Archive for the ‘ಆಟ’ Category


ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ದಾ? ಹ್ಯಾಂಗೆ ಈ ವರ್ಷ ಬ್ಯಾಸಾಯ ಅಡ್ಡಿಲ್ಲ್ಯಾ? ಪೆರ್ಡೂರ್, ಸಾಲಿಗ್ರಾಮದರದ್ ತಿರ್ಗಾಟ ಶುರು ಆಯಿರ್ಕ್ ಅಲ್ದಾ?

 ಆಟ ಗೀಟ ಕಾಂಬ್ಕ್ ಹೋಯಿಲ್ಲ್ಯಾ? ಈಗೀಗ ಆಟ ಕಾಂಬ್ಕ್ ಹೋಪ್ಕೇ ಮನ್ಸ್ ಬತ್ತಿಲ್ಲಪ. ಎಲ್ಲಾ ಪಿಚ್ಚರಿದೇ ಕತಿ ಮಾಡುದಾರೆ ಆಟ ಎಂತಕ್ ಕಾಣ್ಕ್ ರಾತ್ರಿಡೀ ನಿದ್ರಿ ಬಿಟ್ಕ್ಂಡ್. ಪಿಚ್ಚರೇ ಕಾಣ್ಲಕ್. ಆರೂ ಒಂದ್ ಅಂದ್ರೆ ಬೆಂಗ್ಳೂರಗೆ ಬಂದಲ್ಲ್ ಈ ಸರ್ತಿ ಎಲ್ಲಾ ಮ್ಯಾಳದರೂ ಹೆಚ್ಚ್ ಪೌರಾಣಿಕ ಪ್ರಸಂಗವೇ ಆಡಿರ್. ನಾನೂ ಒಂಡೆರ್ಡ್ ಆಟ ಕಂಡಿನೆ. ಮ್ಯಾಳದರ್ ಹೇಳುದ್ ಎಂತ ಅಂದ್ರೆ ಹೊಸ ಪ್ರಸಂಗ ಆಡ್ರ್ ಮಾತ್ರ ಜನ ಬತ್ರೆ. ಹಳ್ತೆಲ್ಲಾ ಯಾರಿಗೂ ಬ್ಯಾಡ. ಜನ ಬರ್ದಿರೆ ನಾವ್ ಮ್ಯಾಳ ನೆಡ್ಸುದಾರೂ ಹ್ಯಾಂಗೆ ಅಂದೇಳಿ. ಅವ್ರ್ ಹೇಳುದ್ರಗೂ ಸತ್ಯ ಇಲ್ದೇ ಇಲ್ಲ. ಆರೂ ಇದ್ ಕತಿ ಹ್ಯಾಂಗಾಯ್ತ್ ಗೊತ್ತಾ, ೨೦-೨೦ ಬಂದ್ಮೇಲೆ ಟೆಸ್ಟ್ ಮ್ಯಾಚ್ ಕಾಂಬುಕೆ ಯಾರೂ ಬತ್ತಿಲ್ಲ ಅಂದೇಳ್ದಾಂಗ್ ಆಯ್ತ್. ಇದ್ ಪೂರ್ತಿ ಸತ್ಯವೂ ಅಲ್ಲ. ಹಾಂಗಂದೇಳಿ ತೀರಾ ಸುಳ್ಳ್ ಅಂದೇಳಿಯೂ ಹೇಳುಕಾತಿಲ್ಲೆ. ಈಗ ಬೆಂಗ್ಳೂರಗಾರೆ ನಾನೆ ಕಂಡಾಂಗೆ ಪೌರಾಣಿಕ ಪ್ರಸಂಗ ಆಡದಾಗ್ಳಿಕೆ ಯಾವತ್ತೂ ಜನ ಇಲ್ಲ ಅಂದೇಳಿ ಆಯಿಲ್ಲ. ಪ್ರತೀ ವರ್ಷ ದೇವಿ ಮಹಾತ್ಮೆ ಆಡ್ರೂ ಜನ ಭರ್ತಿಯಾದ್ದ್ ನಾನೇ ಕಂಡಿದೆ. ಆರೆ ಬೆಂಗ್ಳೂರಗೆ ಬಂದಾಂಗೆ ಊರಗ್ ಜನ ಪೌರಾಣಿಕ ಪ್ರಸಂಗಕ್ಕ್ ಬತ್ರಾ? ಯಾಕ್ ಬತ್ತಿಲ್ಲ ಹೇಳಿ… ಒಂದ್ ಒಳ್ಳೇ ಹತ್ತ್ ಪ್ರಸಂಗ ತಯಾರ್ ಮಾಡ್ಕಂಡ್, ಹೊಸ ಪ್ರಸಂಗದ ಸೆಟ್ಟಿಂಗಿಗೆ ಕರ್ಚ್ ಮಾಡು ದುಡ್ಡನ್ನ ಕಲಾವಿದ್ರಿಗೆ ಕೊಟ್ಟ್, ಒಳ್ಳೋಳ್ಳೇ ಕಲಾವಿದ್ರನ್ ಹಾಯ್ಕಂಡ್ ಹೊಡಿ ಹಾರ್ಸರೆ  ಎರ್ಡ್ ದಿನ ಬರ್ದಿರೂ ಕಡಿಗೆ ಆಟ ಕಂಡರ್ ಮಾತಾಡತ್ ಕೇಂಡ್ ಆರೂ ಕಾಂಬ ಹ್ಯಾಂಗಿತ್ತ್ ಅಂದೇಳಿ ಬಂದೇ ಬತ್ರೆ. ಜನ್ರಿಗೆ ಎಂತ ಗೊತ್ತಾ.. ಒಟ್ಟಾರ್ ಮೇಲ್ ಆಟ ರೈಸ್ಕ್.. ಆರೆ ಇದ ಸ್ವಲ್ಪ ಕಷ್ಟದ ಕೆಲ್ಸ. ಈಗ ಮ್ಯಾಳದರಿಗೆ ಹ್ಯಾಂಗಂದ್ರೆ… ಯಕ್ಷಗಾನ ಉಳೀಕ್ ಅಂದೇಳಿ ಇಲ್ಲ… ಒಟ್ಟಾರ್ ಮೇಲ್ ಅವ್ರ್ ಪೆಟ್ಗಿ ತುಂಬುಕ್ ಸುಲ್ಭದ್ ದಾರಿ ಆರ್ ಸಾಕ್. ಇದ್ ಹೀಂಗೆ ಮುಂದ್ ಹೋರೆ.. ಇನ್ನ್ ಮೇಲೆ ಆಟದಗೆ ನೀವ್ ಐಟಮ್ ಸಾಂಗ್ ಕಾಂಬ್ ದಿನವೂ ದೂರ ಇಲ್ಲ ಅನ್ಸತ್ತ್…

 ನಂಗೆ ಸಣ್ಣಕಿಪ್ಪತ್ತಿಗೆ ಅಷ್ಟೇನ್ ಆಟ ಕಾಂಬ್ ಗಿರ ಇರ್ಲಿಲ್ಲ. ಆಟ ಹೆಚ್ಚ್ ಕಾಂಬುಕೆ ಶುರು ಮಾಡದ್ದ್ ಬೆಂಗ್ಳೂರಿಗೆ ಬಂದ್ ಮೇಲೆ. ಊರಗಿದ್ದಾಗ್ಳಿಕೆ ವರ್ಷಕ್ ಒಂದ್ ತಪ್ರೆ ಎರ್ಡ್ ಟೆಂಟ್ ಮ್ಯಾಳದ ಆಟ. ಅದೂ ಚಕ್ರಮೈದಾನದಗೆ ಆರೆ ಮಾತ್ರ. ಆಗ ಹೆಚ್ಚ್ ಸಾಲಿಗ್ರಾಮ ಮ್ಯಾಳದ ಆಟ ಕಂಡದ್ದೇ ಹೆಚ್ಚ್. ನಂಗ್ ನೆನ್ಪ್ ಇಪ್ಪಾಂಗೆ ಮೇಘ ಮಯೂರಿ, ಶೃಂಗ ಸಾರಂಗ, ಧರ್ಮ ಸಂಕ್ರಾಂತಿ…ಶಿರ್ಸಿ ಮ್ಯಾಳದರದ್ದ್ ಭಾಗ್ಯ ಭಾರತಿ… ಹೀಂಗೆ ಸುಮಾರ್ ಆಟ ಕಂಡಿದೆ. ಅದ್ರಗೂ ಮೇಘ ಮಯೂರಿ ಮತ್ತ್ ಭಾಗ್ಯ ಭಾರತಿ ಆಗ್ಳಿಕೆ ಭಾರಿ ರೈಸಿತ್… ಮೇಘ ಮಯೂರಿ ಕತಿಯಗೆ ಬಪ್ಪ್ ಕೃಷಿಕ ಕಾಳನ ಕತಿಯೇ ಕಡಿಗೆ ‘ಹುಲಿಯಾದ ಕಾಳ’ ಕ್ಯಾಸೆಟ್ ಬಂದ್ ಭಾರಿ ಹೆಸ್ರ್ ಮಾಡಿತ್. ಆ ಕಾಳನ ಕತಿ ಸುಮಾರ್ ಮೊದ್ಲ್ ನನ್ ಬ್ಲಾಗಗೂ ಹಾಕಿದ್ದೆ… ಹೀಂಗೆ ವರ್ಷಕ್ ಒಂದೋ ಎರ್ಡ್ ಟೆಂಟಿನಾಟ ಬಿಟ್ರೆ ಮತ್ತ್ ಹರ್ಕಿ ಬಯಲಾಟ. ಮನಿ ಬುಡ್ದಲ್ಲೇ ಆಟ ಆರೆ ಆಟಕ್ ಹೋಪ್ದ್ ಅಂದೇಳಿ ಬೇಗ್ ಬೇಗ್ ಉಂಡಾಂಗ್ ಮಾಡಿ, ಎಲ್ಲರ್ಕಿಂತ ಮುಂದ್ ಹೋಯಿ ಕೂಕಂಡ್, ಕ್ವಾಡಂಗಿ, ಬಾಲಗೋಪಾಲ, ಶ್ರೀವೇಷ(ಇದ್ ಶ್ತ್ರೀವೇಷ ಆರೂ ಯಾರೂ ಹಾಂಗ್ ಹೇಳತ್ ಇಲ್ಲಿವರಿಗೂ ನಾನ್ ಕೇಣಲ್ಲಪ್ಪ) ಎಲ್ಲ ಕಂಡ್ ಇನ್ನೇನ್ ಒಡ್ಡೋಲ್ಗ ಶುರು ಆಪಲ್ಲೊರಿಗೆ ಒಂದ್ ಗಳ್ಗಿ ಆಟ ಕಂಡಾಂಗ್ ಮಾಡಿ ಆಟದ ಗರದಗೆ ಸುತ್ತ್ ಹೊಡುಕ್ ಹೋರೆ, ಆಟದ ಖರ್ಚಿಗೆ ಕಿಸಿಯೊಳ್ಗೆ ಇಟ್ಕಂಡ್ ಚಿಲ್ರಿ ಪೂರ್ತಿ ಕಾಲಿ ಆಪಲ್ಲೊರಿಗೆ ಮತ್ತ್ ಆಟದ ಬದಿಗೆ ಮುಖ ಹಾಕಿ ಕಾಂಬರ್ಯಾರ್? ಅದೆಲ್ಲಾ ಆಪಷ್ಟೊತ್ತಿಗೆ ಹ್ಯಾಂಗೂ ಕಣ್ಣ್ ಕೂರ್‌ತಿರತ್ತ್… ಆಟಕ್ಕ್ ಹೋಯ್ಕ್ ಅಂದೇಳಿ ಮಧ್ಯಾಹ್ನ ಮನ್ಕೋ ಅಂದೇಳಿ ಮನ್ಯರ್ ಒತ್ತಾಯಕ್ಕೆ ಕಣ್ಣ್ ಮುಚ್ದಾಂಗ್ ಮಾಡಿ ಅವ್ರಿಗೆಲ್ಲ ನಿದ್ರಿ ಬಂತ್ ಅಂದೇಳಿ ಗೊತ್ತಾರ್ಕೂಡ್ಲೇ ಹಗೂರ ಎದ್ದ್ ಆಡುಕೆ ಹೋದ್ದಲ್ದಾ? ಕಣ್ನ್ ಕೂರ್ದೇ ಎಲ್ಲಿಗ್ ಹೋತ್ತ್. ಮನಿಗ್ ಹೋಯ್ ಮಲ್ಕಂಡ್ರೂ ಆಯ್ತ್. ಇಲ್ದಿರೆ ಅಲ್ಲೇ ಎಲ್ಲಾರೂ ಒಂದ್ ಮುಲ್ಲಿ ಹಿಡ್ಕಂದ್ ಬಿದ್ಕಂಡ್ರೂ ಆಯ್ತ್. ಮತ್ತ್ ಆಟ ಕಾಣ್ಕಿದ್ರೆ ರಾಕ್ಷಸನ ವೇಷ ಬರ್ಕ್. ಅದ್ ಬಪ್ಪತಿಗೆ ಹ್ಯಾಂಗಿದ್ರೂ ಬೆಳ್ಗಿನ ಜಾಮ ಆಯಿರತ್ತ್. ಹಾಂಗಾಯಿ. ಅದನ್ನ್ ಒಂದ್ ಕಂಡ್ರೆ ಅಲ್ಲಿಗ್ ನಮ್ಮ್ ಆಟ ಮುಗ್ದಾಂಗೆ… ಆಟದ ಗರದಗೆ ರಾತ್ರಿಡೀ ನಿದ್ರಿ ಮಾಡ್ರೂ.. ಆಟದ ನಿದ್ರಿ ಅಂದೇಳಿ ಮಾರ್ನೆ ದಿನ ಶಾಲಿಗ್ ಹಾಂಟ್ ಬೇರೆ… ಆರೂ ಆಗ ಆಟಕ್ ಹೋಯಿ ಬಪ್ದಂದ್ರೆ ಸಣ್ಣಕೆ ಒಂದ್ ಹಬ್ಬಕ್ ಹೊಯಿ ಬಂದಷ್ಟೇ ಖುಶಿ… ಈಗ ಆಗ್ಳಿಕಿನ ನಮನಿ ಆಟವೂ ಇಲ್ಲ… ಇದ್ರೂ ಆ ಖುಷಿ ಖಂದಿತ ಬತ್ತಿಲ್ಲ… ಹಳ್ತ್ ಹೋಯಿ ಹೊಸ್ತ್ ಬಂದಾಂಗೆ… ಎಲ್ಲ ಬದ್ಲಾಯ್ಕೇ ಅಲ್ದಾ? ನಾಳಿಗೆ ಇದೂ ಹಳ್ತಾಯಿ ಮತ್ತ್ ಹೊಸ್ತ್ ಬರ್ಕೇ ಅಲ್ದಾ …. ಅಂದೇಳಿ ಹೇಳ್ತಾ ಈ ಆಟದ ಪುರಾಣಕ್ಕೆ… ಮಂಗಳ ಹಾಡ್ತೆ.

 


ಈ ಸರ್ತಿ ಬೆಂಗ್ಳೂರಗೆ ಮಳ್ಗಾಲದ ಆಟ ಇನ್ನೂ ಏನ್ ಶುರುವಾತ್ತಷ್ಟೇ. ಮೊನ್ನೆ ಇತ್ಲಾಯಿ ಸಾಲಿಗ್ರಾಮ ಮ್ಯಾಳದರ್ ಬಂದ್ ಒಂದ್ ನಾಕ್ ಆಟ ಆಡಿ ವಾಪಾಸ್ ಹೋಯಾಯತಾ ಕಾಣತ್. ಇನ್ನ್ ಪೆರ್ಡೂರರ್ ಬಪ್ಪುದ್ 17ನೇ ತಾರೀಕಿಗೆ. ಅಲ್ಲಿವರಿಗೆ ಯಾವ್ ಆಟ ಇಪ್ಪ್ ಸುದ್ದಿ ಕಾಂತಿಲ್ಲಪ್ಪ. ಪೆರ್ಡೂರರದ್ ನಾಕ್ ಆಟ ಕಾಣ್ಕಮಗಿತ್ತ್. ಧಾರೇಶ್ವರರದ್ ಒಂದೆರ್ಡ್ ಪದ್ಯ ಕೇಣ್ಕಮಗಿತ್ತ್. ಅವ್ರ್ ಆಟ ಯಾವತ್ತೆಲ್ಲ ಇತ್ತ್ ಅಂದೇಳಿ ಇನ್ನೂ ಸಮಾ ಅಂಜಾದಿಲ್ಲ. ಆರೆ ೧೭ನೇ ತಾರೀಕಿಂದ ಆಗಷ್ಟ್ ೧ನೇ ತಾರೀಕಿನವರಿಗೆ ಅವ್ರ್ ತಿರ್ಗಾಟ ಇರ್ಕಾ ಕಾಣತ್.

 ಸುದ್ದಿ ಎಂತ ಕೇಂಡ್ರೆ ಕಳ್ದ್ ವರ್ಷ ಕಾಲಿಗೆ ಪೆಟ್ಟ್ ಮಾಡ್ಕಂಡ್ ರಮೇಶ ಭಂಡಾರ್ರ್ ಈ ವರ್ಷ ಬತ್ರಂಬ್ರ. ನೀವ್ ಏನೇ ಹೇಳಿ ರಮೆಶ್ ಭಂಡಾರಿ ಇಲ್ದಿದ್ರೆ ಆಟ ಒಂದ್ನಮನಿ ಚಪ್ಪಿ ಅಲ್ದೆ. ಜಲವಳ್ಳಿ ಈ ವರ್ಷ ಪೆರ್ಡೂರಗೆ ಇಪ್ಪ್ ಲಕ್ಷಣ ಕಾಂತಿಲ್ಲಪ್ಪ. ಮತ್ತೂ ಒಂದ್ ಸುದ್ದಿ ಅಂದ್ರೆ ದೇವದಾಸ ಈಶ್ವರಮಂಗಲ ಮತ್ತೆ ಪೆರ್ಡೂರ್ ಮ್ಯಾಳಕ್ಕೆ ಪ್ರಸಂಗ ಬರುಕ್ ಶುರು ಮಾಡಿರಂಬ್ರ್. ಹಾಂಗಾಯ್ ಅವ್ರದ್ ಒಂದೆರ್ಡ್ ರಿಮೇಕ್ ಆಟ ಕಾಂಬುಕೆ ಸಿಕ್ಕತ್!! ತೆಲುಗಂಗೆ ಹಿಟ್ ಆದ ಪಿಚ್ಚರ್ ಅರುಂಧತಿ ಕತಿ ಹಿಡ್ಕಂಡ್ ನಾಗವಲ್ಲಿ ಭಾಗ-2 ಅಂದೇಳಿ ಪ್ರಸಂಗ ಬರ್ದಿರಂಬ್ರ್. ಭಾರಿ ಲಾಯ್ಕ್ ಆತ್ತ್ ಆಟ ಅಂದೇಳಿ ಕಂಡರೆಲ್ಲ ಹೇಳ್ತ್ರಪ. ಉಡುಪಿಯಗೆ ಗೇಟ್ ಕಲೆಕ್ಷನ್ನಗೆ ದಾಖಲೆ ಅಂದೇಳಿ ನಮ್ಮ್ ಕರಾವಳಿ ವಾಣಿ ಉದಯವಾಣಿಯಗೆ ಕಂಡಿದ್ನಪ. ಎಂತ ದಾಖಲೆ ಕಾಂಬ… ಇಲ್ಲೇ ಬತ್ರಲೆ ಆಗ್ಳಿಕೆ ಗೊತ್ತಾತ್. ಅಲ್ದಾ? 27ನೇ ತಾರೀಕಿಗೆ ಬೌಷ ಆ ಆಟ ಇರ್ಕಾ ಕಾಣತ್. ಅದ್ರೊಟ್ಟಿಗೆ ಕಳ್ದ್ ವರ್ಷದ ತಿರ್ಗಾಟದ ಪ್ರಸಂಗ ‘ವಂಶವಲ್ಲರಿ’ ಆಡ್ತ್ರ್ ಅಂಬ್ರ್. ಕಬ್ಬಿನಾಲೆ ವಸಂತ ಭಾರದ್ವಾಜರದ್ ಪದ್ಯ ಅಂಬ್ರ್. ಕತಿ ಬರದ್ದ್ ನಮ್ಮ್ ನೀಲ್ಕೋಡ್ ಶಂಕರ ಹೆಗ್ಡೆ ಅಂಬ್ರ. ಸುರಿಗೆ ಅದೇ ಆಟ ಇತ್ತ್. ಎಂತಾರೂ ಇನ್ನೊಂದ್ ಹತ್ತ್ ದಿನ ಹೋರ್ ಮ್ಯಾಲೆ ಸಯ್ಯಲ್ದಾ? ಆಟದ್ ಸುದ್ದಿ ಮಂತ್ತೆಂತಾರೂ ಸಿಕ್ರೆ ನಿಮ್ಗ್ ಖಂಡಿತ ಹೇಳ್ತೆ. ನೀವ್ ಮಾತ್ರ ಆಟಕ್ ತಪ್ಸೂಕಾಗ. ಖಂಡಿತ ಬರ್ಕ್. ಹಂಗಾರೆ ಆಟದ ಗರ್ನಗೆ ಸಿಕ್ವಾ ಅಕಾ?

ಇದನ್ನ ಪೋಸ್ಟ್ ಮಾಡುಕೆ ಹೊರಟ್ ಸೂರಿಗೆ ಇನ್ನೊಂದ್ ಆಟದ ಸುದ್ದಿ ಸಿಕ್ತ್ ಮಾರಾಯ್ರೆ… ನಮ್ಮ ಊರಿನರ್ ಓಬ್ರ್ ಆರ್ಕುಟಗೆ ಈ ಆಟದ ಸುದ್ದಿ ಹೇಳ್ರ್ .ನಾಡ್ದ್ ಆದಿತ್ಯವಾರ ಅಂದ್ರೆ ಜುಲೈ 12ನೇ ತಾರೀಕ್ , ಇಲ್ಲೇ ನೆಟ್ಕಲ್ಲಪ್ಪ ಸರ್ಕಲ್ಲಗೆ ಒಂದ್ ಆಟ ಇತ್ತಂಬ್ರ್ ಮಾರಾಯ್ರೆ… ನೆಟ್ಕಲ್ಲಪ್ಪ ಸರ್ಕಲ್ ಹತ್ರ ವಾದಿರಾಜ ಕಲ್ಯಾಣ ಮಂಟಪ ಇತ್ತೆಲೆ ಅಲ್ಲೇ ಇಪ್ಡ ಆಟ. ಗುಂಡ್ಮಿ ಯಕ್ಷ ಬಳಗದರದ್ದ್ ಅಂಬ್ರ್ ಆಟ.  ಪ್ರಸಂಗ ದೇವಿ ಮಹಾತ್ಮೆ ಅಂಬ್ರ್. ಸಾಯಂಕಾಲ 5-30 ಗೆ ಆಟ ಶುರ್ರುವಾತ್ತ್ .  ನೀವೆಲ್ಲ ತಪ್ದೆ ಬರ್ಕ್ ಅನ್ದೇಳಿ ನಂದ್ ನಿಮಗೆಲ್ಲ ಹೇಳ್ಕಿ


ಮಳಿ ಬರ್ಲಿ ಬಾರ್ದೆ ಇರ್ಲಿ. ಮಳ್ಗಾಲ ಅಂತೂ ಶುರುವಾಯಿತ್. ಹಾಂಗೇ ಬೆಂಗ್ಳೂರಿನ ಮಳ್ಗಾಲದ ಆಟ ಸತೇ ಶುರುವಾಯ್ತ್. ಕಳ್ದ್ ವಾರವೇ ಸಾಲಿಗ್ರಾಮ ಮ್ಯಾಳ್ದರದ್ ಆಟ ರವೀಂದ್ರ ಕಲಾಕ್ಷೇತ್ರದಗೆ ಶುರುವಾಯಿ ಆಯ್ತ್. ಇನ್ನೇನ್ ಮುಂದಿನ್ ತಿಂಗ್ಳ್ ಪೆರ್ಡೂರ್ ಮ್ಯಾಳ್ದರೂ ಸತೇ ಬತ್ರಾ ಕಾಣತ್. ಅವ್ರ್ ಬಂದ್ ಮೇಲೆ ನಂಗ್ ರಾತ್ರಿ ನಿದ್ರಿ ಬಿಡುದೇ ಕೆಲ್ಸ. ಕಳ್ದ್ ವರ್ಷ ಒಟ್ಟ್ ಇಪ್ಪತ್ತಕ್ಕೂ ಹೆಚ್ಚ್ ರಾತ್ರಿ ನಿದ್ರಿ ಬಿಟ್ಟಿದೆ. ಈ ವರ್ಷ ಇನ್ನೊಂದೆರ್ದ್ ಆಟ ಜಾಸ್ತಿ ಕಾಣ್ಕ್ ಅಮಗಿತ್ತ್.

ಅದಿರ್ಲಿ ಈಗ ಸಾಲಿಗ್ರಾಮದರದ್ ಒಂದೆರ್ಡ್ ಒಳ್ಳೆ ಆಟ ಈ ವಾರ ಇತ್ತ್. ಪುರ್ಸೊತ್ತಿದ್ರೆ ಒಂದ್ಗಳ್ಗಿ ಹೋಯ್ ಬಪ್ಪ ಅಂದ್ಕಂಡಿದೆ. ನಿವ್ಯಾರಾರೂ ಹೋಪರಿದ್ರೆ ನಿಮ್ಗ್ ಅನ್ಕೂಲ ಆಯ್ಲಿ ಅಂದೇಳಿ ಈ ಸುದ್ದಿ ಹಿಡ್ಕಂಡ್ ಬಂದಿದೆ…

 ಇವತ್ ರಾತ್ರಿ (ಜೂನ್ ೨೪ ಬುಧವಾರ) ರಾತ್ರಿ ೧೦:೩೦ಗೆ ಅಪ್ಪ ಭಟ್ಟ >< ತಿಪ್ಪ ಭಟ್ಟ ಮತ್ತು ಧರ್ಮ ಸಂಕ್ರಾಂತಿ. ಅತಿಥಿ ಕಲಾವಿದ್ರ್ ಆಯಿ ಯಕ್ಷಗಾನದ ಚಾರ್ಲಿ ಚಾಪ್ಲಿನ್ ಸೀತಾರಾಂ ಕುಮಾರ್ ಬತ್ರಂಬ್ರ್. ಹಳ್ಳಾಡಿ, ಕ್ಯಾದಗಿ, ಸೀತಾರಾಂ ಕುಮಾರ್ ಒಟ್ಟಿಗೆ ಪ್ರಜ್ವಲ್ ಅಂದೇಳಿ ಒಟ್ಟ್ ನಾಲ್ಕ್ ಜನ ಹಾಸಿಗಾರ್ರದ್ ಬೆಳ್ಗಿನ ಜಾಮದವರಿಗೆ ಹಾಸ್ಯ ಇತ್ತಂಬ್ರ್ ಕಾಣಿ. ಹೇರಂಜಾಲ್, ರಾಘವೇಂದ್ರ ಮಯ್ಯರದ್ ಭಾಗ್ವತಿಕೆ. ಅಲ್ದೇ ಅಪ್ಪ ಭಟ್ಟ><ತಿಪ್ಪ ಭಟ್ಟದಲ್ಲಿ ಹವ್ಯಕ ಕನ್ನಡ ಮತ್ ಕುಂದಾಪ್ರ ಕನ್ನಡದ್ ಜುಗಲ್‌ಬಂಧಿ ಇತ್ತಂಬ್ರ್. ನಾಳಿಗೆ ನಿದ್ರಿ ಬಿಡ್ಲಕ್ ಅಮಗಿದ್ರೆ ಹೋಯಿ ಬನಿ

 ಮತ್ತೊಂದ್ ಭರ್ಜರಿ ಆಟ ನಾಡ್ದ್ ಶನಿವಾರ ೨೭ನೇ ತಾರೀಕ್ ರಾತ್ರಿ ಹತ್ತೂವರಿಗೆ ಇತ್ತ್. ಅದೂ ಸೈತ ರವಿಂದ್ರ ಕಲಾಕ್ಷೇತ್ರದಗೇ ಇಪ್ಪುದ್. ರಮೇಶ್ ಬೇಗಾರ್ ಅವ್ರದ್ ಪ್ರಸಂಗ ಸಂಯೋಜನೆ ಅಂಬ್ರ್. ಪ್ರಸಂಗ ಎಂತ ಕೇಂಡ್ರ್ಯಾ? ಪಾಪಣ್ಣ ವಿಜಯ-ಗುಣಸುಂದರಿ ಮತ್ತೆ ಚಂದ್ರಹಾಸ. ಚಿಟ್ಟಾಣಿ ರಾಮಚಂದ್ರ ಹೆಗಡೆಯರದ್ ಪಾಪಣ್ಣ ಅಂಬ್ರ್. ಯಾಜಿಯವ್ರದ್ ದುಷ್ಟಬುದ್ಧಿ ಅಂಬ್ರ್, ಕಣ್ಣಿಮನೆಯರದ್ ಚಂದ್ರಹಾಸ, ಶಶಿಕಾಂತ ಶೆಟ್ರದ್ ಗುಣಸುಂದರಿ, ಯಲಗುಪ್ಪ ವಿಷಯೆ, ಹುಡುಗೋಡು ದುರ್ಮುಖ…ಹೀಂಗೆ ಭರ್ಜರಿ ಆಟ ಆಪ್ ಎಲ್ಲಾ ಲಕ್ಷಣ ಕಾಣತ್ತಪ್ಪ. ನಾನ್ ಹೋಯ್ಕಂದೇಳಿ ಇದ್ದೆ. ನಿಮ್ಗೂ ಬಪ್ಪುಕೆ ಪುರ್ಸೊತ್ ಆತ್ತಾ ಕಾಣಿ…


ಕಾಳಏನ್ ಮಾಡುದ್ ಹೇಳಿಇದ್ ನಮ್ಮನಿ

ಸಾಯ್ಬ್ರ್ಅಚ್ಚಾ

ಕಾಳ ಮನೀಲ್ ನಾನು ನನ್ ಹೆಂಡ್ತಿ ಇಬ್ರೆ ಇಪ್ಪುದ್

ಸಾಯ್ಬ್ರ್ಅಚ್ಚಾಅಚ್ಚಾ….

ಕಾಳಅದೆಲ್ ಬಂತ್

ಸಾಯ್ಬ್ರ್ಅರೆ ಕ್ಯಾರೆ….

ಕಾಳಅಲಾ…. ಹಚಾ ಹಚಾ ಅಂದ್ರ್ಯಲ…. ಹಚಾ ಅಂದ್ರೆ ನಂಬದೀಲ್ ನಾಯ್ ಬೆರ್ಸುದ್ ಮರಾಯ್ರೆ

ಸಾಯ್ಬ್ರ್ಅರೇ ನಾನು ನಾಯಿಗೆ ಹೇಳ್ತು ಅಂತ ಮಾಡಿದೆ

ಕಾಳಅಲ್ದಾ…. ನಾಯ್ ಬೆರ್ಸದ್ ಅಲ್ದಾ?

ಸಾಯ್ಬ್ರ್ಅರೇ ನಾನು ನಿಂಗೆ ಹೇಳ್ತು

ಕಾಳನಿಮ್ ಲೆಕ್ದಗೆ ನಾನೇನ್ ನಾಯಾ…?

ಸಾಯ್ಬ್ರ್ಅರೇ ಇದೇನು ಹೇಳ್ತದೆನಾನು ಹೇಳಿದ್ದು ಅಚ್ಚಾ ಅಚ್ಚಾ

ಕಾಳಹಚಾ ಅಂದದ್ದಲ್ದಾಅದಿರ್ಲಿಅಚ್ಚಾ ಅಚ್ಚಾ ಅಂದ್ರ್ ಎಂತದ್..?

ಸಾಯ್ಬ್ರ್ಒಳ್ಳೇದು ಒಳ್ಳೇದು

ಕಾಳಅಚ್ಚಾ ಅಂದ್ರೆಒಳ್ಳೇದಾಹೋಯ್ಲಿ ಬಿಡಿಇದ್ ನಮ್ಮನಿ

ಸಾಯ್ಬ್ರ್ಅಚ್ಚಾ

ಕಾಳ ಮನೀಲ್ ನಾನ್ ನನ್ ಹೆಂಡ್ತಿ ಇಬ್ರೆ ಇಪ್ದ್….

ಸಾಯ್ಬ್ರ್ಅಚ್ಚಾ…..ಅಚ್ಚಾ…..

ಕಾಳಮೊನ್ನೆ ಒಂದಿನ ನಾನಿಲ್ದಿದ್ ಹೊತ್ತಿಲ್ ನಮ್ಮನಿಗೆ ಯಾರೋ ಬಂದ್ರ್

ಸಾಯ್ಬ್ರ್ಅಚ್ಚಾ…..ಅಚ್ಚಾ

ಕಾಳಸಾಯ್ಬ್ರೆಅಚ್ಚಾ ಅಚ್ಚಾ ಅಂದ್ರ್ ಎಂತ ಅಂದ್ರಿ..

ಸಾಯ್ಬ್ರ್ಅರೇಒಳ್ಳೇದು..ಒಳ್ಳೇದು

ಕಾಳಸುಮ್ನಾಯ್ಕಣಾಇದ್ ನಮ್ಮನಿ ಅಂದ್ರೂ ಒಳ್ಳೇದ್ನಾನು ನನ್ ಹೆಂಡ್ತಿ ಇಬ್ರೆ ಇಪ್ದಂದ್ರೂ ಒಳ್ಳೇದ್.. ನಾ ಇಲ್ದಿದ್ ಹೊತ್ತಿಲ್ ಯಾರಾರು ಬಂದಿರ್ ಅಂದ್ರೂ ಓಳ್ಳೇದ್ಯಾರಾಉ ಇದ್ರ್ ಅಂದ್ರೂ ಒಳ್ಳೇದ್ಯಾರಾರು ಸತ್ತ್ ಹೋರ್ ಅಂದ್ರೂ ಒಳ್ಳೇದಾ….

ಸಾಯ್ಬ್ರ್ನಂದೂ ಜಾತಿಲಿ ಹೂಂ ಹೇಳುದಿಲ್ಲನಮ್ದು ಮತ್ತೊಬ್ರು ಮಾತಾಡ್ ಬೇಕಾದ್ರೆ ಅಚ್ಚಾ ಅಚ್ಚಾ ಹೇಳ್ತದೆ..

ಕಾಳಇರ್ಲಿ ಬಿಡಿ.. ಮೊನ್ನೆ ನಾನಿಲ್ದಿದ್ದ್ ಹೊತ್ತಿಗೆ ನಮ್ಮನಿಗೆ ಒಬ್ಬ ಕಾಮುಕ ಬಂದ್ ನನ್ ಹೆಂಡ್ತಿ ಶೀಲ ಹಾಳ್ ಮಾಡಿ ಬಿಟ್ಟ

ಸಾಯ್ಬ್ರ್ಅರೇ ನಿಂದು ಹೆಂಡ್ತಿ ಚೀಲ ಹೋಯ್ತು…? ಚೋಟಾ ಚೀಲ ಹೋಯ್ತಾ.. ಬಡಾ ಚೀಲ ಹೋಯ್ತಾ…?

ಕಾಳನೀ ಎಲ್ಲಿ ಹಪ್ಗೆಟ್ಟನ್ ಮರಾಯಾ….

ಸಾಯ್ಬ್ರ್ಇದೇನಿದು.. ಹಪ್ಪುಗೆಟ್ಟದ್ದು ಹೇಳ್ತದೆ…. ನಂಗೇ ನೀನು ಬೈತದೆಬೈತದೇ….?

ಕಾಳಅಲ್ದಾಬಯ್ಯದ್ದಲ್ದಾಹಪ್ಗೆಟ್ಟನ್ ಅಂದ್ರೆ ಭಾರೀ ಒಳ್ಳೆಯನ್ ಅಂದೇಳಿ….

ಇಕಾಣ್ ಚೀಲ ಅಲ್ಲನಾನಿಲ್ದಿದ್ ಹೊತ್ತಿಗೆ ಒಬ್ಬ ಕಾಮುಕ ಬಂದ್ ನನ್ ಹೆಂಡ್ತಿ ಶೀಲ ಹಾಳ್ ಮಾಡಿದನನ್ ಮರ್ಯಾದಿಯೇ ಹೋಯ್ತ್ಮರ್ಯಾದಿ ಹೋರ್ ಮೇಲೆ ಊರಂಗೆ ತಲಿ ಎತ್ಕಂಡ್ ತಿರ್ಗುದಾರು ಹ್ಯಾಂಗೆಅದ್ಕೇ ಎಲ್ಲಾರೂ ಹೋಯಿ ಸಾವುದಂದೇಳಿ ಮಾಡಿದೆನೀವ್ ಬಂದ್ರಿನಿಮ್ಮತ್ರ ಎಲ್ಲಾ ಹೇಳ್ದೆ…. ನನ್ ಮರ್ಯಾದಿ ಹೋರ್ ಮೇಲೆ ನಾ ಯಾಕಾರೂ ಬದ್ಕ್ಕ್ ಹೇಳಿನಿ

ಸಾಯ್ಬ್ರ್ಅರೇ ಮರ್ವಾದಿ ಹೋಯ್ತು….ಯಾರಿಂದ ಹೋಯ್ತು..

ಕಾಳಬೇರೆ ಯಾರಿಂದ್ಲೂ ಅಲ್ಲ ಸಾಯ್ಬ್ರೆ…. ಊರಿನ ಮಹಾರಾಜ ವೀರ್ಯಗುಪ್ತ ಅಂದೇಳಿ. ಅವ್ರಿಂದ್ಲೇ ನನ್ ಹೆಂಡ್ತಿ ಶೀಲ ಹಾಳಾಯ್ತ್

ಸಾಯ್ಬ್ರ್ಅದ್ಕೇ ನೀನು ಸಾಯ್ತದೇ…. ಅರೇ ಕಾಳುನೀನು ಸಾಯ್ಬೇಡ…. ಸತ್ರೇ ಜೀವ ಹೋಗ್ತದಲ್ಲ

ಕಾಳಜೀವ್ ಹೋತ್ತ್

ಸಾಯ್ಬ್ರ್ಜೀವ ಓದ್ರೆ ಪ್ರಾಣ ಓಗ್ತದಲ್ಲ

ಕಾಳಎಂತಾ

ಸಾಯ್ಬ್ರ್ಅರೇಜೀವ ಓದ್ರೆ ಪ್ರಾಣ ಓಗ್ತದಲ್ಲ

ಕಾಳ – (ಸಾಯ್ಬ್ರ್ ಮಾತಾಡು ಸ್ವರದಗೆ….)ಹೌ..ಲ್ಲಾ..

ಜೀವ ಅಂದ್ರ್ ಪ್ರಾಣಪ್ರಾಣ ಅಂದ್ರ್ ಜೀವ…. ಎರ್ಡೂ ಹ್ವಾರ್ ಮೇಲೆ ಎಂತದೂ ಇಲ್ಲ….

ಸಾಯ್ಬ್ರ್ಅರೆ ಅಲ್ಲಾ

ಕಾಳಅಲ್ಲ ಅಂದೇಳ್ರ್ ಹಿಡ್ಕಂಡ್ ಬಡ್ದ್ ಬಿಡ್ವೆಸಿಟ್ ಬಂದ್ರ್ ನಾ ಮನ್ಸನೇ ಅಲ್ಲ..

ಸಾಯ್ಬ್ರ್ಅರೇ ನೀನು ಯಾಕೆ ಸಿಟ್ಟು ಮಾಡ್ತದೆ

ಕಾಳಇಲ್ಲ ಇಷ್ಟೂ ನೆಡದ್ ಹೌದ್ ನೀವ್ ಬಂದ್ಕಂಡ್ ಅಲ್ಲ ಅಂತ್ರ್ಯಲ

ಸಾಯ್ಬ್ರ್ಅರೆ ಕಾಳು ನಿಂದು ಮಂಡೆ ಎಲ್ಲಿ ಇಟ್ಟಿದ್ದೆ ನೀನು

ಕಾಳಎಚಿತ ಅರೆ ಕಾಳು  ಅರೆ ಕಾಳು ಅಲ್ಲ ಇಡೀ ಕಾಳು

ಸಾಯ್ಬ್ರ್ ಇಡೀ ಕಾಳು

ಕಾಳಇಗಾಣಿ ಹಾಂಗಿಂದೆಲ್ಲ ಹೇಳ್ಬೇಡಿ ಬರೀ ಕಾಳು ಅಂದೇಳಿ

ಸಾಯ್ಬ್ರ್ಬರೀ ಕಾಳು

ಕಾಳಮತ್ ಸುರುವಾಯ್ತಲ ಇವ್ರದ್

ಸಾಯ್ಬ್ರ್ಅರೇ ಕಾಳು ಅಂದ್ರೆ ಇಡೀ ಕಾಳು ಅಂತ ಹೇಳ್ತದೆಇಡೀ ಕಾಳು ಅಂದ್ರೆ ಬರೀ ಕಾಳು ಹೇಳ್ತದೆ

ಕಾಳಯಾವ್ದೂ ಬೇಡಕಾಳುಸಾಕ್

ಸಾಯ್ಬ್ರ್ಯಾವ್ದೂ ಬೇಡ ಕಾಳು

ಕಾಳಅಗ ಮತ್….

ಸಾಯ್ಬ್ರ್ಕಾಳುನಿನ್ಗೆ ಹೇಗೆ ಮಾತಾಡುದು ನಾನು

ಕಾಳಎಂಥಾರೂ ಹೇಳಿನಿಯತ್ ನೀವ್

ಸಾಯ್ಬ್ರ್ಅರೇ ಕಾಳು.. ನೀನು ಚಲೋ ಚಲೋ

ಕಾಳಅದಿರ್ಲಿನೀವ್ ಅಲ್ಲ ಅಂದ್ರ್ಯಲ ಎಂಥಕೆ?

ಸಾಯ್ಬ್ರ್ನಾನು ನಿಂದು ವಿಷ್ಯ ಅಲ್ಲ ಅಂತ ಹೇಳಿದ್ದಲ್ಲಅರೇ ನಮ್ದು ಭಗವಾನ್ ಇಲ್ಲಾನಮ್ದು ಅಲ್ಲಾ ದೇವ್ರು ಇಲ್ಲಾ

ಕಾಳಹೋನಿಮ್ದ್ ಅಲ್ಲ ದೇವ್ರು ಇಲ್ಲ್ಯಾ?

ಸಾಯ್ಬ್ರ್ಅಲ್ಲ ದೇವ್ರು ಇಲ್ಲ ಅಂತ ಹೇಳ್ತದೆಹಾಗಲ್ಲನಮ್ದು ಅಲ್ಲ ದೇವ್ರು ಇಲ್ಲಾ

ಕಾಳಇಲ್ಲಇಲ್ಲಾ…. ಹಾ ಹಾಇತ್ತ್ ಇತ್ತ್

ಸಾಯ್ಬ್ರ್ಅರೇನಿಮ್ದು ಕುಟುಂಬದಲ್ಲಿ ಹೀಗಾಯ್ತಲ್ಲ ಅಂತ ನಮ್ದು ಅಲ್ಲಾ ದೇವ್ರ ನೆನ್ಪು ಮಾಡ್ತು

ಕಾಳಹೋ ಹಾಂಗೆಇಲ್ಲ್ ನೆಡದ್ ಅಲ್ಲ ಅಂದೇಳಿ ಹೇಳದ್ದಲ್ಲದೇವ್ರ್ ನೆನ್ಪ್ ಮಾಡದ್ದಾ?

ಸಾಯ್ಬ್ರ್ ಕಾಳು ನೀನು ಸಾಯ್ಬೇಡನೀನು ಚಲೋ ಚಲೋಆಸ್ತಾನ್ ಕೋ ಚಲೋ

ಕಾಳ ಚಲೋ ಅಂದ್ರೆ ಎಂತ ಸಾಯ್ಬ್ರೆ…?

ಸಾಯ್ಬ್ರ್ಅರೆ ಚಲೋ ಚಲೋ.. ಓಗುಓಗು

ಕಾಳಎಲ್ಲಿಗೆ…?

ಸಾಯ್ಬ್ರ್ಆಸ್ತಾನ್ ಕೋ ಚಲೋ

ಕಾಳಸಾಸ್ತಾನ ಅಂದ್ರೆ ಬ್ರಹ್ಮಾವರದ್ ಬುಡ್ದಲ್ ಅಲ್ದಾ?

ಸಾಯ್ಬ್ರ್ಅರೇ ಇದೇನು ಹೇಳ್ತದೆ…?

ಕಾಳಅಲಾಸಾಸ್ತಾನ, ಬ್ರಹ್ಮಾವರ ಬದಿಯಲ್ ಅಲ್ದಾ..?

ಸಾಯ್ಬ್ರ್ನಿಮ್ದು ನವಾಬ ಇಲ್ಲಾ

ಕಾಳನವಾಬ್ನಾ…?

ಸಾಯ್ಬ್ರ್ಅರೇ ನಿಮ್ದು ಮಹಾರಾಜ ಇಲ್ಲಾ

ಕಾಳಹಾ ಇದ್ರ್ ಇದ್ರ್

ಸಾಯ್ಬ್ರ್ಆಸ್ಥಾನ್ ಕೋ ಚಲೋ ಔರ್ ಮಹಾರಾಜ್ ಸೇ ಬೋಲೊಮಹಾರಾಜ ನ್ಯಾಯ ಕೊಡ್ಬೇಕಲ್ಲ

ಇಲ್ಲಿ ನೋಡುನ್ಯಾಯಿ ತೆಪ್ಪು ಮಾಡ್ಲಿಞರಿ ತೆಪ್ಪು ಮಾಡ್ಲಿ

ಕಾಳಎಂಥಾ ನ್ಯಾಯಿ ಞರಿ ಅಂತ್ರಿ ಸಾಯ್ಬ್ರ್ರೆ

ಸಾಯ್ಬ್ರ್ಬಡವ ತೆಪ್ಪು ಮಾಡ್ಲಿ, ಶ್ರೀಮಂತ ತೆಪ್ಪು ಮಾಡ್ಲಿ.. ಅರೇ ಭಟ್ರು ತೆಪ್ಪು ಮಾಡ್ಲಿ, ಶೆಟ್ರು ತೆಪ್ಪು ಮಾಡ್ಲಿ

ಕಾಳಇಗಾಶೆಟ್ರ್..ಭಟ್ರ್ ಸುದ್ದಿ ಬ್ಯಾಡ.. ಹ್ವಾ….

ಸಾಯ್ಬ್ರ್ಯಾರು ತೆಪ್ಪು ಮಾಡಿದ್ರು ತೆಪ್ಪು ತೆಪ್ಪೇ ಅಲ್ವಾ? ಮಹಾರಾಜ ನ್ಯಾಯ ಕೊಡ್ಬೇಕಲ್ಲನೀನು ಓಗಿ ಕೇಳುಮಹಾರಾಜ ನ್ಯಾಯ ಕೊಡ್ಲಿಲ್ಲಹೊಳೆಗೆ ಬಿದ್ದು ಸಾಯಿನಾನು ನೋಡ್ತದೆ

ಕಾಳಒಹೋನೀವ್ ನಮ್ಗ್ ಉಪ್ಕಾರ ಮಾಡುದ್ ಇಷ್ಟೇನಾನ್ ಸಾವತಿಲ್ ನೀವ್ ಮೇಲ್ ನಿಂತ್ಕಂಡ್ ಕಾಂತ್ರಿ ಅಲ್ದಾ…?

ಸಾಯ್ಬ್ರ್ಅಷ್ಟೊತ್ತಿಗೆ ನಾನು ಮಹಾರಾಜನಲ್ಲಿ ಓಗಿ ಕೇಳ್ತದೆನೀನು ಯಾಕೆ ನ್ಯಾಯ ಕೊಡ್ಲಿಲ್ಲ ಅಂತ ಕೇಳ್ತದೆ

ಕಾಳಆಯ್ಲಿ ಸಾಯ್ಬ್ರೆಒಳ್ಳೇ ಹೊತ್ತಿನಂಗ್ ಬಂದ್ರಿಬಂದ್ ನಂಗೊಂದ್ ದಾರಿ ತೋರ್ಸಿರಿನಾನ್ ಮಹಾರಾಜ್ರ್ ಬುಡ್ಕ್ ಹೋತೆಹೋಯಿ ನ್ಯಾಯ ಕೇಂತೆನ್ಯಾಯ ಸಿಕ್ದಿರೆ ನೀವ್ ಹೇಳ್ದಂಗೆ ಮಾಡ್ತಿಆರ್ ಒಂದ್ ಕೆಲ್ಸನಾನ್ ಅಲ್ಲಿಗ್ ಹೋತೆನೀವೆಲ್ಲಿಗೆ ಹೋತ್ರಿ..?

ಸಾಯ್ಬ್ರ್ನೀನು ಅಲ್ಲಿಗೆ ಓಗುನೀನು ಬರುವವರೆಗೆ ನಿನ್ನ ಮನೆಯಲ್ಲಿ ನಿಂದು ಹೆಂಡ್ತಿ ಒಬ್ಳೇ ಇರ್ತದಲ್ಲ..

ಕಾಳಹೌದ್.. ಅದಕ್ ಏನೀಗ…?

ಸಾಯ್ಬ್ರ್ನಾನು ಇಲ್ಲಿ ಇರ್ತದೆನೀನು ಅಲ್ಲಿಗೆ ಓಗು

ಕಾಳನೀವಿಲ್ ಇಪ್ಪುದ್ಯಾಕೆ?

ಸಾಯ್ಬ್ರ್ಅದೇ ನಿನ್ನ ಹೆಂಡ್ತಿ ಒಬ್ಳೇ ಇರ್ತದಲ್ಲನಾನು ನಿಂದು ಹೆಂಡ್ತಿಗೆ ರಸ್ಕಿಣಿ ಮಾಡ್ತದೆ

ಕಾಳನೀವ್ ರಸ್ಕಿಣಿ ಮಾಡುದು ಬ್ಯಾಡ.. ಎಂತ ಮಾಡುದು ಬ್ಯಾಡ.. ಎಲ್ಲಾ ಅಂಜಾದಾತ್ ಹ್ವಾಯ್

ಸಾಯ್ಬ್ರ್ಅರೇ ನಮ್ದು ಈಗ ಏನು ಮಾಡ್ಬೇಕು…?

ಕಾಳಏನ್ ಮಾಡ್ಕಂದೇಳಿ ನಾನ್ ಹೇಳ್ತಿ ಹ್ವಾಯ್ಈಗ ಇಲ್ಲಿವರಿಗ್ ಬಂದ್ ಇಂಥದ್ ಮಾಡ್ ಅಂದೇಳಿ ಹೇಳ್ದರೂ ನೀವೆನಿಮ್ಮನೇನ್ ನಾನ್ ಕರಿಲ್ಲ.. ಆರೂ ಉಪ್ಕಾರ ಮಾಡ್ತ್ರಿ ಅಂದೇಳಿ ಹೇಲ್ತ್ರಿಯಲ್ದಾ.. ಹಾಂಗಿದ್ರ್ ಒಂದ್ ಕೆಲ್ಸ ಮಾಡಿ

ಸಾಯ್ಬ್ರ್ಬೋಲೋ

ಕಾಳನಾನ ರಾಜನ ಆಸ್ಥಾನಕ್ಕೆ ಹೋತೆನನ್ನೊಟ್ಟಿಗೆ ನೀವೂ ಬನಿ, ನಾನ್ ಹೇಳದ್ ಹೌದ್ ಅಂದೇಳಿ ನೀವ್ ಸಾಕ್ಷಿ ಹೇಳಿ

ಸಾಯ್ಬ್ರ್ಆಸ್ಥಾನದಲ್ಲಿ ನಾನು ಸಾಕ್ಷಿ ಹೇಳ್ಬೇಕು…? ಅಲ್ಲಿ ರಾಜ್ ಇದ್ರೆ ನಾನು ಸಾಕ್ಷಿ ಹೇಳ್ತದೆಮಹಾರಾಜ ಇದ್ರೆ ನಾನು ಸಾಕ್ಷಿ ಹೇಳ್ತದೆ

ಕಾಳರಾಜರು ಇಲ್ದೇ ಎಲ್ಲಿಗ್ ಹೋತ್ರ್ಬನಿ ಹೋಪ

ಸಾಯ್ಬ್ರ್ಅರೇಚಲೋಚಲೋನೀನು ಮುಂದೆ ಮುಂದೆ ಓಗುನಾನು ಹಿಂದೆ ಹಿಂದೆ ಬರ್ತದೆ.. ಚಲೋ ಚಲೋ

 

(ಅಷ್ಟೊತ್ತಿಗೆ ನಾಗ್ವೇಣಿ ಬೊಬ್ಬಿ ಹೊಡುಕ್ ಶುರು ಮಾಡ್ತ್ಲ್…)

ನಾಗ್ವೇಣಿಹ್ವಾಯ್ ಇಲ್ಕಾಣಿ.. ಇಲ್ಕಾಣಿನನ್ ಮೈ ಮುಟ್ತಾಅಂವ

ಸಾಯ್ಬ್ರ್ ಲಡ್ಕೀ ಲಡ್ಕೀ

ಕಾಳಏನಾಮುಂದ್ ಮುಂದ್ ಹೋಯ್ನಿ ಅಂದೇಳಿ ಹೇಳ್ಕಂಡ್ನಾ ಮುಂದ್ ಹೋಪತಿಲ್ ಹಿಂದಿಂದ್ ನನ್ ಹೆಂಡ್ತಿ ಮೈ ಮುಟ್ತ್ಯಾ? ಏನಾಎಂತದ್ ನಿನ್ ಕತಿಎಂತ ಅಂದೇಳಿ ಮಾಡಿದ್ಯಾ ನೀನ್

ಸಾಯ್ಬ್ರ್ನಾನು ಮುಟ್ಟಿದ್ದಲ್ಲಮುಟ್ಟಿ ಹೋದದ್ದು….

ಕಾಳಎಂತದ್ಮುಟ್ಟಿ ಹೋದ್ದಾನಿನ್ ನಿನ್…. ನೀ ಆಗಳಿಂದೀಚಿಗ್ ಏನೋ ಒಂಥರಾ ಮಾತಾಡ್ತಿದ್ದೆನಿನ್ ಕಂಡ್ರ್ ನಂಗ್ ಅನ್ಮಾನ ಬತ್ ಬಲ್ಯಾ

ಸಾಯ್ಬ್ರ್ಅರೇ ನಮ್ದು ಮ್ಯಾಲೆ ನಿಂಗೆ ಯಾಕೆ ಅನ್ಮಾನ…?

ಕಾಳಅನ್ಮಾನ ಯಾಕಂದ್ರೆ.. ಇದನ್ನೆಲ್ಲಾ ಕಾಂತಿದ್ರೆ.. ನಿಂದ್ ಯಾಸ ಆಯಿ ಕಾಣತ್ ಬಲ್ಯಾ…?

ಸಾಯ್ಬ್ರ್ಅರೇಬರ್ಕತ್ತಿಲ್ಲ ಖಾನ್ಉಉ

ಕಾಳಬರ್ಕತ್ತಿಲ್ಲಪುರ್ಸೊತ್ತಿಲ್ಲ… (ಗಡ್ಡ ಹಿಡ್ದ್ ಎಳಿತಗಡ್ಡ ಕಳ್ಚಿ ಕೈಗ್ ಬತ್ತ್)

..ಹೋಗಡ್ಡ ಕಟ್ಕಂಡ್ ಇಲ್ಲಿವರಿಗ್ ಬಂದನಾ ನೀನ್.. ನೀನ ಯಾರಾ…?

ನಾಗ್ವೇಣಿಹ್ವಾಯ್.. ಮೊನ್ನೆ ಬಂದ್ ನನ್ ಶೀಲ ಹಾಳ್ ಮಾಡದ್ ಇವ್ನೇಇವ್ನೇ..

ಕಾಳಒಹೋಇದ್ ಬ್ಯಾರೆ ಯಾರೂ ಅಲ್ಲಇದ್ ಮಹಾರಾಜವೀರ್ಯಗುಪ್ತ

ಎಂಥಾ ಕೆಲ್ಸ ಮಾಡಿಬಿಟ್ಟೆಮಹಾರಾಜ…. ಎಂಥಾ ಕೆಲ್ಸ ಮಾಡಿಬಿಟ್ಟೆ

 

( ಕಾಳನಿಗೂ ಮಹಾರಾಜನಿಗೂ ಜೋರ್ ಜೋರ್ ಮಾತ್ ಆತ್ತ್ಕಡಿಗೆ ಕಾಳ ಮಹಾರಾಜನ ಎದುರು ಹುಲಿ ಕಣಗೆ ಅಬ್ರ ತೋರ್ಸಿಕತ್ತಿ ತಕಂಡ್ ಅವನ್ನೇ ಕೊಂದ್ ಹಾಕಿಹೆಂಡ್ತಿಯೊಟ್ಟಿಗೆ ಹೊಳಿಗ್ ಹಾರಿ ಜೀವ ತೆಕ್ಕಂತ)


ಸುಮಾರ್ ದಿವ್ಸ್‌ದ್ ಹಿಂದೆ ಕಾಳನ್ ಕತಿ ಇದೇ ಬ್ಲಾಗಗೆ ಓದದ್ ನೆನ್ಪ್ ಇತ್ತಾ? ಅದ್ರದ್ ಮುಂದಿನ್ ಭಾಗ ಇಲ್ಲಿತ್ತ್ ಕಾಣಿ…

 

ಕಾಳ ಮತ್ ನಾಗ್ವೇಣಿ ಜಗ್ಳ ಮಾಡ್ತಾ ಇಪ್ಪತಿಗೆ ಒಬ್ರ್ ಸಾಯ್‌ಬ್ರ್ ಒಳ್ಗ್ ಬತ್ರ್.

ಅವ್ರಿಬ್ರ್ ಲಡಾಯಿ ಮಾಡತ್ ಕಂಡ್ ಸಾಯ್ಬ್ರ್ ಕೇಂತ್ರ್…

 

ಸಾಯ್ಬ್ರ್- ಅರೇ ಕ್ಯಾರೇ… ಅರೇ ಕ್ಯಾರೇ

ಕಾಳ – ಅದೆಲ್ ಬಂತೆ…?

ಸಾಯ್ಬ್ರ್- ಅರೇ…ನಿಮ್ದು ಏನು ಹುಡುಕ್ತದೆ…

ಕಾಳ – ಅದೇ ನೀವ್ ಕ್ಯಾರಿ ಕ್ಯಾರಿ ಅಂದ್ರ್ಯಲ್ದಾ…. ನಾ ಹಂಗಾರ್ ಹಾವ್ ಗಿನ್ ಒಳ್ಗ್ ಬಂದಿತಾ ಕಾಂತಿದ್ದೆ…

ಸಾಯ್ಬ್ರ್-ಆವು ನಹೀ ಕ್ಯಾರೇ… ಅರೆ ಕ್ಯಾರೇ

ಕಾಳ – ಹಾವು ನಹೀ ಕ್ಯಾರೇ ಅಂಬ್ದೇ ಒಂಜಾತಿ ಹಾವಾ?

ಸಾಯ್ಬ್ರ್- ಅರೆ ನಿಮ್ದು ಏನು ಹೇಳ್ತದೆ… ಕ್ಯಾರೆ ಕ್ಯಾರೆ… ಅಂದ್ರೆ ಏನು ಏನು…

ಕಾಳ – ಕ್ಯಾರೆ ಆಂದ್ರೆ ಏನಾ…. ಏನಂದೇಳಿ ಹೇಳ್ವ…ಅದಿರ್ಲಿ…ನಾನು.. ನನ್ ಹೆಂಡ್ತಿ ಒಳ್ಗಿಪ್ಪತಿಗೆ ಪುಸಕ್ಕ್‌ನೆ ಒಳ್ಗ್ ಬಂದ್ರ್ಯಲ… ನೀವ್ ಯಾರ್… ಎಲ್ಲಿಗ್ ಹೋಪರ್? ಈ ಬದಿಗ್ ಏನ್ ಬಂದ್ರಿ?

ಸಾಯ್ಬ್ರ್- ನಿಮ್ದು ರಾಜಾ ರಸ್ತಾ ಇಲ್ಲಾ..

ಕಾಳ – ಎಂತದ್…. ನೀವ್ ಸಲ್ಪ್ ಸಮ್ ಮಾಡಿ ಹೇಳಿನಿ ಮರಾಯ್ರೆ

ಸಾಯ್ಬ್ರ್- ಅರೆ ನಿಮ್ದು ರಾಜ ರಸ್ತಾ… ರಸ್ತೆ..ರಸ್ತೆ ಇಲ್ಲಾ…

ಕಾಳ – ಹಾಂ..ಹಾಂ..ರಸ್ತಿ… ಇದ್ದಿತಲೆ

ಸಾಯ್ಬ್ರ್- ಆ ರಸ್ತೆಯಲ್ಲಿ ನಮ್ದು ಹೋಗ್ತಾ ಇತ್ತು…

ಕಾಳ – ನಿಮ್ದ್ ರಸ್ತಿಯಗೆ ಹೋಪತಿಗೆ ನೀವೆಂತ ಮಾಡ್ತಿದ್ದಿರಿ?

ಸಾಯ್ಬ್ರ್- ಅರೇ…. ನಮ್ದು ಹೋಗ್ತಾ ಇತ್ತು…

ಕಾಳ – ಹಾ… ನೀವ್ ಹೋತಿದ್ದಿರ್ಯಾ…. ಎಲ್ಲಿಗ್ ಹೋತಿದ್ದಿರಿ?

ಸಾಯ್ಬ್ರ್- ಅರೆ ನಮ್ದು ದುಕಾನ್ ಇಲ್ಲಾ…

ಕಾಳ – ಎಂತದ್…. ದು..ಕಾ..ನಾ…?

ನಾಗ್ವೇಣಿ – ಹ್ವಾಯ್ ಅವ್ರ್ ದೂರ್ದಿಂದ್ ಬಂದರಂಬ್ರೆ…

ಕಾಳ – ನೀ ಸಲ್ಪ ಸುಮ್ನಾಯ್ಕಂತ್ಯಾ ಇಲ್ಯಾ….ಕಡ್ದ್ ಬಿಸಾಕಿ ಬಿಡ್ವೆ ನಿನ್ನೀಗ..

ಸಾಯ್ಬ್ರ್- ಆ ಚೋಕ್ರಿ ಏನು ಹೇಳ್ತದೆ…?

ಕಾಳ – ಏಯ್… ಚೋಕ್ರಿ ಅಲ್ದಾ…ಅದ್ ನನ್ ಹೆಂಡ್ತಿ…

ಸಾಯ್ಬ್ರ್- ಹೇಂಡ್ತಿ… ಏ ಹೇಂಡ್ತಿ… ಏ ಹೆಂಡ್ತಿ…

ಕಾಳ – ಏಯ್… ಏನಾ… ನಂಗ್ ಹೆಂಡ್ತಿಯಾರೆ ಬಂದ್ ನಿಂಗೂ ಹೆಂಡ್ತಿಯನಾ?

ಸಾಯ್ಬ್ರ್- ನಿಂದೂ ಹೆಂಡ್ತಿ… ಅರೆ ಉಸ್ಕೆ ನಾಮ್ ಬೋಲೋ…

ಕಾಳ – ಈಗಾಣ್ ನೀ ಉಸ್ಕ್ ಪುಸ್ಕ್… ಅಂದ್ರೆ ನಂಗ್ ಗೊತ್ತಾತಿಲ್ಲ ಮರಾಯ

ಸಾಯ್ಬ್ರ್- ಉಸ್ಕಿ ನಾಮ್… ಅದ್ರದ್ದು ಹೆಸ್ರು ಹೇಳು.. ಬೋಲೋ ಬೋಲೋ.

ಕಾಳ – ಅವ್ಳ್ ಹೆಸ್ರು ಬೋಳು ಅಂದೇಳಿ ನಿಂಗ್ಯಾರ್ ಹೇಳದ್?

ಸಾಯ್ಬ್ರ್- ಅದ್ರದ್ದು ಎಸ್ರು..ಹೇಳು..ಹೇಳು

ಕಾಳ – ಅವ್ಳ್ ಹೆಸ್ರ್ ನಾಗ್ವೇಣಿ ಅಂದೇಳಿ

ಸಾಯ್ಬ್ರ್- ಅರೇ ನಾಗ್‌ಮ್ಯಾಣಿ

ಕಾಳ – ನಾಗ್‌ಮ್ಯಾಣಿ ಅಲ್ಲ… ಕುಷ್ಟ್ ಮ್ಯಾಣಿ…

ಸಾಯ್ಬ್ರ್- ಕುಷ್ಟ್‌ಮ್ಯಾಣಿ… ಕುಷ್ಟ್‌ಮ್ಯಾಣಿ

ಕಾಳ – ಇಗಾ ನಿಂಗ್ ಹೇಳುಕ್ ಬತ್ತಿಲ್ಲ. ಅವ್ಳ್ ಹೆಸ್ರು ನಾಗು ಅಂದೇಳಿ…

ಸಾಯ್ಬ್ರ್- ಅಚ್ಚಾ…ತುಮಾರಾ ನಾಮ್‌ಕೋ ಬೋಲೋ..

ಕಾಳ – ನೀ ಬರೀ ಅಲ್ದಿದ್ದೆಲ್ಲ ಹೇಳ್ಬೆಡ ಮರಾಯ…

ಸಾಯ್ಬ್ರ್- ಅರೆ ನಿಂದು ನಮ್ದುಕೆ ಮಸ್ಕಿರಿ ಮಾಡ್ತದೆ…

ಕಾಳ – ಮತ್ ನೀ ಎಂತ ಹೇಳುದ್ ಅದನ್ನಾರೂ ಸಮ್ ಮಾಡಿ ಹೇಳ್

ಸಾಯ್ಬ್ರ್- ತುಮಾರಾ…ನಾಮು..ಉ ನಿಂದು ಎಸ್ರು ಹೇಳು…

ಕಾಳ – ಓ ನನ್ ಹೆಸ್ರಾ.. ನನ್ ಹೆಸ್ರ್ ಕಾಳ ಅಂದೇಳಿ

ಸಾಯ್ಬ್ರ್- ನಿಮ್‌ದು ಗಂಡಾ ಹೆಣ್ತಿ..?

ಕಾಳ – ಹಾ.. ನಾವಿಬ್ರ್ ಗಂಡ-ಹೆಂಡ್ತಿ

ಸಾಯ್ಬ್ರ್- ನಮ್ದು ದುಕಾನಾ ಅಂದ್ರೆ ನಿಂಗೆ ಗೊತಾಗ್‌ಲಿಲ್ಲ…ಅಂಗ್ಡಿ ಅಂಗ್ಡಿ ಗೊತ್ತಿಲ್ಲ…

ಕಾಳ – ಅಂಗ್ಡಿಯಾ…. ಆಯ್ಲಿ… ಎಂತ ಅಂಗ್ಡಿ?

ಸಾಯ್ಬ್ರ್- ನಮ್ದು ಬಡಾ ದುಕಾನಾ..ಬಹುತ್ ಬಡಾ…

ಕಾಳ – ನೀ ಬಡವ್‌ನಾ.. ನಾವ್ ಮೊದ್ಲೇ ಬಡ್ವರ್… ನೀ ಇಲ್ಲಿಗ್ ಯಾಕೋ ಬಂದೆ ಮಾರಾಯಾ..

ಸಾಯ್ಬ್ರ್- ಬಡಾ ಅಂದ್ರೆ ದೊಡ್ದು.. ದೊಡ್ದು…

ಕಾಳ – ಹೋ ಬಡಾ ಅಂದ್ರ್ ದೊಡ್ದಾ…. ಅಡ್ಡಿಲ್ಲೆ.. ಎಂತ ಅಂಗ್ಡಿ?

ಸಾಯ್ಬ್ರ್- ಕಪಡಾ..ಕಪಡಾ…..

ಕಾಳ – ಕವ್ಡಿ ಕವ್ಡಿ.. ಎಂತ ಅಂದೇಳಿ ಸಮ್ ಮಾಡಿ ಹೇಳಾ

ಸಾಯ್ಬ್ರ್- ಅರೇ ಇದರ್ ದೇಖೋ ಕಪ್ಡಾ..ಕಪ್ಡಾ… ( ಅಂಗಿ ತೋರ್ಸಿ ಹೇಳ್ತ್ರ್…)

ಕಾಳ – ವಸ್ತ್ರದಂಗಡಿ ಸಾಯ್ಬ್‌ರಾ ನೀವ್

ನಾಗ್ವೇಣಿ- ಹ್ವಾಯ್… ಅವ್ರ್ ಅಂಗ್ಡಿಯಗೆ ಲಾಯ್ಕ್ ಲಾಯ್ಕಿದ್ ಸೀರಿ ಇದ್ದಿರ್ಕ್… ಕಂಡ್ಕಂಡಾರೂ ಬರ್ಲಕಿದ್ದಿತ್ ಅಲ್ದೇ?

ಸಾಯ್ಬ್ರ್- ಹಮಾರೇ ದುಕಾನ್ ಮೇ ಕಾಶಿ ಶೀರೆ ಮಿಲೆಗಾ, ಕಾಶ್ಮೀರಿ ಶೀರೆ ಮಿಲೆಗಾ, ರೇಶ್ಮೆ ಶೀರೆ ಮಿಲೆಗಾ… ಸ್ವದೇಶಿ ಶೀರೆ ಮಿಲೆಗಾ… ವಿದೇಶಿ ಶೀರೆ ಮಿಲೆಗಾ…ಔರ್ ಬನಾರಸಿ ಶೀರೆ ಭೀ ಮಿಲೇಗಾ…

ನಿಂದು ಹೆಣ್ತಿ ಕಳ್ಸು.. ನಮ್ದು ಒಂದು ಶೀರಿ ಉಡ್ಸಿ ಕಳ್ಸ್‌ತದೇ…

ಕಾಳ – ಹ್ವಾಯ್…

ಸಾಯ್ಬ್ರ್- ನಮ್ದು…ಶೀರಿ ಉಡ್ಸಿ ಕಳಿಸ್ತದೆ..

ಕಾಳ – ಹೋ.. ಅಡ್ಡಿಲ್ಲ…ಅವ್ಳ್ ಬಪ್ಪುಕೆ.. ನೀ ಸೀರಿ ಉಡ್ಸಿ ಕಳ್ಸುಕೆ.. ಅಡ್ಡಿಲ್ಲ.. ಎಲ್ಲಾ ನಿಮ್‌ನಿಮ್ಮೊಳ್ಗೇ ಅಲ್ದಾನಾ?

ಸಾಯ್ಬ್ರ್- ಅರೇ.. ಬರ್ತದೆ ಅಂತ ನಿಂದು ಹೆಣ್ತಿ ಹೇಳ್ತಲ್ಲ..

ಕಾಳ – ಸುಮ್ನಾಯ್ಕಣಾ..ಬರೀ ಅಲ್ದಿದ್ದೆಲ್ಲ ಮಾತಾಡ್‌ಬೇಡ…

ಹ್ವಾಯ್ಲಿ…. ಎಂತ ವಸ್ತ್ರದ್ ಅಂಗ್ಡಿ ಸಾಯ್ಬ್ರ್ ಅಂದ್ರ್ಯಾ.. ನಿಮ್ ಹೆಸ್ರ್…

ಸಾಯ್ಬ್ರ್- ಪುರ್ಸೊತ್ತಿಲ್ಲ ಖಾನ್…

ಕಾಳ – ಎಷ್ಟೊತ್ತಿಗೂ ಪುರ್ಸೊತ್ತಿಲ್ಯಾ ನಿಮ್ಗೆ…?

ಸಾಯ್ಬ್ರ್- ಅರೇ ನಮ್ದು ಎಸ್ರು ಹೇಳ್ತು

ಕಾಳ – ಎಂತ ಪುರ್ಸೊತ್ತಿಲ್ಲ ಖಾನ್‌ಆಆ.. ನಿಮ್ ಅಪ್ಪ್‌ಯ್ನ್ ಹೆಸ್ರ್..

ಸಾಯ್ಬ್ರ್- ಬರ್ಕತ್ತಿಲ್ಲ ಖಾನ್…

ಕಾಳ – ಸಮ್ನೇ. ನಿಮ್ಗ್ ಪುರ್ಸೊತ್ತಿಲ್ಲ… ಅವ್ರಿಗೆ ಬರ್ಕತ್ತಿಲ್ಲ…. ಅದಿರ್ಲಿ.. ಇಲ್ಲಿಗೇನ್ ಬಂದ್ರಿ..

ಸಾಯ್ಬ್ರ್- ಅದೇ ನಮ್ದು ರಾಜಾ ರಸ್ತೆಯಲ್ಲಿ ಹೋಗುವಾಗ ನಿಮ್ದು ಗಲಾಟಾ ನಡಿತಿತ್ತಲ್ಲಾ.. ಸಾಕಾ ಬೇಕಾ ಕೇಳ್ತಿತ್ತಲ್ಲ..ಹೊಡ್ಕೊಳ್ತಿತ್ತಲ್ಲಾ ನಿಮ್ದು… ನಿಮ್ದು ಯಾಕೇ ಹೊಡ್ಕೊಳ್ತು…ನಾನು ನೋಡ್ತದೆ…ಪಂಚತ್ಗಿ ಮಾಡ್ತದೆ…

ಕಾಳ – ನೀ ಎಂಥ ಕರ್ಮ್‌ದ್ ಪಂಚತ್ಗಿ ಮಾಡ್ತೆ ಮರಾಯಾ..

ಸಾಯ್ಬ್ರ್- ಅರೇ ನಮ್ದುಕೇ ಪಂಚತ್ಗಿ ಮಾಡ್ಲಿಕ್ಕೆ ಬರ್ತದೆ…ನೀನು ಏಳು… ನಾನು ಕೇಳ್ತದೆ… ನ್ಯಾಯ ತೀರ್ಮಾನ ಕೊಡ್ತದೆ…

ಕಾಳ – ಆಯ್ಲಿ ಸಾಯ್ಬ್ರೆ… ಒಳ್ಳೇ ಹೊತ್ತಿನಗೇ ಬಂದ್ರಿ ನೀವ್… ನಿಮ್ಕೇಲಾರೂ ಹೇಳ್ತೆ ನಾನ್… ಕೇಣಿ…

 

( ಉಳದ್ ಮುಂದಿನ್ ಸರ್ತಿಗೆ ಕಾಂಬ ಅಕಾ….)


ಹಾಸ್ಯ ಬೆರ್ಸ್ ಮಜ್ಜಿಗಿಅಂದೇಳಿ ಒಂದ್ ಯಕ್ಷಗಾನದ್ ಎಂಪಿ3 ಇತ್ತ್. ಅದ್ರಗೆ ಪತ್ರಕರ್ತ ಬಸವರಾಜ್ ಶೆಟ್ಟಿಗಾರ್ರ್ ಬರದ್ದ್ ಒಂದ್ ಹಾಸ್ಯ ಪ್ರಸಂಗ ಮೇಸ್ತ್ರಿ ಮಾದಯ್ಯಅಂದೇಳಿ ಇತ್ತ್. ಆ ಪ್ರಸಂಗದಗೆ ಹಳ್ಳಾಡಿ ಜಯ್ರಾಮ ಶೆಟ್ರದ್ ಮೇಸ್ತ್ರಿ ಮಾದಯ್ಯನ ಪಾರ್ಟ್. ಅವ್ರ್ ಸುರಿಗೆ ಕುಂದಾಪ್ರ ಶಾಸ್ತ್ರಿ ಸರ್ಕಲ್ಲಗೆ ಬಂದ್ ಕೂತ್ಕಂಡ್ ಭಾಗ್ವತ್ರತ್ರ ಮಾತಾಡ್ತಾ ಒಂದ್ ಕತಿ ಹೇಳ್ತ್ರ್. ಆ ಕತಿ ಕೆಂಬ್ಕೆ ಒಂದ್ನಮನಿ ಗಮ್ಮತಿತ್ತ್. ನೀವೂ ಒಂಚೂರ್ ಕೇಣಿ…

 

ಇದ್ ಭಾರೀ ಹಿಂದಿನ್ ಕಾಲದ್ ಕತಿ. ದೇವ್ರ್ ಒಂದ್ಸಲಿ ಪ್ರಾಣಿಗಳನ್ನೆಲ್ಲ ಒಟ್ಟಾಯಿ ಬಪ್ಪುಕೆ ಹೇಳ್ರಂಬ್ರ. ಈ ಮನುಷ್ಯ ಸೈತ ಒಂಜಾತಿ ಪ್ರಾಣಿ ಅಲ್ದಾ.. ಆರೂ ಇವ್ರ್ ಜಾಪ್ ಬಿಡತ್ತಾ.. ಬೇರೆ ಪ್ರಾಣಿಗಳನ್ನೆಲ್ಲ ಕರ್ದಾಗ್ಳಿಕೆ ಹೋರೆ ನಮ್ಮ್ ಮರ್ಯಾದಿಗ್ ಕಡ್ಮಿ ಅಲ್ದಾ ಅಂದೇಳಿ ಸುರೀಕೆ ಮನುಷ್ಯರ್ ಹೋಯ್ಲೇ ಇಲ್ಲಾ ಅಂಬ್ರ್. ಪ್ರಾಣಿಗಳೆಲ್ಲಾ ಹೋರ್‌ಗತಿಲ್ ದೇವ್ರ್ ಹೇಳ್ರಂಬ್ರ್… ಬಪ್ಪುಕ್ ಹೇಳದ್ ಮತ್ತೆಂತಕ್ ಅಲ್ಲ. ಯಾವ್ ಯಾವ್ ಪ್ರಾಣಿಗೆ ಎಷ್ಟ್ ಎಷ್ಟ್ ಆಯುಷ್ಯ ಅಂದೇಳಿ ಹೇಳುಕೆ ಕರದ್ದ್‘. ಹಾಂಗೇ ಒಂದೊಂದ್ ಪ್ರಾಣಿಗೆ ಎಷ್ಟೆಷ್ಟ್ ವರ್ಷ ಅಂದೇಳಿ ದೇವ್ರ್ ಹೇಳ್ರಂಬ್ರ್. ಕತ್ತಿಗೆ ಒಂದ್ 60 ವರ್ಷ, ನಾಯಿಗೆ ಒಂದ್ 30 ವರ್ಷ, ಮಂಗನಿಗೆ ಒಂದ್ 30 ವರ್ಷ ಅಂದೇಳಿ ಎಲ್ಲಾ ಹಂಚ್ರಂಬ್ರ್. ಈ ಬದ್ಯಗೆ ಮನುಷ್ಯರ್ ಇದ್ರಲ್ದಾ… ಅವ್ರ್ ಕಡೀಕೆ ಇದೆಂಥ ಕಂಡೇ ಬಿಡ್ವ ಅಂದೇಳಿ ದೇವ್ರ್ ಬುಡಕ್ ಹೋರಂಬ್ರ್. ದೇವ್ರ್ ಹೇಳ್ರಂಬ್ರ… ನಾನ್ ಎಲ್ಲಾ ಪ್ರಾಣಿಗಳಿಗೆ ಆಯುಷ್ಯ ಹಂಚಿ ಆಯ್ತ್. ನೀವ್ ಬಪ್ ಸಮಿಗೆ ಭಾರೀ ತಡ ಆಯ್ತ್. ನಿಮ್ಗ್ ಉಳದ್ 30 ವರ್ಷ ಮಾತ್ರ.

ಇದನ್ನ್ ಕೇಂಡ್ ಮನುಷ್ಯರಿಗೆ ಜೀವ್ ಹಾರಿ ಹೋಯ್ತ್. ಸಮಾ ಬುದ್ಧಿ ಭಾಷಿ ಬತ್ತ್ ಅಂಬತಿಗೆ 10 ವರ್ಷ ಆಯಿ ಹೋಯಿರತ್. ಕಡಿಕೆ ಎ0ತಾರೂ ಕಲುದ್ರೊಳ್ಗೆ ಮತ್ತ್ ಹತ್ತ್ ಹೋತ್ತ್. ಇನ್ನ್ ಕಲ್ತ ಆಯಿ ಏನಾರೂ ಕೆಲ್ಸ ಮಾಡ್ಕ್ ಮಾಡ್ಕ್ ಅಂಬುದ್ರೊಳ್ಗೇ 30 ವರ್ಷ ಆತ್ತಲೆ. ಏ ದೇವ್ರೆ ಹೀಂಗಾರೆ ನಾವ್ ಜೀವನದಗೆ ಸುಖ ಪಡುದ್ ಎಂತ ಇತ್ತ್ ನೀವೇ ಒಂಚೂರ್ ಆಲೋಚ್ನಿ ಮಾಡಿ. 30 ವರ್ಷ ಏನೇನೂ ಸಾಕಾತಿಲ್ಲ…ಅಂದ್ರ್.

ಅವ್ರ್ ಇಷ್ಟ್ ಬೇಡತ್ ಕಂಡ್ ದೇವ್ರಿಗೂ ಪಾಪ ಅಂಮಗಾಯ್ತ್. ಹೋಯ್ಲಿ… ಕತ್ತಿಗೆ 60 ವರ್ಷ ಕೊಟ್ಟಿದೆ… ಅದ್ರಗೆ ನಿಮ್ಗ್ 30 ವರ್ಷ ತೆಗ್ದ್ ಕೊಡ್ತೆ ಸಾಕಲ್ದಾ ಅಂದೇಳಿ ಕೇಂಡ್ರ್. ಮನುಷ್ಯರ್ ಮತ್ ಆಲೋಚ್ನಿ ಮಾಡುಕ್ ಸುರು ಮಾಡ್ರ್. ಆರೂ ಸಾಕಾತಿಲ್ಲ ಅಂಮಗಾಯ್ತ್. ಇನ್ನೊಂಚೂರ್ ಜಾಸ್ತಿ ಮಾಡಿ ಅಂದೇಳಿ ಕೇಂಡ್ರ್. ಅದಕ್ಕೂ ದೇವ್ರ್ ಹೂಂ ಹಾಕ್ರ್. ಹೋಯ್ಲಿ ನಾಯಿಗ್ 30 ವರ್ಷ ಕೊಟ್ಟಿದೆ. ಅದ್ರಗೆ 20 ತೆಗ್ದ್ ನಿಮ್ಗ್ ಕೊಡ್ತೆ. ನಿಮ್ಗ್ ಅಲ್ಲಿಗ್ 80 ವರ್ಷ ಆಯುಷ್ಯ ಆಯ್ತ್ ಕಾಣಿ ಅಂದೇಳಿ ದೇವ್ರ್ ಹೇಳ್ರಂಬ್ರ್. ಮನಷ್ರ್ ಆಶಿ ಎಲ್ಲಿವರಿಗ್ ಕಾಣಿ. ಅದೂ ಸಾಕಾಯಲ್ಲ ಅಂದೇಳಿ ದೇವ್ರ್ ಹತ್ರ್ ಪಿರಿಪಿರಿ ಮಾಡುಕ್ ಶುರು ಮಾಡ್ರ್. ನಮ್ಗ್ ಒಂದ್ ನೂರ್ ವರ್ಷ ಬದ್ಕಕಮಗಿತ್ತ್. ಏನಾರೂ ಮಾಡಿ ಇನ್ನೊಂದ್ ಇಪ್ಪತ್ ಕೊಟ್ಟಿರ್ ಆತಿದ್ದಿತ್ ಅಂಬುಕ್ ಶುರು ಮಾಡ್ರ್. ದೇವ್ರಿಗ್ ಇವ್ರ್ ಕರ್ಕರಿ ಮುಗ್ದಿರ್ ಸಾಕಾಯಿತ್. ಹೋಯ್ಲಿ ಅತ್ಲಾಗೆ ಅಂದೇಳಿ ಮಂಗನಿಗ್ ಕೊಟ್ಟದ್ 20 ವರ್ಷ ತೆಗ್ದ್ ಒಟ್ಟ್ ನೂರ್ ವರ್ಷ ಆಯುಷ್ಯ ಮನುಷ್ಯರಿಗೆ ಕೊಟ್ರ್.

 

ನೀವ್ ಹೌದಾ ಸುಳ್ಳಾ ಕಾಣಿ ಬೇಕಾರೆ. ಈ ಮನುಷ್ಯರ್ 30 ವರ್ಷದಿಂದ 60 ವರ್ಷ ಆಪಲ್ಲಿವರಿಗೆ ದುಡುದ್ ಕಂಡರೆಲ್ಲ ಹೇಳ್ತ್ರ್…ಅಂವ ಏನ್ ಕೆಲ್ಸ ಮಾಡ್ತಾ ಮಾರಾಯಾ. ಗೇಯುದಂದ್ರೆ.. ಕತ್ತಿ ಗೇಯ್ದಂಗ್ ಗೇಯ್ತ ಕಾಣ್ ಅಂತ್ರ್. ಅದೆಂತಕ್ ಅಂದೇಳಿ ಮಾಡಿರಿ. ಕತ್ತಿದ್ 30 ವರ್ಷ ಬಂದದಕ್ಕೇ ಹಾಂಗ್ ಕತ್ತಿ ಕಣಗೆ ಗೇಯುದ್. 60 ವರ್ಷ ಆಪ್ ಸಮಿಗೆ ಕೆಲ್ಸ ಮಾಡು ಕಾಲ ಎಲ್ಲ ಮುಗ್ದ್ ಹೋಯಿರತ್. ಹೋದ್ದ್ ವರ್ಷ ಹೆಚ್ಚ್ ಉಳದ್ ಕಡ್ಮಿ. ಹಿಂದಿಂದೆಲ್ಲ ನೆನ್ಪ್ ಮಾಡ್ಕಂತ.. ಆ ಮಗ ಕೊಡ್ತ್ನಾ, ಈ ಮಗ್ಳ್ ಕರಿತ್ಲಾ… ಆ ಅಳಿಯ ಕೊಟ್ಟಿರ್ ಆತಿದ್ದಿತ್ ಅಂದೇಳಿ ಕಾಯುದೇ ಆತ್. ಎಂತಕಂತೇಳಿ ಮಾಡಿರಿ. ಅದ್ ನಾಯಿದ್ 20 ವರ್ಷ ಆಯುಷ್ಯ ತಕಂಡದ್ದಲ್ದಾ… ಹಾಂಗಾಯಿ ನಾಯಿ ಕಾದಂಗ್ ಕಾಯುದೇ ಆತ್ತ್. ಕಡೀಕಿದ್ 20 ವರ್ಷ ಥೇಟ್ ಮಂಗನೇ… ಉಡುಕ್ ಒಂದ್ ವಸ್ತ್ರ, ಉಂಬುಕ್ ಒಂದ್ಮುಷ್ಟಿ ಗಂಜಿ ಇದ್ರ್ ಸಾಕ್. ಮತ್ತೇನೂ ಬೇಕಾಯಿಲ್ಲ. ಬೋಡ್ ಬಾಯಿ ಮಾಡ್ಕಂಡ್ ಹಳ್ತೆಲ್ಲ ನೆನ್ಪ್ ಮಾಡ್ಕಂತ ಮಂಗನ್ ಕಣಗೆ ಆಡುದೇ ಸೈಯಲ್ದಾ?

ಹ್ಯಾಂಗಿತ್ತ್ ಕತಿ… ನಂಗ್ ಸಮ ಹೇಳುಕ್ ಬತ್ತಿಲ್ಲ… ಏನಿದ್ರೂ ಜಯ್ರಾಮ್ ಶೆಟ್ರ್ ಬಾಯಗೇ ಕೇಂಬುಕೆ ಚಂದ.


ಮಳ್ಗಾಲ ಬಂದ್ರ್ ಸಾಕ್ ಕಾಣಿ. ನಂಗಂತೂ ಎಲ್ಲಿಲ್ಲದ್ ಖುಷಿ. ಮೂರೊತ್ತೂ ಬಿಡ್ದೆ ಮಳಿ ಹೊಡುವತಿಗೆ ಮನಿ ಒಳ್ಗ್ ಕೂಕಂಡ್ ಕಾಂಬುದೇ ಒಂದ್ ಚೆಂದ. ಸಣ್ಣಕಿಪ್ಪತ್ತಿಗೆ ಚೂರ್ ಮಳಿ ಬಿಟ್ರೂ ಸಾಕ್, ಗುಡ್ಡಿ ಬದಿಯಿಂದ್ ಹರ್ಕಂಡ್ ಬಪ್ಪ್ ನೀರಿಗೆ ಕಟ್ ಕಟ್ಟಿ, ಮಣ್ಣಂಗ್ ಆಡುದ್, ಹೊಳಿಯಗೆ ನೆರಿ ಬಂದ್ರೆ ನೀರ್ ಎಷ್ಟ್ ಏರಿತ್ ಅಂದೇಳಿ ಕಾಂಬುಕೆ ಮನೆಯರದ್ ಪಿರಿಪಿರಿ ಮಧ್ಯವೇ ಕೊಡಿ ಹಿಡ್ಕಂಡ್ ಹೋಯಿ ಕಾಂತಾ ಕೂಕಂತಿದ್ದದ್ದ್… ಎಲ್ಲಾ ನಿನ್ನೆ ಮೊನ್ನೆ ಅಂಬಂಗಿತ್ತ್. ಘಾಟಿಯಗೆ ಜೋರ್ ಮಳಿ ಬಂದ್ರೆ ದೊಡ್ ದೊಡ್ ಮರನ್ ತುಂಡ್, ಯಾರ್ದಾರೂ ತ್ವಾಟಕ್ ನೀರ್ ಹೊಗ್ರೆ ಬಳ್ಕಂಡ್ ಬತ್ತಿದ್ದ ಇಡಿಡೀ ಅಡ್ಕಿ ಮರ, ಜೋರ್ ಮಳಿ ಬಂದ್ರೆ ಶಾಲಿಗ್ ರಜಿ ಸಿಕ್ತಿದ್ದದ್… ಎಲ್ಲಾ ಕಣ್ಣಿಗ್ ಕಟ್ದಂಗ್ ಇತ್ತ್. ಒಲಿದಂಡಿ ಬದ್ಯಗೆ ಚಳಿ ಕಾಯ್ಸತಾ, ಹಲ್ಸಿನ್‌ಕಾಯಿ ಹಪ್ಳ ಸುಟ್ಕಂಡ್ ತಿಂತಿದ್ದದ್ ಇನ್ನೂ ಹಲ್ಲಿಗ್ ಹಿಡ್ಕಂಡಿತ್ ಅಂಬಂಗಿತ್ತ್. ಈಗ ಬೆಂಗ್ಳೂರಿಗ್ ಬಂದ್ ಮೇಲೆ ಊರಗಿನ್ ಮಳ್ಗಾಲ ನೆನ್ಪ್ ಮಾಡ್ಕಂತಾ ರಸ್ತಿ ಮೇಲ್ ಚರಂಡಿ ನೀರ್ ತೋಡ್ ಕಣಂಗ್ ಹರ್ದ್ ಹೋಪುದ್ ಕಾಂತಾ ಕೂಕಣ್ಕ್ ಅಷ್ಟೆ J

 

ಆರೂ ಬೆಂಗ್ಳೂರಿಗ್ ಬಂದ್ ಮೇಲೆ ಮಳ್ಗಾಲ ಬಂದ್ರೆ ಖುಷಿ ಆಪುಕೆ ಒಂದ್ ವಿಷಯ ಇತ್ತೆ. ಎಂಥ ಅಂದ್ರೆ ಊರಗೆ ಮಳಿ ನಾಕ್ ಹನಿ ಬಿದ್ರ್ ಕೂಡ್ಲೆ ಆಟದ ಮ್ಯಾಳ್ದರ್ ಪೆಟ್ಗಿ ಎಲ್ಲಾ ಬಸ್ ಹತ್ಕಂಡ್ ಬೆಂಗ್ಳೂರಿಗೆ ಬತ್ತಲ್ದಾ.. ಹಾಂಗಾಯಿ ಜುಲೈ ತಿಂಗ್ಳಿಂದ 3 ತಿಂಗ್ಳ್ ವರಿಗೆ ಆಟ ಕಾಂಬುಕೆ ಅಡ್ದಿ ಇಲ್ಲ. ಪೆರ್ಡೂರ್, ಸಾಲಿಗ್ರಾಮದರ್ 2-3 ಸರ್ತಿ ಬಂದ್ ಹೋತ್ರಲ್ದೆ, ಮಂದರ್ತಿ, ಮಾರಣಕಟ್ಟಿ ಮ್ಯಾಳದವ್ರ್ ಸತೆ ಅತಿಥಿ ಕಲಾವಿದ್ರನ್ನೆಲ್ಲ ಕರ್ಸಿ ಆಟ ಆಡ್ತ್ರ್. ಅಲ್ದೆ ಯಾಜಿ, ಕಣ್ಣಿಮನೆ ಇವ್ರ್ ಗ್ರೂಪಿನರದ್ದೂ ಆಟ ಇರತ್ತ್. ಒಟ್ಟ್ರಾಸಿ 3 ತಿಂಗ್ಳ್ ಆಟ ಕಾಂಬರಿಗೆ ಹಬ್ಬವೇ ಸೈ. ಪೌರಾಣಿಕ ಪ್ರಸಂಗ, ಬರು ವರ್ಷದ್ ತಿರ್ಗಾಟದ್ ಹೊಸ ಪ್ರಸಂಗ ಎಲ್ಲಾ ಇರತ್ತ್. ರಾತ್ರಿ ನಿದ್ರಿ ಬಿಡುಕೆ ಎಡ್ದರೆ ಎಷ್ಟ್ ಆಟ ಬೇಕಾರೂ ಕಾಣ್ಲಕ್. ರವೀಂದ್ರ ಕಲಾಕ್ಷೇತ್ರ, ಪುರಭವನದ್ ಬುಡ್ದಗ್ ರಾತ್ರಿ ಹತ್ ಗಂಟಿ ಸುರಿಗೆ ಹೋರೆ ಇನ್ನ್ ಚಂಡಿ ಮದ್ಲಿ ಶಬ್ದ ಕೆಮಿಗ್ ಬೀಳತ್ತ್.

 

ಎಲ್ಲಾ ಮ್ಯಾಳ್ದರೂ ಬತ್ತ್ರಾದ್ರೂ ನಂಗೆ ಪೆರ್ಡೂರ್ ಮ್ಯಾಳದ್ ಆಟ ಕಾಂಬುಕೆ ಬಾರೀ ಲಾಯ್ಕ್ ಆತ್ತ್. ಧಾರೇಶ್ವರ್‌ರು, ಸುರೇಶ್ ಶೆಟ್ರ ಭಾಗ್ವತ್ಗಿ, ತೀರ್ಥಳ್ಳಿ ಗೋಪಾಲಾಚಾರ್ರ ಕೊಣ್ಕಿ- ಮಾತ್, ರಮೇಶ್ ಭಂಡಾರಿ, ರವೀಂದ್ರ ಇವ್ರ ಹಾಸಿಗಾರ್ಕಿ, ಶಂಕ್ರ್ ಹೆಗ್ಡೆ ಸ್ತ್ರೀ ವೇಷ ಇದೆಲ್ಲ ಕಾಂಬುಕೆ ಎರ್ಡ್ ಕಣ್ನಿದ್ರೂ ಸಾಕಾತಿಲ್ಲ..ಕೇಂಬುಕೆ ಎರ್ಡ್ ಕೆಮಿ ಸಾಲ್ದೇ ಸಾಲ್ದ್. ನಂಗಂತೂ ಪೆರ್ಡೂರ್‌ನವ್ರದ್ ಎಂಟತ್ ಆಟ ಆರೂ ಕಾಣ್ದೇ ಇದ್ರೆ ಸಮಾಧಾನ ಇಲ್ಲ. ಅದೂ ಅಲ್ದೆ ಲಗ್ತ್ ಆಯಿ ಶನಿವಾರ ರಾತ್ರಿಗೆ ಒಳ್ಳೊಳ್ಳೆ ಪ್ರಸಂಗ ಎಲ್ಲ ಇಪ್ಪುಕೋಯಿ ಆಟ ಕಂಡ್ಕಂಡ್ ಆದಿತ್ಯವಾರ ನಿದ್ರಿ ತೆಗುಕೆ ಅಡ್ಡಿಲ್ಲ. ಕೆಲವ್ ಸರ್ತಿ ಅತಿಥಿ ಕಲಾವಿದ್ರಾಯಿ ಕಣ್ಣಿಮನಿ ಬಪ್ಪ್‌ದೂ ಇರತ್ತ್. ಅವ್ರ ಬಂದ್ರೆ ಆಟಕ್ ಇನ್ನೂ ಕಳಿ ಕಟ್ಟತ್. ಸಾಲಿಗ್ರಾಮದರದ್ದೂ ಆಟ ಒಂದೆರ್ಡ್ ಸರ್ತಿ ಕಾಂಬುಕೆ ಹೂತ್ನಾರೂ ನನ್ ಮನ್ಸಿಗ್ಯಾಕೊ ಅವ್ರ್ ಆಟ ಪೆರ್ಡೂರ್‌ನವ್ರಷ್ಟ್ ಹಿಡ್ಸುದಿಲ್ಲ ಕಾಣಿ.

 

ಬಪ್ ಜುಲೈ ೬ ನೆ ತಾರಿಕಿಂದ ಪೆರ್ಡೂರ್‌ನರ್ ಈ ಸರ್ತಿದ್ ಬೆಂಗ್ಳೂರಿನ್ ಮೊದಲನೆ ತಿರ್ಗಾಟ ಶುರು ಮಾಡ್ತ್ರಂಬ್ರ್. ಈ ಸರ್ತಿ ಒಂದ್ ನಾಕಾರು ಆಟ ಕಾಣ್ಕ್ ಅಂದೇಳಿ ಇತ್ತ್. ಆಟ ಕಾಂಬುಕೆ ನೀವೂ ಬತ್ರಿ ಅಲ್ದಾ… ನಂಗೆ ಯೇಗ್ಳೇಗ್ಳಿಕೆ ಯಾವ ಆಟ ಇತ್ತ್ ಅಂದೇಳಿ ಗೊತ್ತಾರೆ ನಾ ನಿಮ್ಗೆ ಬರ್ದ್ ತಿಳ್‌ಸ್ತೆ ಅಕಾ? ಹಂಗಾರೆ ಆಟದ್ ಗರದಂಗೆ ಸಿಕ್ವಾ?

 

ವಿಜಯ್‌ರಾಜ್ ಕನ್ನಂತ್