Archive for ಸೆಪ್ಟೆಂಬರ್, 2008


ಅಂತೂ ಕಳ್ದ್ ವಾರ ಪಿ.ವಿ.ಆರ್ ಟಾಕೀಸಿಗ್ ಹೋಯಿ ಗುಲಾಬಿ ಟಾಕೀಸ್ ಕಂಡ್ಕಂಡ್ ಬಂದೆ. ವೈದೇಹಿ ಬರದ್ ಕತಿದ್ ಒಂದ್ ಸಣ್ಣ್ ಎಳಿ ಮಾತ್ರ ಇಟ್ಕಂಡಿರ್. ಕತಿ ಬದ್ಲ್ ಮಾಡ್ರೂ ಪಿಚ್ಚರ್ ಭಾರಿ ಲಾಯ್ಕ್ ಆಯಿ ಬಂದಿತ್. ಉಮಾಶ್ರೀಯಂತೂ ಕುಂದಾಪ್ರ್ ಬದ್ಯರ್ ಅಲ್ಲ ಅಂದೇಳಿ ಹೇಳುಕ್ ಯಡ್ಯ. ಹಾಂಗ್ ಕಾಂಬುಕ್ ಹೋರೆ ಎಂ.ಡಿ.ಪಲ್ಲವಿ ಮಾಡದ್ ನೇತ್ರ ಕುಂದಾಪ್ರ ಕನ್ನಡ ಮಾತಾಡ್ವತಿಗೆ ಒಂಚೂರ್ ಬೇರೆ ನಮ್ನಿ ಕೇಂತಿತ್ತ್. ಆರ್ ಇದೆಲ್ಲ ಅಷ್ಟ್ ದೊಡ್ ತಪ್ಪೇನಲ್ಲ ಬಿಡಿ. ನಾವ್ ಹುಟ್ಟಿನ್ ಲಗಾಯ್ತ್ ಊರಗೇ ಇದ್ದದ್. ಈಗೊಂದ್ ನಾಲ್ಕಾರ್ ವರ್ಷದ್ ಈಚಿಗೆ ಊರ್ ಬಿಟ್ಟದ್. ಆರೂ ಮಾತಾಡ್ವತಿಗೆ ಬ್ಯಾಡ ಅಂದ್ರೂ ಈ ಬದಿ ಕನ್ನಡ ಎಷ್ಟೋ ಸಲ ಎಳಿತ್ತ್. ಇನ್ ಅವ್ರ ನಾಕ್ ದಿನ್‌ದಗೆ ಅಷ್ಟಪ ಕಲ್ತ್ ಮಾತಾಡುದೇ ಹೆಚ್ಚ್.

 

ಇಡೀ ಪಿಚ್ಚರ್ ತುಂಬಾ ಕುಂದಾಪ್ರ ಕನ್ನಡವೇ ಇತ್ತ್. ಕಡ್ಲ್ ಬದೀ ಜನ್ರ್, ಅವ್ರ್ ಕುಶಾಲ್, ಅವ್ರ್ ಜಗ್ಳ, ಹೀಂಗೆ ಎಲ್ಲಕಿಂತ ಹೆಚ್ಚಾಯಿ ಜಾತಿ-ಧರ್ಮದ ಗಲಾಟಿ ಇಲ್ದಿದ್ ಊರಗೆ ಹ್ಯಾಂಗೆ ಇದೆಲ್ಲಾ ಶುರು ಆಯ್ತ್. ಒಟ್ಟಿಗಿದ್ದರೇ ಹ್ಯಾಂಗ್ ಒಬ್ರನ್ ಕಂಡ್ರೆ ಇನ್ನೊಬ್ರ್ ಅನ್ಮಾನ ಪಡುವಂಗಾಯ್ತ್… ಹೀಂಗೆ ಮೀನುಗಾರಿಕೆಗೆ ಬೇರೆಯರಿಗೆ ಬಪ್ಪುಕ್ ಬಿಟ್ರ್ ಮೇಲೆ ಹ್ಯಾಂಗ್ ನಮ್ ನಮ್ಮೊಳಗೆ ಗಲಾಟಿ ಶುರು ಆಯ್ತ್ ಅಂದೇಳಿ ತೋರ್ಸಿದ್ರ್.

 

ನಂಗ್ ಈ ಪಿಚ್ಚರ್ ಬಗ್ ಮಸ್ತ್ ಬರಿಕಂದೇಳಿ ಇದ್ದಿತ್. ಆರೆ ಸುಧನ್ವ ದೇರಾಜೆ ಬರದ್ದ್ ಒದ್ರ್ ಮೇಲೆ, ಬೇರೆ ಯಾರಿಗೂ ಬರುಕ್ ಎಂತದೂ ಬಾಕಿ ಈಡ್ದಿದ್ದ್ ಹಾಂಗೆ ಅವ್ರ್ ಒಂದ್ ಒಳ್ಳೇ ವಿಮರ್ಶೆ ಬರ್ದಿರ್. ಒಂದ್ಗಳ್ಗಿ ಪುರ್ಸೊತ್ತ್ ಮಾಡ್ಕಂಡ್ ಓದಿ.

 

ಹಾಂಗಾಯಿ ನಾ ಹೇಳುದ್ ಇಷ್ಟೇ…ಪಿಚ್ಚರ್ ಭಾರೀ ಲಾಯ್ಕ್ ಇತ್ತ್. ಇನ್ನ್ ಹೆಚ್ಚ್ ದಿನ ಟಾಕೀಸಗೆ ಇರತ್ತೋ ಇಲ್ಯೋ ಗೊತ್ತಿಲ್ಲ. ಪುರ್ಸೊತ್ತಾರೆ ಒಂದ್ಗಳ್ಗಿ ಹೊಯ್ ಕಂಡ್ಕಂಡ್ ಬನಿ. 


ಕುಮ್ಟಿ ಬೀಳು = ಬೆಚ್ಚಿ ಬೀಳು

ಬಳಕೆ

೧.         ಮಗಿನ ಸುದ್ದಿಗ್ ಹೊಗ್ಬೆಡ ಅಂದ್ರ್ ಕೇಂತಿಲ್ಲ. ನೀ ಕೂಗದ್ದ್ ಕಂಡ್ ಮಗು ಕುಮ್ಟಿ ಬಿತ್ತ್ ಕಾಣ್

೨.         ನೀವ್ ಹಿಂದಿಂದ್ ಬಂದ್ ಸುಮ್ನ್ ನಿಂತ್ಕಂಡದ್ದಾ ಮರಾಯ್ರೆ. ಕತ್ಲಿ ಹೌದಾ ಅಲ್ದಾ… ನಾ ಒಂದ್ಸಲ ಕುಮ್ಟಿ ಬಿದ್ದೆ ಗೊತ್ತಾ

 

ಹೊಕ್ಡ್ = ಜೊತೆಗೆ, ಬಳಿ, ಹತ್ತಿರ, ಒಟ್ಟಿಗೆ

ಬಳಕೆ

೧.         ಮೊನ್ನೆ ನಂಗೂ ಅವಂಗೂ ಮಾತಿಗ್ ಮಾತ್ ಆಯ್ ಈಗ ನನ್ ಹೊಕ್ಡ್ ಮಾತಾಡುದೇ ಕೈದ್ ಮಾಡಿದ

೨.         ನಿನ್ನ್ ಹೊಕ್ಡ್ ಒಂದ್ ನೂರ್ ರೂಪಾಯ್ ಇದ್ರ್ ಕೊಡ್ ಮರಾಯಾ, ಒಂದ್ ನಾಕ್ ದಿನ ಬಿಟ್ಟ್ ಕೊಡ್ತೆ

೩.         ಮಗು ಒಂದೇ ಇತ್ತಲೆ ಅಲ್ಲ್. ಮಗಿನ ಹೊಕ್ಡ್ ಯಾರರು ಕೂಕಣಿ ಕಾಂಬ

 

ಚಣಿಲ = ಅಳಿಲು

ಬಳಕೆ

೧.         ಮಾಯ್ನ್ ಹಣ್ಣ್ ಆಪ್ ಸುರಿಗೆ ಇಲ್ಲೆಲ್ಲ ಮಸ್ತ್ ಚಣಿಲ ಬತ್ತೊ

೨.         ಮಕ್ಳೆ ಚಣಿಲಕ್ಕೆ ಎಂತಕೆ ಕಲ್ಲ್ ಹೊಡಿತಿದ್ರಿ… ಅದ್ ಬರೀ ಪಾಪದ್

 

ಬೆಟ್ಟ್, ಬೆಟ್ಟು / ಬೆರ್ಲ್ = ಬೆರಳು

ಬಳಕೆ

೧.         ಮೊನ್ನೆ ಬಪ್ಪತಿಗೆ ಕಾಲ್ ಬೆಟ್ಟಿಗೆ ಕಲ್ಲ್ ತಾಗಿ ಗಾಯ ಆದ್ದ್ ಮಾರಾಯ್ರೆ…ಇಕಾಣಿ ಹಾಂಗೇ ಇತ್ತ್. ಚೂರೂ ಹಿಂದಾಯಿಲ್ಲ

೨.         ಎಂತದಾ ಸಣ್ಣ್ ಮಗಿನ್ ಕಣಗೆ ಎಷ್ಟ್ ಹೊತ್ತಿಗ್ ಕಂಡ್ರೂ ಬೆರ್ಲ್ ಬಾಯಾಕ್ಕಂಡ್ ಇಪ್ಡ್

 

ಹಿಂದಾಗು = ಗುಣವಾಗು, ಶಮನವಾಗು

೧.         ಆ ಡಾಕ್ಟ್ರ್ ಕೈ ಅಡ್ಡಿಲ್ಲ. ಎರ್ಡ್ ಹೊತ್ತಿನ ಮಾತ್ರಿ ತಕಂಬ್ದ್ರೊಳ್ಗೆ  ಬೆನ್ನ್ ನೋವ್ ಹಿಂದಾಯ್ತ್.

೨.         ಕೈಯ್ಯಗ್ ಒಂದ್ ಗಾಯ ಆಯಿತ್. ದಿನಾ ನೀರ್ ತಾಗತ್ ಅಲ್ದಾ.. ಎಂತ ಹಚ್ರೂ ಹಿಂದಾತಿಲ್ಲಪ

 

ಲಾಟ್ ಬಿಡು = ಸುಳ್ಳು ಹೇಳು, ಬೊಗಳೆ ಬಿಡು

ಬಳಕೆ

೧.         ಅಂವನ್ ಮಾತ್ ನಂಬ್ಕಡ್ರ್ ಸೈ. ಬರೀ ಲಾಟ್ ಬಿಡ್ತ

೨.         ನೀ ಲಾಟ್ ಬಿಡುದ್ ಯಾರತ್ರ. ನಂಗ್ ನಿನ್ನ್ ದಗಲ್ಬಾಜಿ ಗೊತ್ತಿಲ್ಲ ಅಂದೇಳಿ ಮಾಡಿದ್ಯಾ?

 


ಬುದ್ಧಿವಂತ್ರ್ ಜಿಲ್ಲೆ ಅಂದೇಳಿ ಕರ್ಸ್‌ಕಂತಿದ್ದ ಮಂಗ್ಳೂರಿಗೆ ಆದ್ದಾರೂ ಎಂಥದ್? ಇದ್ ಬುದ್ಧಿ ಕಡ್ಮಿ ಆದ್ದಲ್ಲ. ಕಲ್ತದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್ ಅಂಬಂಗೆ ಆಡ್ತ್ರಲಾ ಇವ್ರಿಗೆಲ್ಲ ಎಂಥ ಹೇಳುದ್ ಹೇಳಿ. ಅದೆಂತದೋ ಮತಾಂತರ ಅಂದೇಲಿ ಶುರುವಾದ ಈ ಗಲಾಟಿ ಎಲ್ಲಿಗ್ ಹೋಯ್ ಮುಟ್ಟುತ್ತೋ ಆ ದೇವ್ರೇ ಬಲ್ಲ. ಬೆಂಕಿ ಇಲ್ದೆ ಹೊಗಿ ಏಳುದಿಲ್ಲ. ಫಾರಿನ್ನಿಂದ ದುಡ್ ಬತ್ತಂಬ್ರ್, ದುಡ್ಡಿನ್ ಆಶಿ ತೋರ್ಸಿ ಮರ್ಲ್ ಮಾಡ್ತ್ರಂಬ್ರ್, ಕಾಯ್ಲಿ ಗುಣ ಮಾಡ್ತೆ ಅಂದೇಳಿ ಮಂಡಿ ಹಾಳ್ಮಾಡ್ತ್ರ್ ಅಂಬ್ರ್…ಹೀಂಗೆ ಸುಮಾರ್ ವರ್ಷದಿಂದ್ಲೂ ಗುಸುಗುಸು ಅಂದೇಳಿ ಎಲ್ಲಾ ಮಾತಡ್ಕಂತಿದ್ರ್. ಅದು ಸತ್ಯವೋ ಸುಳ್ಳೋ ಆ ಮಾತ್ ಬದಿಗಿರ್ಲಿ. ಹಾಂಗಂದೇಳಿ ಇವ್ರ್ ಇಗರ್ಜಿ ಮೇಲೆಲ್ಲಾ ಮುರ್ಕಂಡ್ ಬಿದ್ದದ್ ಸಮ್ನಾ? ಎಂತದೇ ಇದ್ರೂ ಅದನ್ನ್ ಕೇಂಬುಕೆ ಒಂದ್ ಕಾನೂನ್, ರೀತಿ-ನೀತಿ ಅಂದೇಳಿ ಇರತ್ತಲ್ದಾ? ಹೀಂಗೆಲ್ಲ ನೆಡಿತಾ ಇತ್ತ್ ಅಂದೇಳಿ ಸರ್ಕಾರದಿಂದ್ಲೇ ತನ್ಕಿ ಮಾಡುಕ್ ಒತ್ತಾಯ ಮಾಡ್ಲಕ್ಕಿದ್ದಿತ್ ಅಲ್ದ. ಒಂದ್ ವೇಳೆ ಹಾಂಗೆಲ್ಲ ನೆಡಿತಿದ್ದದ್ ಹೌದೇ ಅಂತಾರೆ ಅದಕ್ ಸಂಬಂಧಪಟ್ಟರನ್ ಹಿಡ್ದ್ ಜೈಲಿಗೆ ಹಾಕ್ಲಕ್ಕಿದ್ದಿತಲ್ದಾ? ಅದ್ ಬಿಟ್ ಮುಂದ್‌ವರುದ್ ಬ್ಯಾಡ ಇದ್ದಿತಾ ಅಂದೇಳಿ. ಇವ್ರ್ ಇಗರ್ಜಿಗೆ ನುಗ್ರ್, ದಾಳಿ ಮಾಡ್ರ್ ಅಂದೇಳಿ ಅವ್ರ್ ಇವ್ರ್ ಮೇಲ್ ತಿರ್ಗಿ ಬಿದ್ದ್, ಕತ್ತಿ ಚೂರಿಯಗೆಲ್ಲ ಹೊಡ್ಕಂಡ್ ಬಡ್ಕಂಡ್ ಇಷ್ಟೆಲ್ಲಾ ರಗ್ಳಿ ರಾಮಾಯಣ ಆಯ್ತ್ ಕಾಣಿ ಈಗ. ಎಲ್ಲದ್ದಕ್ಕೂ ಹೊಡಿ-ಕಡಿ-ಬಡಿ ಅಂತಾ ಆಯ್ಕಂಡ್ರೆ ನೆಮ್ಮದಿಯಗೆ ಬದ್ಕುಕೆ ಎಡಿತ್ತಾ? ಇವ್ರ್ ನಾಕ್ ಜನಿಗ್ ಹೊಡುದ್, ಇವ್ರ್ ಹೊಡ್ದ್ರ್ ಅಂದೇಳಿ ಅವ್ರ್ ಎಂಟ್ ಜನಿನ ಮೇಲ್ ಕೈ ಮಾಡುದ್.. ಹೀಂಗೆ ಮಾಡ್ತಾ ಹೋದ್ರೆ ಅದಕ್ ತಲಿ ಬುಡ ಇತ್ತಾ ಹೇಳಿ ಕಾಂಬ.

 

ಈ ರಾಜ್ಕಾರಣಿಗಳೆಲ್ಲ ಮಾತಾಡುದ್ ಕೇಂಡ್ರೆ ಮೈಎಲ್ಲಾ ಉರಿ ಬತ್ತ್. ಅವ್ರ್ ಇದ್ರಗೆ ತಮ್ಗೆ ಎಲ್ಲ್ ಪಡಾವ್ ಆತ್ತ್ ಕಾಂಬ ಅಂದೇಳಿ, ಆಚಿ ಬದ್ಯಗೆ ಮಗಿನ್ ತೊಡಿ ಚೂಂಟುದೂ ಅವ್ರೆ, ಈಚಿ ಬದ್ಯಗೆ ತೊಟ್ಲ್ ತೂಗ್ದಾಂಗೆ ನಾಟ್ಕ ಮಾಡುದೂ ಅವ್ರೆ. ಅವ್ರ್ ಬ್ಯಾಳಿ ಬೇಯ್ಸ್‌ಕಂಬುಕೆ ಎಂತ ಬೇಕಾರೂ ಮಾಡ್ತ್ರ್, ಹ್ಯಾಂಗ್ ಬೇಕಾರೂ ನಾಲ್ಗಿ ತಿರ್ಸ್‌ತ್ರ್. ಮೊನ್ನೆ ರಾತ್ರಿ ಎನ್‌ಡಿಟಿವಿ ವಾರ್ತೆಯೊಳ್ಗೆ ಕರ್ನಾಟಕದ್ ರಾಜ್ಕಾರ್ಣಿ ಒಬ್ರ್ ಮಾತಾಡ್ತಿದ್ರ್.. ಅವ್ರ್ ಹೇಳದ್ ಎಂತಾ ಗೊತ್ತಿತ? ಇವ್ರ್ ತಿರ್ಗಿ ಬಿದ್ದದ್ ಸಮ್ನೆ. ಇವ್ರ್ ಕೈಕಟ್ಕಂಡ್ ಕೂಕಣ್ಕ್ ಇದ್ದಿತ್ ಅಂದೇಳಿ ನೀವ್ ಹೇಳುದಾ ಹಂಗಾರೆ ಅಂದೇಳಿ ಪ್ರಶ್ನೆ ಕೇಂಬರಿಗೆ ತಿರ್ಗಿ ಕೇಂತಾ ಇದ್ರ್. ಅಕ್ಲ್ ಇದ್ದರ್ಯಾರಾರೂ ಹೀಂಗ್ ಹೇಳ್ಕಿ ಕೊಡ್ತ್ರಾ? ಇವ್ರ್ ಓಟಿಗೋಸ್ಕರ ಎಂತ ಮಾಡುಕೂ ತಯರಿದ್ರಲಾ ಮರಾಯ್ರೆ. ಇಗರ್ಜಿಗೆ ನುಗ್ಗದ್ ತಪ್ಪೇ… ಹೀಂಗ್ ಮಾಡುಕ್ ಆಗ ಇದ್ದಿತ್. ಅದನ್ನ್ ಯಾರೇ ಮಾಡದ್ದಿದ್ರೂ ತಪ್ಪ್ ತಪ್ಪೇ. ಆರೆ ಹಾಂದೇಳಿ ಇವ್ರ್ ತಿರ್ಗಿ ಹೋಡದ್ ಸಮನೇ ಅಂದೇಳಿ ಹೇಳಿ ಜನ್ರನ್ ಎತ್ತಿ ಕಟ್ಟಿ ಮತ್ತಷ್ಟ್ ಗಲಾಟಿ ಆಪು ಹಾಂಗ್ ಮಾಡ್ತ್ರಲಾ… ಇವ್ರನ್ನೆಲ್ಲಾ ಎಂತ ಮಾಡ್ಕ್ ಹೇಳಿ. ಇಂತ ವಿಷ್ಯದಗೂ ಕೊಳ್ಕಟಿ ರಾಜ್ಕೀಯ ಮಾಡು ಇವ್ರನ್ ಕಂಡ್ರೆ, ಇವ್ರಿಗ್ ಓಟ್ ಹಾಕಿ ಆರ್ಸದ್ದಕ್ಕೆ ನೆಗಾಡ್ಕೋ ಮರ್ಕಕೋ ಗೊತ್ತಾತಿಲ್ಲ.

 

ಅಸ್ಲಿಗೆ ನಮ್ ಅಕ್ಲ್ ನಮ್ ಕೈಲ್ ಇರ್ಕ್. ಯಾವ್ ಧರ್ಮವೇ ಆಯ್ಲಿ, ನಮ್ದ್ ಮೇಲೆ ಬೇರೆಯರದ್ದೆಲ್ಲ ಬುರ್ನಾಸ್ ಅಂತ್ ಹೇಳುದಿಲ್ಲ. ಯಾವ ಧರ್ಮದ ಪುಸ್ತಕದಗೂ ಹಾಂಗಂತೇಳಿ ಇರುದಿಲ್ಲ. ಅವ್ರವ್ರ್ ಮನ್ಸಂಗೆ ಅವ್ರವ್ರ್ ಧರ್ಮ ಜಾತಿ ದೊಡ್ದ್ ಅಂದಿರತ್ತ್. ಇರ್ಲಿ… ಅದು ನಮ್ ಮನ್ಸೊಳ್ಗೇ ಇರ್ಲಿ, ಮನೆಯೊಳ್ಗೆ ಇರ್ಲಿ. ಹೀಂಗೆಲ್ಲ ಹೊರ್ಗ್ ಬಪ್ಪುಕಾಗ. ಇದನ್ನ ಎಲ್ಲರೂ ತಿಳ್ಕಂಡ್ರೆ ಈ ಗೌಜ್-ಗಲಾಟಿ ಪಂಚತ್ಗಿ ಎಲ್ಲಿರ್ತಿತ್ತ್. ಇದೆಲ್ಲಾ ನಾವ್ ನಾವೇ ಮಾಡ್ಕಂಡದ್, ಈಗ ನಾವ್ ನಾವೇ ಅನ್ಭಯಿಸ್ಕ್. ಶಾಂತಿ, ನೆಮ್ಮದಿ, ಒಗ್ಗಟ್ಟು, ಪ್ರೀತಿ ಇದನ್ನೆಲ್ಲಾ ಹೇಳುವ ಬೋಧ್ನಿ ಎಲ್ಲಾ ಪುಕ್ಳಿ ಅಡಿ ಹಾಯ್ಕಂಡ್, ಒಬ್ರ್ ಮೇಲ್ ಒಬ್ರ್ ಹಲ್ಲ್ ಮಸೀತಾ ಕೂಕಂಡ್ರೆ ನಾಳಿಗೆ ಬರೀ ಧರ್ಮ ಮಾತ್ರ ಉಳಿತ್ತ್ !! ಅದನ್ನ್ ಆಚರ್ಣಿ ಮಾಡ್ಕಾದರೆಲ್ಲಾ ಹೀಂಗೆ ಬಡ್ದಾಡ್ಕಂಡ್ ಸತ್ತ್ ಹೋಯಿ ಆಯಿರತ್ತಲೆ!!! ಇಷ್ಟ್ ಸಣ್ಣ್ ವಿಷ್ಯ ಅರ್ಥ ಮಾಡ್ಕಂಬ್ಕೆ ಆಗ್ದಿದ್ರ್ ಮೇಲೆ ಏನ್ ಬುದ್ಧಿವಂತ್ಕಿ ಇದ್ರೆ ಏನ್ ಬಂತ್ ಹೇಳಿ. ನಾಮ್ ಜಿಲ್ಲೆ ಬುದ್ಧಿವಂತ್ರ್ ಜಿಲ್ಲೆ ಅಂದ್ರೆ ಯಾರಾರೂ ನೆಗಾಡುಕಿದ್ರ್ ಅಷ್ಟೇ


ಮೊನ್ನೆ ಶನಿವಾರ ರಾತ್ರಿ ಅಮೃತೇಶ್ವರಿ ಮೇಳ ಮತ್ತೆ ಅತಿಥಿ ಕಲಾವಿದ್ರೆಲ್ಲ ಸೇರಿ ವೀರ ವೃಷಸೇನ, ನಾಗಶ್ರೀ ಆಡಿದ್ರ್. ಕಾಂಬುಕೆ ನಾನೂ ಹೋಯಿದ್ದೆ. ಹೋದನಿಗೆ ಮತ್ತೆರ್ಡ್ ಒಳ್ಳೆ ಆಟದ್ ಸುದ್ದಿ ಸಿಕ್ತ್. ಅದನ್ನ್ ನಿಮ್ಗ್ ಹೇಳ್ವ ಅಂದೇಳಿ…

ಇತ್ತಿತ್ಲಾಯಿ ಹೊಸ ಆಟ ಆಡ್ರೆ ಬೆಂಗ್ಳೂರಗೆ ಜನವೇ ಬತ್ತಿಲ್ಲ ಅಂದೇಳಿ ಮೊನ್ನೆ ಮ್ಯಾಳ್ದರ್ ಒಬ್ರ್ ಹೇಳ್ತಿದ್ರ್. ಹಾಂಗಾಯ್ ಎಲ್ಲಾ ಮ್ಯಾಳ್ದರೂ ಪೌರಾಣಿಕ ಪ್ರಸಂಗವೇ ಹೆಚ್ಚ್ ಹೆಚ್ಚ್ ಆಡುಕ್ ಶುರು ಮಾಡಿರ್. ಇದಾದ್ರೆ ಪೌರಾಣಿಕ ಪ್ರಸಂಗ ಅಂದ್ರೆ ಖುಷಿ ಪಡುವರಿಗೆ ಒಳ್ಳೆ ಸುದ್ದಿ.

 

ಸಪ್ಟಂಬರ್ 26ನೇ ತಾರೀಕ್ ರಾತ್ರಿ ಹತ್ತೂವರಿಗೆ ರವೀಂದ್ರ ಕಲಾಕ್ಷೇತ್ರದಗೆ ಸಾಲಿಗ್ರಾಮ ಮ್ಯಾಳದವ್ರ್ ಬೆಂಗ್ಳೂರಗೆ ಮೊದಲ್ನೇ ಪ್ರಯೋಗ ಆಯಿ ಶ್ರೀ ಸೂರಾಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಡ್ತ್ರ್ ಅಂಬ್ರ್. ಇದನ್ನ್ ಬರ್ದದ್ ಪತ್ರಕರ್ತ ಕೆ. ಬಸವರಾಜ್ ಶೆಟ್ಟಿಗಾರ್.

ಆವತ್ತ್ ವಿಶೇಷ ಅಂದ್ರೆ- ರಾತ್ರಿ ಬೆಳ್ಗಾಪದ್ರೊಳ್ಗೆ ಒಟ್ಟ್ ನೂರಕ್ಕೂ ಹೆಚ್ಚ್ ವೇಷ ರಂಗಸ್ಥಳಕ್ ಬತ್ತ್ ಅಂಬ್ರ್. ಅದೂ ಅಲ್ದೇ ಅಣಿ ಕಟ್ಟುವರಿಂದ ಅಣಿಕಟ್ಕಂಡ್ ಕುಣ್ತಾ, ಮತ್ತೆ ಭೂತಕೋಲದ ಬಾರಿ ಇತ್ತಂಬ್ರ್. ಅಣಿವೇಷದಗೆ ಕ್ಷೇತ್ರಪಾಲ, ಬೊಬ್ಬರ್ಯ, ವೀರಭದ್ರ, ಕಲ್ಲುಕುಟಿಕ, ಪಂಜುರ್ಲಿ, ಕಾಳಿ, ಕಾಳಭೈರವ, ಕುಮಾರಸ್ವಾಮಿ ಎಲ್ಲಾ ಬತ್ರಂಬ್ರ್.

 

ಕ್ಷೇತ್ರ ಮಾಹಾತ್ಮೆ ಕತಿಯೊಳ್ಗೇ ಎಂತೆಲ್ಲಾ ಇತ್ತ್ ಅಂದ್ರೆ

ಕೃಷಿಕ ಕಾಳ ಬ್ರಹ್ಮರಾಕ್ಷಸ ಹ್ಯಾಂಗಾದ್?

ಮೂರ್ ಶಿವಲಿಂಗ ಭೂಲೋಕಕ್ ತಂದದ್ ಯಾರ್?

            ಸೂರಾಲಿಗೆ ಕ್ರೋಧಾಸುರ, ಮದಾಸುರ, ಸೂರಕ ಸೂರಾಲಿಗೆ ಬಂದದ್ ಯಾಕೆ?

ನೀಲಾಂಬರಿನ ಮದಿ ಆದ್ದ್ ಯಾರ್?

ಮಹಾಲಿಂಗೇಶ್ವರನ ಭಂಟ ಕಣ್ಣಪ್ಪ ಸ್ವಾಮಿ ರಂಗ ಪ್ರವೇಶ ಹ್ಯಾಂಗೆ?

ವೀರಭದ್ರ, ಪದೆಮಠ, ಸುರಾಲು ಜೆಡ್ಡಿನಲ್ಲಿ ನಿಂತದ್ ಹ್ಯಾಂಗೆ?

ರಾಜೇಂದ್ರ ತೋಳಾರ ಬ್ರಹ್ಮರಾಕ್ಷಸನ್ನ್ ಕೊಂದದ್ದ್ ಹ್ಯಾಂಗೆ?

ಕುಡುಬಿ ಜನಾಂದದವ್ರ್ ಸೂರಾಲಿಗೆ ಎಲ್ಲಿಂದ ಬಂದದ್?

ಮೊಗವೀರ ಪೇಟೆ ಆದ್ದ್ ಹ್ಯಾಂಗೆ?

ಸೂರಾಲನ್ ಹಾಳ್ ಮಾಡುಕ್ ಬಂದ ಸೂರಕನ್ನ್ ಕೊಂದದ್ದು ಯಾರ್?

ಶಿವ-ಪಾರ್ವತಿ ತಾಂಡವ ನೃತ್ಯ ಮತ್ತೆ ಆರ್ ಜನ ಸ್ತ್ರೀವೇಷದರಿಂದ ಸೂರಾಲನ್ನ ಹೊಗಳಿ ಹಾಡುವ ನೃತ್ಯ

 

ಹೀಂಗೆ ಪ್ರಸಂಗ ಭಾರೀ ಲಾಯ್ಕ್ ಇತ್ತಂಬ್ರ್.

 

ಮಾರ್‌ನೇ ದಿನ ಅಂದ್ರೆ 27ನೇ ತಾರೀಕ್ ಶನಿವಾರ ಇನ್ನೊಂದ್ ಭರ್ಜರಿ ಆಟ ಇತ್ತ್. ಸಾಲಿಗ್ರಾಮ ಮ್ಯಾಳ್ದರೊಟ್ಟಿಗೆ ಹೆಸ್ರ್‌ವಾ ಸಿ ಅತಿಥಿ ಕಲಾವಿದ್ರೆಲ್ಲ ಇದ್ರ್. ಪ್ರಸಂಗ ಕಾರ್ತವೀರ್ಯ- ಕಾರ್ತವೀರ್ಯ- ಕಾರ್ತವೀರ್ಯ

 

ಅತಿಥಿ ಕಲಾವಿದ್ರ್ ಯಾರೆಲ್ಲ ಕೇಂಡ್ರ್ಯಾ?

ಚಿಟ್ಟಾಣಿ , ಕೊಂಡದಕುಳಿ, ಸುಬ್ರಹ್ಮಣ್ಯ ಚಿಟ್ಟಾಣಿ, ಹಡಿನಬಾಳ, ತೋಟಿಮನೆ, ಚಪ್ಪರಮನೆ, ಕೊಳಗಿ

 

ಯಾರ ಕಾರ್ತವೀರ್ಯನಿಗೆ ಯಾರದ್ ರಾವಣ ಅಂದೇಳಿ ಆವತ್ ಆಟದಗೇ ಬಂದ್ ಕಾಣ್ಕ್ ಅಂಬ್ರ್.

 

ಇವತ್ತೇ ಗುರ್ತ್ ಹಾಂಯ್ಕಣಿ. ಆವತ್ ಬೆಂಗ್ಳೂರಗೆ ಇದ್ರೆ ತಪ್‌ದೇ ಆಟಕ್ ಬನಿ. ನಾ ಹ್ಯಾಂಗಿದ್ರೂ ಬಂದಿರ್ತನಲೆ.

 


ಮೊನ್ನೆ ನನ್ ಫ್ರೆಂಡ್ ಒಬ್ಬ ಕಮಲಶಿಲೆಗೆ ಹೊಯಿ ಬಂದಿದ್ದ. ಅಲ್ಲಿನ್ ಗುಹೆ ಕಾಣ್ಕ್ ಅಂದೇಳಿಯೇ ಅಂವ ಹೋದ್ದ್. ಹೋಯಿ ಬಂದನೆ ಗುಹೆ ಕಂಡ್ಕಂಡ್ ಬಂದ್ ಕತಿಯೆಲ್ಲ ಹೇಳ್ತಿದ್ದ. ಸುಮಾರ್ ಫೊಟ ಎಲ್ಲಾ ತೆಗ್ದಿದ ಅಂಬ್ರ್. ಆ ಗುಹೆ ಭಾರಿ ಲಾಯ್ಕ್ ಇತ್ತ್ ಮರಾಯ್ರೆ. ನಾನ್ ಗುಹೆ ಕಾಂಬುಕ್ ಹೋಯಿ ಸುಮಾರ್ ವರ್ಷ ಆಯ್ತ್. ಆರೆ ಸುಮಾರ್ ದೊಡ್ಡ್ ಗುಹೆ. ಗುಹೆ ಒಳ್ಗೆ ಲೈಟ್ ಹಿಡ್ಕಂಡ್ ಹೋರೆ ಸುಮಾರ್ ದೂರ್ ಹೋಯ್ಲಕ್. ಅಂವ ಹೇಳದ್ದೆಲ್ಲ ಕೇಂಡ್ ಮೇಲೆ ನಾನೂ ಅವ್ನೊಟ್ಟಿಗ್ ಹೋಯ್ಲಕಿದ್ದಿತ್ ಅಂತ್ ಅನ್‌ಸ್ತ್. ಇರ್ಲಿ ಕಾಂಬ.. ಮತ್ತೇಗ್ಳಿಕಾರೂ ಹೋರ್ ಸೈ ಅಂದೇಳಿ ಸಮ್ಧಾನ ಮಾಡ್ಕಂಡ್, ಅವ್ನ್ ಹತ್ರ ಫೊಟ ಎಲ್ಲಾ ಕಳ್ಸುಕ್ ಹೇಳಿದೆ. ಅಂವ ಕಳ್ಸ್ರ್ ಮೇಲ್ ಬ್ಲಾಗಗೂ ಹಾಕ್ತೆ. ನೀವೂ ಕಾಣ್ಲಕ್ ನಮ್ಮೂರಿನ ಗುಹೆ.

 

ಹೀಂಗೆ ಗುಹೆ ಸುದ್ದಿ ಮಾತಾಡ್ತಿಪ್ಪತಿಗೆ ಒಂದ್ ನೆನ್ಪ್ ಬಂತ್ ಕಾಣಿ. ಆಗ್ಳಿಕೆ ನಮ್ಮೂರಿಗೆ ಪಾರ್ವತಮ್ಮ ಅಂದೇಳಿ ಒಬ್ರ್ ಹಳಿಯರ್ ಬತ್ತಿದ್ರ್. ಮನೆಯಗೆ ಮಾತಾಡ್ತಿದ್ದದ್ ಎಲ್ಲಾ ಕೆಮಿ ಮೇಲೆ ಬಿದ್ದ್ ಪ್ರಕಾರ, ಸುಮಾರ್ ಮೊದ್ಲ್ ಅವ್ರಿಗೆ ಎಂತದೋ ಒಂದ್ ಕಷ್ಟ ಬಂದ್ ಬದ್ಕಿನ್ ಮೇಲೆ ವೈರಾಗ್ಯ ಹುಟ್ಟಿತ್ತ್ ಅಂಬ್ರ್. ಒಂದ್ ನಮನಿ ಸನ್ಯಾಸಿ ಕಣಗೆ ಇದ್ದಿರ್. ಅವ್ರ್ ಇದೇ ಕಂಮ್ರಶಿಲೆ ಗುಹೆಯೊಳ್ಗೆ ಸುಮಾರ್ ಸಮ್ಯ ಕೂಕಂಡ್ ತಪಸ್ಸೆಲ್ಲಾ ಮಾಡಿರಂಬ್ರ್. ಆಗ್ಳಿಕೆ ಹುಲಿಯೆಲ್ಲ ಗುಹೆಯೊಳ್ಗೇ ಓಡಾಡ್ತ ಇರ್ತಿತ್. ಆರೆ ಅದ್ ದೇವ್ರ್ ಹುಲಿ ಆಪುಕೊಯಿ ಯಾರಿಗೂ ಏನೂ ಉಪದ್ರ ಮಾಡ್ತಿರ್‌ಲಿಲ್ಲ ಅಂಬ್ರಪ್ಪ. ಹಿಂದಿಂದೆಲ್ಲ ನಾವ್ ಎಲ್ಲ ಕಂಡಿತ್ ಅಲ್ದಾ? ಇದ್ರೂ ಇದ್ದಿಕ್. ಆರೆ ಈಗ ನೆನ್ಪಾಪ್ದ್ ಅಂದ್ರೆ, ಬಾಯ್ಕಳ್ಕಂದ್ ಕೂಕಂಡ್ ಅರ್ಧ ಪುಕ್, ಅರ್ಧ ಆಶ್ಚರ್ಯದಗೆ ಈ ಕತಿ ಎಲ್ಲಾ ಕೇಂತ ಕೂಕಂತಿದ್ದದ್.

 

ಹುಲಿ ಅಂದ್ರ್‌ಕೂಳೆ ಮತ್ತೊಂದ್ ನೆನ್ಪ್ ಬತ್ತ್ ಕಾಣಿ. ಪ್ರತಿವರ್ಷ ಕಮಲಶಿಲೆ ಹಬ್ಬದ್ ಸುರಿಗೆ, ಹಬ್ಬಕ್ ಸ್ವಲ್ಪ ದಿನ ಮೊದ್ಲ್ ಕಂಮ್ರಶಿಲೆ ಪಾರಿ ಮೇಲೆ ರಾತ್ರಿ ಹೊತ್ತಿಗೆ ಹುಲಿ ಕೂಗತ್ತಂಬ್ರ್. ಅದ್ ದೇವಿಯ ವಾಹನ ಹುಲಿಯೇ ಅಂಬ್ರ್. ಹಾಂಗ್ ಕೂಗುದ್ ಎಂತಕೆ ಕೇಂಡ್ರ್ಯಾ? ಹಬ್ಬ ಬಂತ್, ಎಲ್ಲ ಹಬ್ಬದ್ ತಯಾರಿಗೆ ದೇವ್‌ಸ್ಥಾನಕ್ ಬನಿ ಅಂದೇಳಿ ಹುಲಿ ಹೇಳ್ಕಿ ಮಾಡುದಂಬ್ರ್. ಹಿಂದೆಲ್ಲ ಹಬ್ಬದ್ ಹೇಳ್ಕಿಗೆ ಈ ಬ್ಯಾನರ್, ಕಾಗ್ದ್ ಎಲ್ಲ ಎಲ್ಲಿದ್ದಿತ್. ಹಾಂಗಾಯ್ ಹುಲಿದೇ ಹೇಳ್ಕಿ ಅಂಬ್ರ್. ಈಗ್ಳೂ ಹಬ್ಬದ್ ಸುರಿಗೆ ಹುಲಿ ಕೂಗಿ ಹೇಳ್ಕಿ ಮಾಡತ್ ಅಂತ್ರಪ್ಪ. ನಂಗ್ ಒಂದ್ಸಲವೂ ಕೇಣಲ್ಲ. ಆದ್ರೆ ಕೇಂಡರಿದ್ರಂಬ್ರಪ್ಪ. ಅಂದ್‌ಹಾಂಗೆ ಕಂಮ್ರಶಿಲೆ ಗುಹೆ ಬಗ್ಗೆ ಸುಮಾರ್ ಒಂದ್ ವರ್ಷದ್ ಹಿಂದೆ ಉದಯ ಟಿ.ವಿ.ಯಗೆ ರಾತ್ರಿ ಹತ್ ಗಂಟಿಗೆ ನಂಬಿದ್ರೆ ನಂಬಿಯಗೆ ತೋರ್ಸಿರ್. ನೀವ್ ಕಂಡಿರ್ಯಾ? ಕಾಣ್ದಿರೆ ಒಂದ್ಸಲ ಹೋಯ್ ಕಣ್ಕಂಡ್ ಬನಿ. ಒಳ್ಳೆ ಜಾಗ.


ಅಂಬ್ಡ್, ಅಂಬಡ್ = ಜೋಡಿ, ಅವಳಿ

ಬಳಕೆ

  1. ಅವ್ರಿಬ್ರ್ರೂ ಅಂಬ್ಡ್ ಮಕ್ಳ್ ಅಂಬ್ರ್. ಕಾಂಬುಕೆ ಒಂದೇ ನಮ್ನಿ ಇದ್ರ್ ಕಾಣಿ
  2. ಅಂಬ್ಡ್ ಬಾಳೆಹಣ್ ತಿಂದ್ರೆ ಅಂಬ್ಡ್ ಮಕ್ಳ್ ಹುಟ್ತ್ರ್ ಅಂಬ್ರಲಾ ಹೌದಾ?

 ಹತ್ತ / ಹತ್ತಾ = ಸಂಪೂರ್ಣ, ಪೂರಾ

ಬಳಕೆ

  1. ಹರಿಯಗ್ ನೀರ್ ಹತ್ತಾ ಖಾಲಿ ಮಾಡ್ಬೆಡ ನಂದ್ ಇನ್ನೂ ಮಿಂದ್ ಆಯಲ್ಲ
  2. ಯಾರಾರೂ ಪಾಪ್ದರ್ ಸಿಕ್ರೆ ಅಂವ ಹತ್ತ ಬೋಳ್ಸಿ ಬಿಡ್ತ

ಪತ್ತಿ = ಆಹಾರ

ಇದು ಬಹುಶಃ ಪಥ್ಯ ಶಬ್ದದಿಂದ ಬಂದಿರಬಹುದು. ಪಥ್ಯ ಅಂದರೆ ನಿತ್ಯಗಟ್ಟಳೆಯ ಆಹಾರ ಅನ್ನುವ ಅರ್ಥ ಕೂಡಾ ಇದೆ

ಬಳಕೆ

  1. ಎಂತಾ ಸಪೂರ ಆಯಿದೆ ಮರಾಯಾ? ಸಮ ಪತ್ತಿ ತಿಂತಿಲ್ಯಾ?

 

ಹುಣ್ಸಿಹಣ್ = ಜಂಬ

ಬಳಕೆ

  1. ಅವ್ನಿಗ್ ಕಯ್ಯಗ್ ಕಾಸ್ ಆರ್ ಮೇಲೆ ಮಸ್ತ್ ಹುಣ್ಸಿಹಣ್ ತೋರ್ಸ್‌ತ. ನಾವೆಲ್ಲ ಕಣ್ಣಿಗ್ ತೋರುದೇ ಇಲ್ಲ
  2. ನಿನ್ ಹುಣ್ಸಿಹಣ್ ಎಂತ ಇದ್ರೂ ಮನೆಯಗೆ ಇಟ್ಕೋ. ಇಲ್ಲೆಲ್ಲ ತೋರ್ಸುಕೆ ಹೋಯ್‌ಬೆಡ

 

 ಚೊಣ್ಕಿ = ತೊಣಚಿ, ಮೈಗೆ ತಾಗಿದ್ರೆ ತುರಿಕೆ ಉಂಟುಮಾಡುವ ಒಂದು ಜಾತಿಯ ಗಿಡ.

ಬಳಕೆ

  1. ಎಂತಕೆ ಒಳ್ಳೇ ಚೊಣ್ಕಿ ತಾಗ್ದರ್ ಕಣಗ್ ಆಡ್ತೆ.

 

 ಧಾತ್ ತಪ್ಪು = ಎಚ್ಚರ ತಪ್ಪು, ಪ್ರಜ್ಞೆ ತಪ್ಪು ಧಾತು ಅನ್ನುವ ಪದ ಶಬ್ದಕೋಶದಲ್ಲಿ ಇದೆಯಾದರೂ ಪ್ರಜ್ಞೆ ಅನ್ನುವ ಅರ್ಥದಲ್ಲಿ ಇದರ ಬಳಕೆ ನಮ್ಮ ಕುಂದಾಪ್ರ ಬದಿ ಬಿಟ್ಟು ಬೇರೆ ಕಡೆ ಹೆಚ್ಚಾಗಿ ಇಲ್ಲ ಅಂತ ನನ್ನ ಭಾವನೆ.

ಬಳಕೆ

  1. ಅವ್ರ್ ಮೊನ್ನೆ ಕಾಂತ ಕಾಂತ ತಲಿ ತಿರ್ಗಿ ಬಿದ್ದ್, ಧಾತ್ ತಪ್ಪಿ ಹೋದ್ದಲ್ದೇ
  2. ಅಂವ ನಿದ್ರಿ ಹೊಡುದ್ ಅಂದ್ರೆ…ಮಲ್ಕಂಡನಿಗೆ ಇತ್ತಿನ್ ಧಾತ್ ಇಲ್ಲ.

 

 ಬೆಳ್ಚುದು = ತಡಕಾಡು, ತಡವು, ಕುರುಡನಂತೆ ಹುಡುಕಾಡು

ಬಳಕೆ

  1. ಕತ್ಲಿಯಗೆ ಎಂತ ಬೆಳ್ಚುದ್ ಮಾರಾಯ, ಬೆಟ್ರಿಯಾರೂ ಹಿಡ್ಕಂಡ್ ಕಂಬುಕಾಗ್ದಾ?
  2. ಪೆಟ್ಗಿ ಒಳ್ಗೆ ಎಂತ ಬೆಳ್ಚತಿದ್ದೆ.. ಅಲ್ಲೆಂತ ಗಂಟ್ ಹುಗ್ಸಿಟ್ಟಿದ್ದಿಯಾ?

 ಹಸರ್ಸ್‌ಕಂಡ್ ಕೂಕಂಬ್ದ್ = ಕಾಲನ್ನು ಅಗಲಿಸಿ ಕುಳಿತುಕೊಳ್ಳು. ಹಸರಿಸು ಅನ್ನುವ ಪದಕ್ಕೆ ಹರಡು, ವ್ಯಾಪಿಸು, ಹಬ್ಬಿಸು, ವಿಶಾಲ ಅನ್ನುವ ಅರ್ಥ ಇದೆ.

ಬಳಕೆ

  1. ಅದೆಂತ ಹಸರ್ಸ್‌ಕಂಡ್ ಕೂಕಂಡದ್. ಕಾಲ್ ಮಡ್ಚ್‌ಕಂಡ್ ಕೂಕೊ ಕಾಂಬ

 

ಕಡ್ಗಿ = ಎಳೆಯ ಹಲಸಿನಕಾಯಿ, ಪಲ್ಯ ಸಾಂಬಾರ್ ಮಾಡಲು ಬಳಸುವಂತಹದ್ದು

 

 


ನಮ್ಮೂರ್‌ನರ್ ಒಬ್ರದ್ದ್ ಬಹುಮುಖಿ ಅಂದೇಳಿ ಬ್ಲಾಗ್ ಇತ್ತ್. ಇವತ್ ಹೀಂಗೇ ಬ್ಲಾಗ್ ಹುಡ್ಕತಾ ಇಪ್ಪತ್ತಿಗೆ ಅದ್ ಕಣ್ಣಿಗ್ ಬಿತ್. ವಂಡಾರ್ ಕಂಬ್ಳ್‌ದ್ ಬಗ್ಗೆ ಒಂದ್ ಒಳ್ಳೆ ಲೇಖನ ಬರ್ದಿರ್. ವಂಡಾರು ಕಂಬಳ ಮತ್ತು ನರಬಲಿ… ಅಂದೇಳಿ.

ಪುರ್ಸೊತ್ತ್ ಮಾದ್ಕಂಡ್ ಒಂದ್ ಗಳ್ಗಿ ಅವ್ರ್ ಬ್ಲಾಗ್ ಬದಿಗೆ ಹೋಯಿ ಬನಿ.

 

ಹಾಂಗೇ ಮತ್ತೊಂದ್ ಬ್ಲಾಗ್ ಇತ್ತ್. ಅವ್ರೂ ನಮ್ಮೂರ್ ಬದಿಯವ್ರೆ. ಬ್ಲಾಗ್ ಹೆಸ್ರ್ ಪಾರಿಜಾತ.

ಅವ್ರ್ ಬರುದ್ ಅಪ್ರೂಪ ಆರೂ ಬರದ್ದೆಲ್ಲ ಒಳ್ಳೆ ಅಪ್ರೂಪದ್ದೇ….

ಅವ್ರ್ ಬರ್ದ್ ಒಂದ್ ಚವಣೆ ಪ್ರಸಂಗ!! ಲಾಯ್ಕ್ ಇತ್ತ್ ಓದಿ ಕಾಣಿ

 

ಮತ್ತ್ ನಮ್ಮ್ ಜಗ್ಲಿ ಭಾಗ್ವತ್ರ್ ಕುಂದಾಪ್ರ ಕನ್ನಡ ಕ್ಲಾಸ್ ತಕಂಬ್ದೇ ನಿಲ್ಸಿ ಬಿಟ್ಟಿರಪ್ಪ. ಸುಮಾರ್ ದಿನ ಆಯ್ತ್ ಅವ್ರ್ ಕುಂದಾಪ್ರ ಕನ್ನಡದ್ ಕ್ಲಾಸಿಗೆ ಹಾಂಟ್ ಹಾಕು ಶುರು ಮಾಡಿ. ಭಾಗ್ವತ್ರೆ…. ಮಕ್ಳ್ ಹಾಂಟ್ ಹಾಕ್ರೆ ಅಡ್ಡಿಲ್ಲ. ಮಾಷ್ಟ್ರೆಲ್ಲಾ ಹಾಂಗೆಲ್ಲ ಹಾಂಟ್ ಹಾಕುವಂಗ್ ಇಲ್ಲ ಗೊತ್ತಾಯ್ತಾ… 🙂