆ 🙂
ಚಿತ್ರ ಕೃಪೆ: udayavani ಮತ್ತು wavesofudupi
ಈ ವರ್ಷ ಯುಗಾದಿ ಸುರಿಗೆ ಪಂಚಾಂಗ ಓದುವತಿಗೆ ಬೌಷ ಮಳಿ ಬಪ್ಪ ಕೊಳಗದ ಅಳತೆ ತಪ್ಪಿ ಹೋಯಿತಾ ಕಾಂತ್. ಅಲ್ಲ ಈ ನಮನಿ ಮಳಿ ಬಪ್ಪುದಾ ಹಂಗಾರೆ? ಯಾರ್ ಬಾಯಗ್ ಕೇಂಡ್ರೂ ಈ ನಮನಿ ಮಳಿ ಕಾಣಲ್ಲಪ್ಪ. ಕಡ್ಲ್ ಬದಿಯಗ್ ಇದ್ದರಂತೂ ಯಾವ ರಿಜಿಸ್ತ್ರೀ ಸತೇ ಇಲ್ದೆ ಸಮುದ್ರಕ್ಕೆ ಅವ್ರ್ ಜಾಗ ಬರ್ಕೊಡ್ಕ್ ಆಯ್ತ್. ಒಂದ್ ವರ್ಷಕ್ ಆಪ ಮಳಿ ಕಳ್ದ್ ಒಂದ್ ತಿಂಗ್ಳಗೇ ಸೊರ್ದ್ ಬಿಟ್ಟಿತ್. ಅಲ್ಲಾ ಮಾರ್ರೆ ಹಂಗಾರೆ ಆಕಾಶ ಎಂತ ಒಟ್ಟಿ ಆಯಿತಾ… ಈ ನಮನಿ ಸೊರಿತ್ತಲೆ ಪುರ್ಸೊತ್ ಇಲ್ದೆ. ಇದೆಲ್ಲಾ ತಕಂಡ್ ಹೋಪ ಕಾಲ ಅಲ್ದೇ. ಪ್ರಳಯ ಅಪ್ದ್ ಅಂದ್ರೆ ಮತ್ತೆಂತ? ಈ ಮಳಿ ಸಾಲ ಅಂದೇಳಿ ಅದ್ರೊಟ್ಟಿಗೆ ಈ ಸರ್ತಿ ಜೋರ್ ಗಾಳಿ ಬೇರೆ ಶುರುವಾಯಿತ್. ಇಷ್ಟ್ ಸಮ್ಯ ಇರ್ತಿಲ್ಲ ಅಂದಲ್ಲ… ಆದ್ರೂ ಈ ಸರ್ತಿ ಸ್ವಲ್ಪ ಗಾಳಿ ಹೊಡ್ತ ಬಿಗುವೇ ಇದ್ದಿತ್. ಟೀವಿಯಗೆ ಬ್ರೇಕಿಂಗ್ ನ್ಯೂಸ್ ಅಂದ್ರೆ ರೈನಿಂಗ್ ನ್ಯೂಸ್ ಅಂಬಲ್ಲಿವರಿಗೆ ಮಳಿ-ಗಾಳಿ ಉಪದ್ರ. ಕರಾವಳಿ-ಮಲ್ನಾಡ್ ಬದಿಯರಿಗೆ ಜೋರ್ ಮಳಿ, ನೆರಿ ಇದೆಲ್ಲ ಹೊಸ್ತೇನಲ್ಲ. ಕಳ್ದ್ ವರ್ಷ ಚೂರ್ ಕಮ್ಮಿ ಬಿಟ್ರೆ ಪ್ರತೀ ವರ್ಷವೂ ಮಳ್ಗಾಲದ ನಾಕ್ ತಿಂಗ್ಳ್ ಮಳೆಯಂದ್ರೆ ಮಳೆ. ನೀರ್ ಆಂದ್ರೆ ನೀರ್… ಆರೂ ಈ ವರ್ಷ ಸ್ವಲ್ಪ ಅತಿರೇಕ ಅಂಬಷ್ಟ್ ಸೊರಿತ್ತಪ್ಪ. ಹೀಂಗಿನ ಮಳ್ಗಾಲ ಕಂಡ್ ಭಾರೀ ವರ್ಷ ಆಯಿತ್ತ್… ಪ್ರಾಯ ಆದರೆಲ್ಲ ಹೇಳುದ್ ಕೇಣ್ಕ್… ನಾ ಸಣ್ಣಕಿಪ್ಪತಿಗೆ ನಮ್ಮನಿ ಮೆಟ್ಲ್ ಕಲ್ಲ್ ಬುಡಕ್ ನೀರ್ ಬಂದಿತ್ ಅಂದೇಳಿ, ಅದ್ ಬಿಟ್ರೆ ಈ ಸರ್ತಿಯೇ ಸೈಯಪ್ಪ ಮಳಿರಾಯನ ಹೊಡ್ತ ಅಂದೇಳಿ. ಮಳಿ ಎಷ್ಟೇ ಬರ್ಲಿ ಮಳ್ಗಾಲದಗೆ ರಸ್ತಿ ಅಂದ್ರೆ ಅವಸ್ಥಿ ಅಂದೇಳಿಯೇ ಅಭ್ಯಾಸ ಆಯಿ ಹೋಯಿತ್ತಲ್ಲ ನಂಬದಿಯರಿಗೆ. ಅದ್ರಗೂ ಈ ಸರ್ತಿ ಹೆದ್ದಾರಿ ಅಗ್ಲ ಮಾಡು ಹೆಳಿಯೊಳಗೆ ಕೆಲವ್ ಬದಿ ಕಂಬ್ಳ ಗೆದ್ದಿ ಆರೂ ಬೇಕ್, ರಸ್ತಿ ಬ್ಯಾಡ.
ಅಂತೂ ಮಳಿ ಕತಿ ಹೀಂಗಾಯ್ತಾ… ನಾ ಶುರು ಮಾಡದ್ ಮಳಿ ಸುದ್ದಿಯೇ ಆದ್ರೂ… ಹೇಳುಕ್ ಹೊರ್ಟದ್ ಭಾಷಿಯೊಳಗಿಪ್ಪ ಗಮ್ಮತ್ತಿನ ವಿಷ್ಯ. ಜೋರ್ ಮಳಿ ಬಂದ್ರೆ ಎಂತ ಹೇಳುದ್ ನಾವೆಲ್ಲಾ? ಈ ಕಿಚ್ಚ್ ಹಿಡದ್ ಮಳಿಯೊಂದ್ ನಿಲ್ಲುದೇ ಇಲ್ಲಪ್ಪ ಅಂದೇಳಿ ಅಲ್ದಾ? ಇಲ್ಲೇ ಇಪ್ಪದ್ ಕಾಣಿ ಗಮ್ಮತ್. ಮಳಿ ಅಂದ್ರೆ ನೀರ್… ಅದಕ್ಕ್ ಕಿಚ್ಚ್ ಹಿಡುದ್ ಹ್ಯಾಂಗೇ 🙂 ಅದೇ ಭಾಷಿಯ ಗಮ್ಮತ್. ಅಂದ್ರೆ ಭಾಷಿದ್ ವಾಚ್ಯ ಅರ್ಥ ತಕಂಡ್ರೆ ಅರ್ಥ ಅನರ್ಥ ಆತ್ತ್. ಆದ್ರೆ ಅದ್ರ ಸೂಚ್ಯ ಅರ್ಥ ‘ಕೆಟ್ಟ’ ಮಳೆ ಅಂತ ಇಟ್ಕಣ್ಲಕ್. ನೀವ್ ಕೇಂಬುಕೂ ಸಾಕ್. ಮಳಿಯಗೆ ಕೆಟ್ಟ ಮಳಿ ಒಳ್ಳೇ ಮಳಿ ಅಂದೇಳಿ ಇತ್ತಾ? ಕಾಲ ಕಾಲಕ್ಕ್ ಎಷ್ಟ ಬೇಕೋ ಅಷ್ಟ್ ಬಂದ್ರೆ ಅದ್ ಒಳ್ಳೇ ಮಳಿ. ನಾವ್ ಹೀಂಗೆ ಇದ್ದ್ ಬದ್ದ್ ಗೆದ್ದಿನೆಲ್ಲಾ ಮಣ್ಣ್ ತುಂಬ್ಸಿ ತುಂಡ್ ತುಂಡ್ ಮಾಡಿ ಸೈಟ್ ಅಂದೇಳಿ ಮಾರುಕ್ ಹೊರ್ಟ್ ಮೇಲೆ, ರಸ್ತಿ ಅಗ್ಲ…ಮಣ್ಣ್ ಮಶಿ ಅಂದೇಳಿ ನೂರಾರ್ ವರ್ಷ ಬಾಳಿ ಬದ್ಕಿದ್ ಮರದ್ ಬುಡಕ್ ಕೊಡ್ರಿ ಹಾಕ್ರೆ ಹೀಂಗೆ ಆಪ್ದ್ ಅಲ್ದಾ?ಹಳ್ಳಾಡಿ ಜಯ್ರಾಮ್ ಶೆಟ್ರ್ “ಹುಲಿಯಾದ ಕಾಳ”ದಗೆ ಹೇಳು ಹಾಂಗೆ ಕೆಲವ್ ವರ್ಷ ಹನ್ನೊಂದ್ ತಿಂಗ್ಳೂ ಮಳಿ, ಕೆಲವ್ ವರ್ಷ ಒಂದ್ ತಿಂಗ್ಳೂ ಮಳಿ ಇಲ್ದೆ ಹೋದಾಂಗ್ ಆಪ ಕಾಲ ಬತ್ತ್. ಹೆಚ್ಚ್ ದೂರ ಏನಿಲ್ಲ. ಹೇಳುವರ್ ಹೇಳುದ್…ಮಾತಿಗೆ… ಕಾಲ ಕೆಟ್ಟ್ ಹೋಯ್ತ್… ಕೆಟ್ಟ್ ಹೋದ್ದ್ ಕಾಲ ಅಲ್ಲ. ಅದ್ ಓಡುವಾಂಗೇ ಓಡ್ತಾ ಇತ್ತ್. ಕೆಟ್ಟ್ ಹೋದ್ದ್ ನಾವ್… ಹೌದಾ ಸುಳ್ಳಾ?
ಅಂತೂ ಇಂತೂ ಕುಂದಾಪ್ರ ಕನ್ನಡದ ತಳಿಕಂಡಿಯಗೆ ನೀಕಿ ಕಂಡ್ರೆ 100ನೇ ಪೋಸ್ಟ್ ಮಂಡಿ ಹಾಕದ್ದ್ ತೋರ್ತಾ ಇತ್ತ್ 🙂
“ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ” ಅಂದೇಳಿ ಟ್ಯಾಗ್ ಲೈನ್ ಇಟ್ಟ ಈ ಬ್ಲಾಗ್ ಶುರು ಮಾಡಿ ಮೊನ್ನೆ ಮೇ 11ಕ್ಕ್ ಭರ್ತಿ ಐದ್ ವರ್ಷ ತುಂಬ್ತ್ ಕಾಣಿ…
ಬ್ಲಾಗಿನ ಬಾಗ್ಲಿಗ್ ಬಂದ್ ನೀಕಿ ಕಂಡರ್, ಹೊಸ್ಲ್ ಮೇಲೆ ನಿಂತ್ಕಂಡ್… ಹ್ವಾಯ್ ಈ ಭಾಷಿ ನಮ್ಗ್ ಬತ್ತಿಲ್ಲ ಮರ್ರೆ ಅಂದೇಳಿ ಹೊಸ್ಲ್ ದಾಟುದಾ ಬ್ಯಾಡದಾ ಅಂದ್ ಅನ್ಮಾನದಗೆ ಈ ಬದಿಗ್ ಬಂದರ್… ಎಂತಾ ಬರ್ದರೂ ಲಾಯ್ಕಿತ್ತ್ ಅಂದ್ ಬೆನ್ನ್ ತಟ್ಟಿದರ್, ಬರುಕ್ ಎಂತದೂ ಸಿಕ್ದೇ… ಯಾವ್ದಾರೂ ಪಿಚ್ಚರಿನ್ ಪದ್ಯ ಹಿಡ್ಕಂಡ್…ಅದಕ್ ಒಂಚೂರ್ ಕುಂದಾಪ್ರ ಕನ್ನಡ ಒಗ್ಗರ್ಣಿ ಹಾಕ್ರೂ, ಬೇಜಾರ್ ಮಾಡ್ಕಣದೇ ಬರೀ ಒಗ್ಗರ್ಣಿ ಪರಿಮಳಕ್ಕೆ ಬಂದ್ ಓದಿ ಹೊದರ್, ಕುಂದಾಪ್ರ ಕನ್ನಡ ಬ್ಲಾಗಿಗೆ ಖಾಯಂ ಆಯಿ ಬಂದ್… ಕಂಡ್ ಖುಷಿಯಾದ್ದ್ ಹೇಳಿ, ಬರುಕ್ ಉಮೇದ್ ಬರ್ಸಿದರ್… ನಾ ಬರ್ದ್ ಬರಹ, ಅಣಕ, ಜೋಕ್ ಇದಕ್ಕೆಲ್ಲಾ ಎಷ್ಟೋ ಸರ್ತಿ ಬರುಕ್ ಉಮೇದ್ ಬಪ್ಪಂಗ್ ಅವ್ರೂ ಬರ್ದ್ ಓದಿ ಮೆಚ್ಚಿ ಜೈ ಅಂದರ್…. ನೆನ್ಪ್ ಮಾಡ್ಕಂಬ್ಕ್ ಹೋರೆ… ಸುಮಾರ್ ಜನ ಇದ್ರ್… ಅವರಿಗೆಲ್ಲಾ ಬರ್ದೇ ಒಂದ್ ಥ್ಯಾಂಕ್ಸ್ ಹೇಳಿ ಬಿಟ್ರ್ ಸಾಕಾ?
ಹಂಗಾರ್ ಅವರ ಪ್ರೋತ್ಸಾಹಕ್ ನಾ ಕೊಡು ಮರ್ಯಾದಿ ಅಂದ್ರೆ… ಹೀಂಗೇ ಎಂತಾರೂ ಮಂಡಿಗ್ ಬಂದದ್ದ್ ನಾಕ್ ಅಕ್ಷರ ಬರ್ದ್ ಅಷ್ಟೇ. ಅದ್ ಬಿಟ್ರೆ ನಂಗ್ ಬೇರೆ ಎಂತದೂ ಬತ್ತಿಲ್ಲ, ಅದ್ ಬಿಟ್ರ್ ನನ್ನತ್ರ ಬೇರೆ ಎಂತದೂ ಇಲ್ಲ ಅಂದೇಳಿ ಗಟ್ಟಿ ಗೊತ್ತಾಯಿತ್.
ಈ ಐದ್ ವರ್ಷದಗ್ ಹಾಂಟ್ ಹಾಕದ್ದ್ ಎಷ್ಟ್? ನನ್ ಇನ್ನೊಂದ್ ಬ್ಲಾಗ್ ಮನಸಿನ ಮರ್ಮರಕ್ಕ್, ಅಲ್ ಬರು ಅಣಕಕ್ಕ್ ಕೊಟ್ಟ್ ಸಮ್ಯದಗೆ ಒಂದ್ ಚೂರೂ ಪಾಲ್ ನಂಗ್ ಕೊಡುದಿಲ್ಯಾ ಅಂದೇಳಿ ಈ ಬಡಬ್ಬಿ ಮಗು ಮರ್ಕತ್ತಲೇ ಮರ್ರೆ… 🙂 ಆ ಕಿಚ್ಚ್ ಹಿಡದ್ದ್ ನೆನಪಿನ ಕವನ ಅಂದೇಳಿ ನಯಾ ಪೈಸೆ ಉಪ್ಯೋಗ್ ಇಲ್ದಿದ್ದ್ ಕುಟ್ಟಿ ಬೆನ್ನ್ ತಟ್ಕಂಬ್ದ್ ಎಂತಕೆ, ಈ ಬದಿಗೂ ಚೂರ್ ನೀಕಿ ಕಾಣ ಮಾರಾಯಾ ಅಂತ್ ಹೇಳ್ದೆ ಇದ್ರೂ ನಂಗ್ ಅರ್ಥ ಆತ್ತ್. ಆ ಬ್ಲಾಗ್ ಈ ಬ್ಲಾಗ್ ಶುರು ಆದ್ದ್ ಹೆಚ್ಚು ಕಡ್ಮಿ ಒಂದೇ ಸುರಿಗೆ. ಇದ್ ಒಂದ್ 35-40 ದಿನ ತಡ್ದ್ ಹುಟ್ಟಿತ್ ಅಂಬ್ದ್ ಬಿಟ್ರೆ… ಹೆಚ್ಚು ಕಡ್ಮಿ ಒಟ್ಟೊಟ್ಟಿಗೆ ಶುರುವಾದ್ದ್ ಈ ಎರ್ಡ್ ದೋಣಿ ಯಾಪಾರ 🙂 ಅಲ್ 228 ಪೋಸ್ಟ್ ಹಾಕಿದೆ… ಇಲ್ಲ್ ಮಾತ್ರ ಇನ್ನೂ ಗುರ್ಟತಾ ಇತ್ತಲೇ ಕಾಣ ಅಂದೇಳಿ ನನ್ನ್ ಹಂಗ್ಸುಕ್ ಸುರು ಮಾಡ್ತ್. ಅದ್ರ್ ದೆಸಿಯಿಂದ್ಲೆ ಇವತ್ತ್ ನೂರನೇ ಮೆಟ್ಲ್ ಕಲ್ ಬುಡಕ್ಕ್ ಬಂದ್ ನಿಂತಿತ್…
ಇದೆಲ್ಲದ್ರ್ ಮಧ್ಯ ನಂಗ್ ಸಮ್ಧಾನ ಮತ್ ಖುಷಿ ಕೊಟ್ಟದ್ದ್ ಅಂದ್ರೆ ಈ ಬ್ಲಾಗಿನ ಪೋಸ್ಟಿನ್ ಹೆಳಿಯಗೆ ನಂಗ್ ಒಟ್ ಮಾಡುಕ್ ಸಿಕ್ಕಿದ್ ಕುಂದಾಪ್ರ ಕನ್ನಡ ಶಬ್ದ… ಕುಂದಾಪ್ರ ಪದಾರ್ಥ ಅಂತ್ ಒಂದ್ ಪೋಸ್ಟ್ ಹಾಕಿ ಸುಮಾರ್ ಶಬ್ದ ಸಿಕ್ಕಿತ್… ಅದನ್ನ ಹುಡ್ಕುಕೆ ಎಷ್ಟೋ ಜನ ಉಪ್ಕಾರ ಮಾಡಿರ್. ಅವ್ರನ್ನ್ ನೆನ್ಪ್ ಬಿಟ್ರ್ ಹ್ಯಾಂಗ್ ಹೇಳಿ. ಅಣಕ್-ಪಣಕ್ ಜೋಕ್-ಗೀಕ್ ಅಂದೇಳಿ ಸುಮಾರ್ ಇತ್ಲಿತ್ಲಾಯ್ ಹೆಚ್ಚ್ ಬರದ್ದ್ ಒಂದ್ ನಮನಿ ಗಮ್ಮತ್ತಿನ ಬರಹ. ಆದ್ರೂ ಸೈತ ಬ್ಲಾಗ್ ಶುರು ಮಾಡು ಸುರಿಗ್ ನಾ ಇಟ್ಟ “ಕುಂದಾಪ್ರ ಕನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ”ಅಂಬುದ್ ನೆನ್ಪ್ ಹೊಯ್ದೆ ಇರ್ಲಿ ಅಂಬ ಆಸಿ ಸತೇ ಇತ್ತ್… ಇದನ್ನ್ ಹೇಳುವಷ್ಟತಿಗೆ ಅರ್ಧ ಬರ್ದದ್ ಕತಿ ಕುಶಾಲ್ ಮಾಡತ್ತ್… ಕಂಡ ಯಕ್ಷಗಾನ ಪ್ರಸಂಗ ನನ್ ಬಗ್ಗೆ ಬರುಕ್ ಏನ್ ಧಾಡಿ ನಿಂಗ್ ಅನ್ನತ್. ವೈದೇಹಿ ಕತಿ ಪುಸ್ತಕ ಹೇಳತ್ತ್… ಒಂದೊಂದ್ ಕತಿ ಬಗ್ಗೂ ಬರ್ದಿರೆ ಅದೇ ನೂರ್ ಪೋಸ್ಟ್ ಆತಿತ್ತಲೇ ಮಾರಾಯ ಅಂತ್ ಕಣ್ಣಿಗ್ ಕೈ ಹಾಕಿ ಕಾಂಬು ಹಂಗ ಮಾಡತ್ತ್. ಕಾಂಬ ಎಲ್ಲದನ್ನೂ ನೆನ್ಪ್ ಇಟ್ಕಂತೆ. ಹೀಂಗೇ ನಿಮ್ಮಂತರ್ ಪ್ರೋತ್ಸಾಹ ಕೊಟ್ರೆ… ಯಾಕಾತಿಲ್ಲ ಒಂದ್ ಕೈ ಕಂಡೇ ಬಿಡ್ಕ್ ಅಂಬ್ ಉಮೇದ್ ಇತ್ತ್… 🙂
ಇನ್ನೊಂದ್ ವರ್ಷ ಆಪಲ್ಲಿವರಿಗ್ ಅದ್ರಗ್ ಎಷ್ಟ್ ಕೈ ಹಿಡ್ದ್ ಬರ್ಸತ್ತ್ ಕಾಂಬ… ಆಶಿ ಅಂತೂ ಇತ್ತ್… ಆತ್ತಾ… ಕಾಂಬ 🙂
ಇಷ್ಟ್ ಬರುಕ್ ಕಲ್ಸಿ ಕೊಟ್ಟ ಕುಂದಾಪ್ರ ಕನ್ನಡ ಭಾಷಿಗೊಂದ್ ಪ್ರೀತಿಯ ನಮಸ್ಕಾರ ಹ್ವಾಯ್…
ನಿನ್ನ ಮದಿಯಾರ್ ಮೇಲೆ ರಾಣಿ ಕಂಡಗೆ ಕಂಡ್ಕಂತೆ ಅಂದೇಳಿ… ನಿಂಗ್ ಸೂಕ್ಷ್ಮ ಅರ್ಥ ಆಯ್ದಿರ್ ನಾ ಎಂತ ಮಾಡುದ್?”
___________________________________________________________________________
ಶಾಲಿಯಗೆ 7ನೇ ಕ್ಲಾಸಿನ ವಾರ್ಷಿಕ ಪರೀಕ್ಷೆ ನಡಿತಿದ್ದಿತ್. ನಮ್ ಕುಟ್ಟಿ ಇದ್ದ್ ವರ್ಷ ಆ ಶಾಲಿಯಗೆ ಮಕ್ಳ್ ಬರೀ ಬಡ್ಡ್ ಅಂಬ್ರ್. ಅದಕ್ಕೇ ಮಾಷ್ಟ್ರೆಲ್ಲಾ ಒಟ್ಟಾಯಿ ಈ ಸರ್ತಿ ಈ ಮಕ್ಳನ್ನೆಲ್ಲಾ ಹ್ಯಾಂಗಾರೂ ಮಾಡಿ ದೂಡ್ವಾ, ಇವ್ ಹತ್ತಾ ಪಣ್ಕ್ ಮಕ್ಕಳ್ ಅಂದೇಳಿ, ಪರಿಕ್ಷೆಯಗೆ ಬರೀ ಸರಿ-ತಪ್ಪು ಹೇಳುವ ಪ್ರಶ್ನೆ ಮಾತ್ರ ಕೇಂಡಿರ್. ಪರಿಕ್ಷೆ ಸುರು ಆಯ್ತ್… ಮಕ್ಕಳೆಲ್ಲಾ ಅಡ್ಡ ಬಿದ್ಕ ಬರುಕ್ ಸುರು ಮಾಡಿದೋ.
ನಮ್ಮ ಕುಟ್ಟಿ ಲಾಸ್ಟ್ ಬೆಂಚಗೆ ಕೂಕಂಡ್ ಇದ್ದಿದಾ. ಮಾಷ್ಟ್ರು ಎಲ್ಲ ಮಕ್ಳನ್ನೂ ಕಾಂತಾ ಇದ್ದಿರ್… ಎಲ್ಲರೂ ಬರುದ್ರಗೇ ಇದ್ದಿರ್. ಆರೆ ಕುಟ್ಟಿ ಮಾತ್ರ ಮಧ್ಯ ಮಧ್ಯ ಬರುದ್ ನಿಲ್ಸಿ ಚಡ್ಡಿ ಕಿಸಿಗ್ ಕೈ ಹಾಕಿ ಎಂತದೊ ಹುಡ್ಕತಾ ಇದ್ದಿದ. ಇಂವ ಕಾಪಿ ಚೀಟಿ ಏನಾರೂ ತಕಂಡ್ ಬಂದಿನಾ ಕಾಂಬ ಅಂದೇಳಿ ಮಾಷ್ಟ್ರು ಹತ್ರ ಹೋಯಿ ಕಂಡ್ರೆ ಅಂವ ಎಂಟಾಣಿ ಹಿಡ್ಕಂಡ್ ಟಾಸ್ ಹಾರ್ಸ್ತಾ ಇದ್ದ
ಕುಟ್ಟಿ ಮಂಡಿ ನೆಗ್ಗಿ ಹೇಳ್ದ… ‘ಹ್ವಾಯ್… ನಿಮ್ಮ್ ಕಣ್ ಹೊಟ್ಟಿ ಹೋಯಿತಾ ಎಂತ? ಅಲ್ಲ್ ಅಷ್ಟ್ ದೊಡ್ಡ್ ಬೋರ್ಡ್ ಬರ್ದ್ ಹಾಕಿರಲೇ…. ಇಲ್ಲಿ ಬರೀ ದ್ವಿಚಕ್ರ ವಾಹನ ಮಾತ್ರ ನಿಲ್ಲಿಸಬಹುದು ಅಂದೇಳಿ… ನಾ ಕಾರ್ ನಿಲ್ಸಕ್ ಅಲ್ದಾ… ಅದ್ಕೆ ಎರ್ಡ್ ಚಕ್ರ ಕಳ್ಚತಾ ಇದ್ದೆ…’ 🙂
ಯಕ್ಷಗಾನದ್ ಸುದ್ದಿತೆಗುಕ್… ಯೋಗ್ಯತೆ ಇಲ್ಲ
ಯಕ್ಷಗಾನದ್ ಸುದ್ದಿತೆಗುಕ್… ಯೋಗ್ಯತೆ ಇಲ್ಲ
ಬಾಯ್ ಅಂದರೆ…. ಇವ್ಳದ್ ಬೊಂಬಾಯ್ ಅಲ್ದಾ
ಬಾಯ್ ಅಂದರೆ…. ಇವ್ಳದ್ ಬೊಂಬಾಯ್ ಅಲ್ದಾ
ಮಿಡ್ಕುದ್ ಬಿಟ್ಟರೆ … ಎಂತಾ ಗೊತ್ತಿಲ್ಲ
ಅಲ್ದೆ ಹೋದ್ದು ಮಾತಾಡಿ… ಬಯ್ಸ್ಕಂಬ್ಕೆ ಹುಟ್ಟಿದ್ಲಾ… ಮರ್ಲು…..
ಈ ನಮನಿಯಗೆ… ಬಾಯಿಗ್ ಬಂದಾಂಗೆ… ಮಾತಾಡಿ ಒಟ್ಟ್ರಾಶಿ
ಅಸ್ಲಿಗೆ ಇವಳದ್ ಯೋಗ್ಯತೆಯೇ ಇಷ್ಟ್
ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್
ಐನ್… ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್
ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಬರ್ದೇ… ಮೈತೋರ್ಸಿ… ಮಂಗ್ನಾಂಗ್ ಹಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಕೆಲಸಕ್ಕ್ ಬರದ್ದೇ… ಕೊಂಕ್ ಮಾತ್ ಆಡಿ
ಹ್ಯಾಂಗಾರೂ ಮಾಡಿ ಎದ್-ತೋರ್ಕ್ ಅಂದೇಳಿ… ನಾಟ್ಕ ಮಾಡ್ತ್ಲ್ ಇವ್ಳ್… ಥೋ… ಥೋ…
ಅಂಡೆ ಪಿರ್ಕಿ ಹೆಣ್ಣ್
ಮರ್ಲು… ಅಂಡೆ ಪಿರ್ಕಿ ಹೆಣ್ಣ್
___________________________________________________________________ ಮೂಲ ಹಾಡು: ‘ದಂಡಪಿಂಡಗಳು’ ಧಾರಾವಾಹಿಯ ಶೀರ್ಷಿಕೆ ಗೀತೆ ‘ದಂಡ ಪಿಂಡಗಳು…ಇವರು… ದಂಡ ಪಿಂಡಗಳು’ ಕೃಪೆ: kannadalyrics.com
ದಂಡ ಪಿಂಡಗಳು
ಇವರು… ದಂಡ ಪಿಂಡಗಳು
ದಂಡ ಪಿಂಡಗಳು
ಇವರು… ದಂಡ ಪಿಂಡಗಳು
BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…
ದಂಡ ಪಿಂಡಗಳು
ಇವರು… ದಂಡ ಪಿಂಡಗಳು
ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ದಿವಾನ್ ಚಾಕರಿ… ಇವರಿಗೆ ಸಿಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಜವಾನ್ ಚಾಕರಿಗೆ… ಇವರೇ ಹೋಗಲ್ಲ
ಅಲ್ಲೂ ಇಲ್ಲ… ಇಲ್ಲೂ ಇಲ್ಲ
ಎಲ್ಲೂ ಇಲ್ಲದ ಅಂತರ ಪಿಶಾಚಿಗಳು…. ಥೂ…ಥೂ…
ದಂಡ ಪಿಂಡಗಳು
ಇವರು… ದಂಡ ಪಿಂಡಗಳು
ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ಪರ್ಸಂಟೇಜು ತೆಗೆಯಲು… ಯೋಗ್ಯತೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ರಿಸರ್ವೇಷನ್ನು… ಇವರ ಜಾತಿಗೆ ಇಲ್ಲಾ
ಲಂಚ ಕೊಡುವುದಕ್ಕೆ… ದುಡ್ಡೇ… ಇಲ್ಲಾ
ಇನ್-ಫ್ಲುಯೆನ್ಸು ಮಾಡಲು… ಯಾವ ಮಿನಿಸ್ಟ್ರೂ… ಗೊತ್ತಿಲ್ಲಾ..ಆಆ
ಈ ಪ್ರಕಾರವಾಗಿ… ಯಾವುದು ಇಲ್ಲದೆ… ಕೆಲಸ ಸಿಗಲ್ಲ
ಒಟ್ಟಲ್ಲಿ ಇವರಿಗೆ ಭವಿಷ್ಯವೇ ಇಲ್ಲಾ
ದಂಡ ಪಿಂಡಗಳು
ಇವರು… ದಂಡ ಪಿಂಡಗಳು
ಆ ದಂಡ ಪಿಂಡಗಳು
ಇವರು… ದಂಡ ಪಿಂಡಗಳು
BA, BSc, BCom ಮಾಡಿ
BA, BSc, BCom ಮಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಕೆಲಸವೇ ಸಿಗದೇ… ದಿನ ಅಲೆದಾಡಿ
ಎಲ್ಲರ ಕೈಲೂ ಉಗಿಸಿಕೊಳ್ಳೊ… ವೇಸ್ಟು ಬಾಡಿಗಳು…. ಥೂ…ಥೂ…
ಇವತ್ತ್ ರವೀಂದ್ರ ಕಲಾಕ್ಷೇತ್ರದಗೆ ನೆಡಿತಿಪ್ಪ ಪುಸ್ತಕ ಪ್ರದರ್ಶನಕ್ಕ್ ಒಂದ್ ಗಳ್ಗಿ ಹೋಯ್ ಬಪ್ಪ ಅಂತ ಹೋಯಿ ಬಂದೆ. ಪ್ರತಿ ಸರ್ತಿ ಅರಮನೆ ಮೈದಾನದಗೆ ನೆಡುವ ಪುಸ್ತಕ ಪ್ರದರ್ಶನಕ್ಕೆ ಹೋತಿದ್ದಿದೆ. ಈ ವರ್ಷ ಅಲ್ಲಿಗ್ ಹೋಪ್ಕ್ ಆಯಲ್ಲ. ಬೆಂಗ್ಳೂರಗೆ ಸಾಹಿತ್ಯ ಸಮ್ಮೇಳನ ಆದಲ್ಲ್ ಹೋದ್ದೆ ಕೊನೆ. ಅದ್ರ ಮೇಲೆ ಅಂಕಿತ ಪುಸ್ತಕಕ್ಕೆ ಒಂದೊಂದ್ ಸಲ ಹೋದ್ದ್ ಬಿಟ್ರೆ ಪುಸ್ತಕ ಪ್ರದರ್ಶನಕ್ಕೆ ಯಾವ್ದಕ್ಕೂ ಹೋಯಿರ್ಲಿಲ್ಲ. ಹೋದದಕ್ಕ್ ಎರ್ಡ್ ಎರ್ಡ್ ಲಾಭ ಆಯ್ತ್. ಒಂದ್ ಒಳ್ಳೇ ಪುಸ್ತಕ ಸಿಕ್ತ್. ಇನ್ನೊಂದ್ ಸುಮಾರ್ ದಿನದಿಂದ ಎಂತದೂ ಬರೀಲಿಲ್ಲ ಅಂಬ ಪಾಪಪ್ರಜ್ಞೆ ಕಳ್ಕಂಡ್ ನನ್ನ ಕೊಂಗಾಟದ ಬ್ಲಾಗಿಗೆ ಬರುಕ್ ಒಂದ್ ವಿಷ್ಯ ಸಿಕ್ದಾಂಗ್ ಆಯ್ತ್ ಇವತ್ತ್ ಹ್ಯಾಂಗಿದ್ರೂ ಶನಿವಾರ. ಮಾಡುಕ್ ಎಂತ ಕೆಲ್ಸ ಇಲ್ಲ. ಹಾಂಗಾಯ್ ಹೋಯ್ ಬಪ್ಪ್ ಮನ್ಸ್ ಮಾಡದ್ದ್. ಪುಸ್ತಕ ಪ್ರದರ್ಶನಕ್ಕ್ ನಾ ಹೋಪ್ದಂದ್ರ್ ನನ್ ಕಿಸಿಗ್ ಒಂದಿಷ್ಟ್ ಕತ್ರಿ ಂತ ಲೆಕ್ಕವೇ… ಆದ್ರೆ ಬೇರೆ ಎಂತಕೋ ಖರ್ಚ್ ಮಾಡಿದಾಂಗೆ ಪುಸ್ತಕಕ್ಕ್ ದುಡ್ಡ್ ಕರ್ಚ್ ಮಾಡುಕ್ ನಂಗೆ ಬೇಜಾರಂಬ್ದೇ ಇಲ್ಲ. ಹೋದ್ದಕ್ಕ್ ಒಂದಿಷ್ಟ್ ಪುಸ್ತಕ ತಕಂಡ್ ಹಾಂಗೇ ಐ.ಬಿ.ಎಚ್. ಪ್ರಕಾಶನದ ಸ್ಟಾಲಿಗ್ ಬಂದೆ. ಕುಂದಾಪ್ರ ಕನ್ನಡ ಬ್ಲಾಗ್ ಬರುವವನಿಗೆ ಅಲ್ಲಿ ಕುಂದಗನ್ನಡ ಗಾದೆಗಳು ಅಂಬ ಪುಸ್ತಕ ಸಿಕ್ದಾಗ್ಳಿಕೆ ಆದ ಖುಷಿನ ಹ್ಯಾಂಗ್ ಹೇಳುದೋ ಗೊತ್ತಾತಿಲ್ಲ. ಕುಂದಾಪ್ರ ಕನ್ನಡದ ನಾನ್ನೂರಾ ಅರವತ್ತು ಗಾದೆ. ಪ್ರತೀ ಗಾದೆಗೂ ಅರ್ಥ ಸಹಿತ ವಿವರಣೆ… ಇನ್ನೂರೈವತ್ತ್ ಪುಟದ ಪುಸ್ತಕ ಡಿಸ್ಕೌಂಟ್ ಸೇರಿ ಇನ್ನೂರ ಇಪ್ಪತ್ತೈದಕ್ಕೆ ಸಿಕ್ರೆ ಅದಕ್ಕಿಂತ ಹಬ್ಬ ಬೇಕಾ…
ಆ ಪುಸ್ತಕದ ಒಂದು ಗಾದೆ ಅದ್ರ ಅರ್ಥ ಸಹಿತ ನಿಮ್ಮ ಖುಷಿಗೆ… ಅದ್ರಗೆ ಅರ್ಥ ಎಲ್ಲ ಗ್ರಾಂಥಿಕ ಕನ್ನಡದಗೆ ಕೊಟ್ಟಿರ್ (ಗ್ರಾಂಥಿಕ ಕನ್ನಡ ಅಂಬುದಕ್ಕೆ ಕೆಲವರ್ ಶುದ್ಧ ಕನ್ನಡ ಅಂತ್ರ್… ಹಾಂಗೆ ಅಂದ ಒಬ್ಬೆ ಒಬ್ರತ್ರೂ ಜಗಳ ಆಡದೇ ಬಿಟ್ಟದ್ದಿಲ್ಲ..:-) ) ಅದನ್ನ ನಾನ್ ಕುಂದಾಪ್ರ ಕನ್ನಡದಗೆ ಬರ್ದಿದೆ…
ಗಾದೆ: ಕೊಂದ್ ಪಾಪ ತಿಂದೇ ಪರಿಹಾರ
ನಾ ಈ ಗಾದೆನೆ ಆರ್ಸ್ಕಂಬ್ಕ್ ಒಂದ್ ಕಾರಣ ಇತ್ತ್. ಇದಕ್ಕೆ ರೂಢಿಮಾತಗೆ ನಾನ್ ಕೇಂಡಿದ್ದ್ ಅರ್ಥವೇ ಬೇರೆ. ಪ್ರಾಣಿ-ಪಕ್ಷಿನ ಕೊಂದ್ರೆ ಬಪ್ಪ ಪಾಪ ಅವನ್ನ ತಿಂದ್ ಕೂಡ್ಲೆ ಪರಿಹಾರ ಆತ್ತ್ ಅಂಬ ಅರ್ಥದಗೆ ಹೇಳ್ತ್ರ್ ಎಲ್ಲ. ಆದ್ರೆ ಇದನ್ನ ಓದಿದ ಮೇಲೆ ನಂಗ್ ಗೊತ್ತಾದ್ದ್ ಇದ್ರ ಅರ್ಥ ಬೇರೆ ಅಂದೇಳಿ. ಕೊಲ್ಲುದು ಮಹಾಪಾಪ. ಆ ಪಾಪವನ್ನು ಅನುಭವಿಸಿಯೇ (ತಿಂದೇ) ಅದಕ್ಕೆ ಪರಿಹಾರ ಅಂತ ಅರ್ಥ
ನಿಮ್ಗೆ ಗೊತ್ತಿಪ್ಪ ಕುಂದಾಪ್ರ ಕನ್ನಡ ಗಾದೆ ಇದ್ರೆ ಹೇಳಿ. ಅದನ್ನ ಎಲ್ಲರೂ ಓದಿ ಖುಷಿ ಪಡ್ಲಿ
ನಾನು ಒತ್ತಾರೆ ಎದ್ಬುಟ್ಟು ನಿನ್ ಮಾರೆ ನೋಡ್ಬುಟ್ಟು ಕೈ ಜೋಡ್ಸಿ ನಿಲ್ತೀನ್ ಕಣೆ
ಬೇಗ ಬೇಡ್ ಕಾಫಿ ತಂದ್ಬುಟ್ಟು ನಿನ್ ಕಾಲ ಒತ್ಬುಟ್ಟು ಬಗ್ ಬಗ್ಸಿ ಕೊಡ್ತೀನ್ ಕಣೆ
ಕಾಫಿ ಸೀಗಿಲ್ಲ ಅಂತ ಒದ್ಬುಟ್ರೆ ನಿನ್ ಬೆಳ್ಳ ಕಪ್ಪಲ್ಲಿ ಅದ್ತೀನ್ ಕಣೆ
ಈ ಸಕ್ರೆಯ ಗೊಂಬೆಗೆ ಸಕ್ಕರೆ ಯಾಕಂತ ಹಲ್ ಗಿಂಜಿ ನಿಲ್ತೀನ್ ಕಣೆ
I love you love you da I really love you da I truely love you da ಹೇ ಹೇ
I love you love you da I really love you da I truely love you da ಹೇ ಹೇ
ಅಹಾ ಸಂತೆಗೆ ಕರಕೊಂಡು ಸೀರೆನ್ನ ಕೊಂಡ್ ಕ್ಕೊಂಡು ನಿಂಗುಡ್ಸಿ ನೋಡ್ತೀನ್ ಕಣೆ
ಅಲ್ಲಿ ತೊಟ್ಲಲ್ಲಿ ಕೂತ್ಕಂಡು ಮಂಡಕ್ಕಿ ತಿಂದ್ಕಂಡು ಎತ್ಕಂಡೆ ಬತ್ತೀನ್ ಕಣೆ
ಆಹಾ ಬೆಳದಿಂಗಳ್ ರಾತ್ರೇಲಿ ಮುಂಜಾನೆ ಜೋಕಾಲಿ ಅಂಗ್ಳಾನೆ ಮಂಜಿನ್ ಕೋಣೆ
ಇಂಥಾ ಮುಂಗೋಪ ಬಿಟ್ಬುಟ್ಟು ಇನ್ನಾರೊ ನಂಬುಟ್ಟು ಬಾಬಾರೆ ನನ್ನ ಜಾಣೆ
I love you love you da I really love you da I truely love you da ಹೂ ಹೂ
Gadde te na chad di gadire te na chad di
Chhadeyan de tattu utte tap chhad di
Bolo tara ra ra, tara ra ra, kanjri kalol kardi
Bolo tara ra ra
Hayo rabba hayo rabba
Haar te shingaar laa ke gai jadon mele vich
Baaniye di hatti vich jaake vadh gai, bolo tara ra ra
Bolo tara ra ra, kanjri kalol kardi
Hayo rabba hayo rabba hayo rabba
Aunde jaunde rahiyan nu modhe maar langdi
Athri jawaani vekho jaave dangdi, bolo tara ra ra
Bolo tara ra ra, kanjri kalol kardi
Hayo rabba hayo rabba hayo rabba
Mitthe mitthe bola naal kaalje nu khich di
Ashikan de dilan vich jaave rachdi, bolo tara ra ra
Mehndi peeche phire nachdi, bolo ta ra ra ra
Bolo tara ra ra, kanjri kalol kardi
Hayo rabba hayo rabba hayo rabba
Gadde te na chaddi gadire te na chaddi
Chhadeyan de tattu utte tap chhaddi
Bolo tara ra ra, kanjri kalol kardi bolo tara ra ra
Hayo rabba hayo rabba hayo rabba)
ಕೂಕಂಬ್ಕ್ ಮರವಂತೆ ಬೀಚ್… ಮೀಯುಕ್ ಕೋಟೇಶ್ವರ ಕೆರೆ… ಲವ್ವಿಗೇ… ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇತ್ … ಈಚಿಗ್ ಮಾರ್ಣಕಟ್ಟಿ ಇತ್… ಲವ್ವಿಗೆ… ನಮ್ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್
ಕುಂಭಾಶಿಯಗೆ ಪೂಜೆ ಹೆಳಿ… ಕೊಲ್ಲೂರಗೆ… ಜಪ ತಪ
ಕುಂಭಾಶಿಯಗೆ ಪೂಜೆ ಹೆಳಿ… ಕೊಲ್ಲೂರಗೆ… ಜಪ ತಪ… ಲವ್ವಿಗೆ… ನಮ್ಮಿಬ್ರ ಲವ್ವಿಗೆ
ನಾರ್ತಿನಲ್ಲಿ ಮೂಡ್ಗಲ್ ಬೆಟ್ಟ … ಈಸ್ಟಗೆ ಶಂಕ್ರನಾರ್ಣ ಇತ್… ಪೂಜಿಗೇ… ಲವ್ ಪೂಜಿಗೇ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್
ಗಲಾಟಿಯೇ ಇಲ್ಲ… ಬನಿ ಗಂಗೊಳ್ಳಿಯಲ್ಲಿ
ಮನ್ಸ್ ಬಿಚ್ಕಣಿ… ಮರ ಮರ ಗ್ವಾಯ್-ಮರ್ನ ಅಡೀಲಿ
ಹಲ್ಸ್ನಾಡಲ್ಲಿ ತಿರ್ಗಾಡುತ್ತ… ಹಲ್ಸ್ನಾಡಲ್ಲಿ ತಿರ್ಗಾಡುತ್ತ… ಮೂಡು ತಕಣಿ
ಹಳ್ಳಿಯರ್ ಕಣಂಗೆ… ಬದಕ್ತಾ ಒಳ್ಳೆದಾಯಿರಿನಿ
ಹ್ವಾಯ್ ಉಪ್ಪಿನಕುದ್ರು ಗೊಂಬೆಯಾಟ…. ಕಾಣಿ ಕಣ್ಬಿಟ್ಟು
ಯಕ್ಷಗಾನ ಬಯಲಾಟ ಕಂಡ್ಕಂಡ್… ಕಣ್ ಕಣ್ಣು ಬಿಟ್ಟು
ಕುಂದೇಶ್ವರನೇ… ಇಲ್ಲಿ ನಿಂತ್ಕಂಡಿದ್ದಾನೆ… ಪ್ರೀತಿಯಿಂದಲೇ… ಕುಂದಾಪ್ರವ ಕಾಯ್ತನೆ
ಪಾರಿಜಾತದಗೆ ಕಾಪಿ ಕುಡಿನಿ… ಶೆರಾನ್ ಗೆ ಉಂಡ್ಕ ಬನಿ… ಲವ್ವಿಗೆ… ರಿಚ್ ಲವ್ವಿಗೆ
ದುಡ್ಡಿದ್ರೆ ಪಿಚ್ಚರ್-ಹೋಟ್ಲು… ಇಲ್ದಿದ್ರೆ ಗುಡ್ಡಿ-ಹಕ್ಕ್ಲು… ಲವ್ವಿಗೆ… ಈ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್
ಜಾತಿ ಕೆಟ್ರೂ ಸುಖ ಪಡ್ಕ್… ಜಾತಿ ಕೆಟ್ರೂ ಸುಖ ಪಡ್ಕ್… ಪ್ರೀತಿ ಮಾಡ್ ಹೆಣೆ
ನಾಳಿಗಾಪುದ್… ಇವತ್ತೇ ಆಯಿ ಹೊಯ್ಲಿ ಹೆಣೆ
ಹೊಕ್ಕಂಡ್… ಅಂಡ್ಕಂಡ್ ಮಾಡ್ವ… ಹೊಕ್ಕಂಡ್… ಅಂಡ್ಕಂಡ್ ಮಾಡ್ವ… ಗುಟ್ಟಿನ ಲವಮ್ಮ
ಸತ್ಯ ಹೇಳ್ ಹೆಣೆ… ಸತ್ತಿಕೂ ಲವ್ ಮಾಡ್ ಹೆಣೆ
ಸಮುದ್ರ ಬದಿ ಗಾಳಿ ಇತ್ತ್ … ಕಾಡೆಲ್ಲ ತಣ್ಣಗಿತ್ತ್… ಲವ್ವಿಗೇ… ಸ್ವೀಟ್ ಲವ್ವಿಗೇ
ಯಕ್ಷಗಾನದ್… ಪದ್ಯ ಇದೆ… ದರ್ಶಿನ-ಕೋಲದ ವಾದ್ಯ ಇತ್… ಪದ್ಯಕೆ … ಲವ್ ಪದ್ಯಕೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್
ಕೂಕಂಬ್ಕ್ ಮರವಂತೆ ಬೀಚ್… ಮೀಯುಕ್ ಕೋಟೇಶ್ವರ ಕೆರೆ… ಲವ್ವಿಗೇ… ಈ ಲವ್ವಿಗೇ
ಕೊಡಚಾದ್ರಿ ಬೆಟ್ಟ ಇತ್ … ಈಚಿಗ್ ಮಾರ್ಣಕಟ್ಟಿ ಇತ್… ಲವ್ವಿಗೆ… ನಮ್ ಲವ್ವಿಗೆ
ಈ ಹೆದ್ರಿಕಿ ಬಿಟ್ಟಾಕಿ… ಲವ್ ಮಾಡ್ … ಲವ್ ಮಾಡ್… ಲವ್ ಮಾಡ್
ನೀ ಬಿಲಾಸ್ ಬಿಟ್ಟಾರೂ… ಲವ್ ಮಾಡ್… ಲವ್ ಮಾಡ್… ಲವ್ ಮಾಡ್…
ಮೂಲ ಹಾಡು: ನೆನಪಿರಲಿ ಚಿತ್ರದ ಕೂರಕ್ ಕುಕ್ರಳ್ಳಿ ಕೆರೆ ಕೃಪೆ: kannadalyrics.com
ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ತೇಲಕ್ ಕಾರಂಜಿ ಕೆರೆ… ಲವ್ವಿಗೇ… ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ… ಕನ್ನಂಬಾಡಿ ಕಟ್ಟೆ ಇದೆ… ಲವ್ವಿಗೆ… ನಂ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಬಲ್ಮುರಿಲಿ ಪೂಜೆ ನೆಪ… ಎಡ್ಮುರಿಲಿ ಜಪ ತಪ
ಬಲ್ಮುರಿಲಿ ಪೂಜೆ ನೆಪ… ಎಡ್ಮುರಿಲಿ ಜಪ ತಪ… ಲವ್ವಿಗೆ… ನಿರ್ವಿಘ್ನ ಲವ್ವಿಗೆ
ನಾರ್ತಿನಲ್ಲಿ ಶ್ರೀರಂಗ್ಪಟ್ಣ… ಸೌತಿನಲ್ಲಿ ನಂಜನ್ಗೂಡು…ಪೂಜೆಗೇ… ಲವ್ ಪೂಜೆಗೇ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಗಲಾಟೆನೇ ಇಲ್ಲ ಬನ್ರೀ… ಗಲಾಟೆನೇ ಇಲ್ಲ ಬನ್ರೀ… ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ… ಮರಮರ ಮರದ ಮರೇಲೀ
ಅರ್ಮನೆಲಿ ಅಡ್ಡಾಡುತ… ಅರ್ಮನೇಲಿ ಅಡ್ಡಾಡುತ… ಮೂಡು ತಗೊಳ್ರೀ
ರಾಜನ್ ತರಾನೇ… ಲವ್ವಲ್ ದರ್ಬಾರ್ ಮಾಡ್ಬಿಡ್ರೀ
ಹೇ ರಂಗನ್-ತಿಟ್ಟು ನೋಡಿಬಿಟ್ಟು… ಹಾಡ್ರಿ ಮುತ್ತಿಟ್ಟು
ಮುಡುಕುತೊರೆಲ್ ಮನಸು ಕೊಡ್ರಿ… ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೆ… ಇಲ್ ರಸ್ತೆ ಆಗವ್ನೆ… ಪ್ರೀತಿ ಮಾಡೋವ್ರ್-ಗೆ… ಸರಿ ದಾರಿ ತೋರ್ತಾನೆ
ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ… ಬ್ಲಫ್ಫಿನಲ್ಲಿ ಬಫೆ ಮಾಡಿ… ಲವ್ವಿಗೆ… ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್… ಇಲ್ದಿದ್ರೆ ಒಂಟಿ ಕೊಪ್ಪಲ್… ಲವ್ವಿಗೆ… ಈ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಜಾತಿ ಕೆಟ್ರು ಸುಖ ಪಡ್ಬೇಕ್… ಜಾತಿ ಕೆಟ್ರು ಸುಖ ಪಡ್ಬೇಕ್… ಪ್ರೀತಿ ಮಾಡಮ್ಮ
ನಾಳೆ ಆಗೋದು… ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೋ… ಕದ್ದು ಮುಚ್ಚಿ ಪ್ರೀತಿ ಮಾಡೋ… ಕಳ್ಳ ಲವಮ್ಮ
ಸತ್ಯ ಹೇಳಮ್ಮ… ನಿಜ್ವಾದ್ ಪ್ರೀತಿ ಮಾಡಮ್ಮಾ
ಜಾತಿ ಸುಡೋ ಮಂತ್ರ ಕಿಡಿ… ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ… ಅಂಥ ಹೇಳಮ್ಮಾ
ತೀರ್ಥಹಳ್ಳಿಲಿ… ಕುವೆಂಪು ಹುಟ್ಟಿದ್ರು… ವಿಶ್ವಪ್ರೇಮನಾ… ಮೈಸೂರ್ಗೆ ತಂದ್ ಕೊಟ್ರು
ಮೈಸೂರೂ ಕೂಲಾಗಿದೆ… ಬೃಂದಾವನ ಗ್ರೀನಾಗಿದೆ… ಲವ್ವಿಗೇ… ಸ್ವೀಟ್ ಲವ್ವಿಗೇ
ನರಸಿಂಸ್ವಾಮಿ ಪದ್ಯ ಇದೆ…ಅನಂತ್ಸ್ವಾಮಿ ವಾದ್ಯ ಇದೆ… ಸಾಂಗಿಗೆ… ಲವ್ ಸಾಂಗಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಕೂರಕ್ಕ್ ಕುಕ್ಕ್ರಳ್ಳಿ ಕೆರೆ… ತೇಲಕ್ ಕಾರಂಜಿ ಕೆರೆ… ಲವ್ವಿಗೇ… ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ… ಕನ್ನಂಬಾಡಿ ಕಟ್ಟೆ ಇದೆ… ಲವ್ವಿಗೆ… ನಂ ಲವ್ವಿಗೆ
ಈ ಭಯಬಿಸಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ
ಈ ದಿಗಿಲ್ ದಬ್ಬಾಕೀ… ಲವ್ ಮಾಡಿ… ಲವ್ ಮಾಡಿ… ಲವ್ ಮಾಡಿ