ನೀ ಅಮೃತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ…..ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ.

Posted: ಜುಲೈ 29, 2011 in anaka, ಅಣಕ, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ, ಗಮ್ಮತ್ ಇತ್ತ್ ಕಾಣಿ...

ನೀ ಅಮ್ರತಧಾರೆ ..ಕೋಟಿ ಜನುಮ ಜೊತೆಗಾತಿ ಧಾಟಿಯಂಗೆ ಓದಿ……

ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ
ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ

ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ
ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ

ನೀ ಎಡಿಯ ಅಂದರೆ ನಾ… ಹ್ಯಾಂಗೆ ತಿಂಬುದು?

ನಾ ಊರಿಗ್ ಹೋರೆ… ಕಂಡಿತಾ ಸಿಕ್ರೆ ತಕಂಬತ್ತೆ
ನಾ ಹೋಪು ಸೂರಿಗೆ , ಊರಲ್ ಬಾರಿ ಮಳಿಗಾಲ
ನಂಗ್ ಸಿಕ್‌ದೇ ಹೋರೇ ನಾ..ಎಂತಾ ಮಾಡುದು?

ನೀ ನಂಬದಿಗ್ ಹೋರೆ

ನೆನ್ಪಿತ್ತಾ ತೆಂಗಿನ್ ತ್ವಾಟ
ನೆನ್ಪಿತ್ತಾ ಬಿಸಿ ಗಂಜಿ ಊಟ
ನೆನ್ಪಿತ್ತ…ಮುಚ್ಚಿಇಟ್ಕನ್ದ್ ತಿಂದ ಆ ಮಾಯಿನ್ ಕಾಯಿ ಹುಳಿ …

ನೆನಪಿತ್ತ ಕೊಟ್ಟೆ ಕಡುಬು,
ನೆನಪಿತ್ತ ಬೇಯ್ಸಿದ ಗೆಣಗು,
ನೆನಪಿತ್ತ ಇಂಬನ ಹಣ್ಣು ತಿಂದು…. ಗಂಟ್ಲಂಗ್ ಸಿಕ್ಕ ಬಿದ್ದುದು

ನಿಂಗ್ ನೆನ್ಪಿಲ್ದಿರೆ …ನಾ ನೆನ್‌ಪ್ ಮಾಡುದಾ?

ನೆನಪಿತ್ತ ಮಾಯಿನ್‌ಕಾಯ್ ರಸ..
ನೆನಪಿತ್ತ ಬಿಂಬ್ಲ ಹಣ್ಣಿನ ಹುಳಿ
ನೆನ್ಪಿತ್ತ ಹುಣ್ಸಿ ಹಣ್ಣಿನ ಆ ಹುಳಿಯ ಸವಿ

ನೆನ್ಪಿತ್ತ ಅಮ್ಟೆಕಾಯ್ ಗೋರ್ಟು
ನೆನ್ಪಿತ್ತಾ ಛಾಂಪಿ ಹಣ್ಣ್ ಒಗರು
ನೆನ್ಪಿತ್ತ ಚೂರಿ ಹಣ್ಣು ತಿಂದ ಆ ಒಳ್ಳೇ ರುಚಿಯಿದು
ನಿಂಗ್ ನೆನ್ಪಿಲ್ದಿರೆ …ನಾ ನೆನ್‌ಪ್ ಮಾಡುದಾ?

ನೀ ನಂಬದಿಗ್ ಹೋರೆ…ಪ್ಯಾರ್ಲಿಕಾಯ್ ತಕಂಬತ್ಯಾ
ನೀ ನಂಬದಿಗ್ ಹೋರೆ…ಎರಡು ಮಾಯ್ನಕಾಯ್ ತಕಂಬತ್ಯಾ

ಟಿಪ್ಪಣಿಗಳು
  1. amrathshetty ಹೇಳುತ್ತಾರೆ:

    sooooooooooooooooooooooooooooper………………………………..

  2. MMaravanthe. ಹೇಳುತ್ತಾರೆ:

    ಚಾಂಪಿ ಹಣ್ಣ ತಿಂಬುಕೆ ಮರ ಹತ್ತಿ, ಗೆಲ್ಲ ಮುರದ ಬಿದ್ಥ ನಮ್ಮ ಅಣ್ಣಯ್ಯ(ಗಣೇಶ ಮಧ್ಯಸ್ಥ ಮರವಂತೆ) ನೂ ಸೇರಿ ಐದಾರ ಜನ ಮಕ್ಲ ಅಸ್ಪತ್ರಿ ಸೇರಿದ್ದ ಹಂಬ್ಲ ಅಯಿತ.
    ನಿಮ್ಮ ಚಪ್ರದಲ್ಲ(ಬ್ಲಾಗ್) ಕಣ್ಣಾಡ್ಸಿರೆ ಹಳಿದೆಲ್ಲ ಹಂಬ್ಲಾತ್ತೆ…! ಧನ್ಯವಾದ್ವೇ!

  3. Panduranga ಹೇಳುತ್ತಾರೆ:

    supre maarre, olle bareddr

  4. sukhesh ಹೇಳುತ್ತಾರೆ:

    ಅಮ್ಟೆಕಾಯ್ ಗೋರ್ಟು ಮರ್ತ್ ಹೋಗಿತ್. ಈಗ ನೆನ್ಪಾಯ್ತು 🙂

  5. Clinton Dsouza ಹೇಳುತ್ತಾರೆ:

    Super Sir… Ide kathe nam deshadduu… Lifu istene..

ನಿಮ್ಮ ಟಿಪ್ಪಣಿ ಬರೆಯಿರಿ