Posts Tagged ‘ನೆನಪು’


ಈ ಬ್ಲಾಗ್ ಬದಿಗೆ ಮಂಡಿ ಹಾಕಿ ಮನ್ಕಣ್ದೆ ಸುಮಾರ್ ದಿನ ಆಯ್ತ್. ಹಾಂಗಂದೇಳಿ ಬರುಕ್ ಪುರ್ಸೊತ್ ಇಲ್ಲ, ಬರುಕ್ ಮನ್ಸಿಲ್ಲ ಅಂದೇಳಿ ಅಲ್ಲ. ಹಾಂಗ್ ಕೇಂಡ್ರೆ ಈ ಬ್ಲಾಗಿಗೆ ಬರುಕೆ ನಂಗೂ ಮಸ್ತ್ ಖುಷಿಯೇ. ಆರೂ ಕಳ್ದ್ ತಿಂಗ್ಳ್ ಇಡೀ ಏನೋ ಒಂದ್ನಮನಿ ಉದಾಶಿನ ಹಿಡ್ದಂಗ್ ಆಯಿತ್. ಈಗ ಅದ್ನೆಲ್ಲ ಕೊಡ್ಕಿ ಹಾಕಿ ಬರುಕ್ ಕೂಕಂಡಿದೆ. ಇನ್ನ್ ಮೇಲೆ ಹೀಂಗೆಲ್ಲ ಹಾಂಟ್ ಹಾಕುದಿಲ್ಲ ಅಕಾ… ಸುಳ್ಳಾ-ಬದ್ಧವಾ ನೀವೇ ಕಾಣಿ ಬೇಕಾರೆ. ಈ ಬದಿಗೆಲ್ಲಾರೂ ನೀವ್ ನೀಕಿ ಕಂಡದ್ದೇ ಹೌದಾರೆ ಒಂದ್ ನಾಕ್ ಮಾತ್ ಹೇಳಿ ಮಾರಾಯ್ರೆ… ಇದ್ ಸಾಪಿತ್ತ್, ಇಲ್ಲಾ ಇದ ಚೂರೂ ಲಾಯ್ಕಿರಲ್ಲ, ಹೀಂಗ್ ಹೀಂಗ್ ಬರ್ದ್ರೆ ಒಳ್ಳೆದಿರತ್ತ್… ಅಂದೇಳಿ ಏನಾರೂ ಹೇಳ್ರೆ ನಂಗೂ ಬರುಕ್ ಒಂದ್ ಉಮೇದ್ ಬತ್ತ್. ಹೇಳ್ತ್ರಿ ಅಲ್ದಾ?
Cashew_-_sprout

cashew-sprout (3)

cashew-sprouts-250x250

ನೀವ್ ಏನೇ ಹೇಳಿ ಬೇಕಾರೆ.. ನಾವ ಸಣ್ಣಕಿಪ್ಪ ಸುರಿಗಿದ್ದ ದಿನದ್ ನೆನ್ಪಿನ ಚಂದ ಬೇರೆ ಯಾವ್ದಕ್ ಸತೇ ಬತ್ತಿಲ್ಲ. ಡಿಸೆಂಬರ್-ಜನವರಿ ಸುರಿಗೆ ಹಗೂರ ಹೂ ಬಿಡುಕೆ ಸುರುವಾಪ ಗ್ವಾಯ್ ಮರದಗೆ ಫೆಬ್ರವರಿ ಬಪ್ಪತಿಗೆ ಒಂದೊಂದೇ ಮಿಜ್ರ್ ಬಿಡುಕ್ ಶುರುವಾತ್. ಕೈಯೆಲ್ಲ ಸೊನಿಯಾತ್ ಬ್ಯಾಡ ಅಂದ್ರೂ ಕೇಣ್ದೆ ಮಿಜ್ರ್ ಎಲ್ಲಾ ಕೊಯ್ಕಂಡ್ ಬಂದ್, ಕತ್ತಿಯೋ, ಬ್ಲೇಡೋ ಹಿಡ್ಕಂಡ್ ಮಿಜ್ರನ್ನ ಬಗ್ತಿ ಮಾಡಿ, ಅದ್ರ್ ಒಳ್ಗಿನ ಬೆಳಿ ಬೆಳಿ ಚಿರ್ಲ್(ತಿರುಳು) ತಿಂಬುದನ್ನ್ ಎಣ್ಸಕಂಡ್ರೆ ಬಾಯಗೆ ನೀರ್ ಒಡುಕೆ ಶುರುವಾತ್ತ್. ಹೆಸ್ರ್‌ಬ್ಯಾಳಿ ಪಾಯ್ಸಕ್ಕೆ ಇದನ್ನ ಹಾಕ್ರಂತೂ ಭಾರಿ ಲಾಯ್ಕಿರತ್ತ್. ಕಡಿಗೆ ಗ್ವಾಯ್ ಹಣ್ನೆಲ್ಲಾ ಬಿಳ್ದ್ ಹೋಯಿ ನಾಕ್ ಮಳಿ ಬಿದ್ರ್ ಕೂಡ್ಲೆ ಮಕ್ಳೆಲ್ಲಾ ಗ್ವಾಯ್ ಮರದ ಅಡಿಯೇ. ಎಂತಕಂದ್ರೆ ಬಿದ್ದ್ ಹುಟ್ಟದ್ ಗ್ವಾಯ್ ಬೀಜ ಬೆದಿ ಬಂದಿರತ್ತಲ್ದಾ.. ಅದ್ ದೊಡ್ಡದಾಯ್ಕಿದ್ರೇ ಹುಡ್ಕಿ ಅದರ ಎಸಳು ಹಿಡ್ಕಂಡ್ ತಿಂತಾ ಇದ್ರೆ… ಹ್ಯಾಂಗೆ ಹೇಳುದ್ ಅದ್ರ್ ರುಚಿ… ಆರೆ ಅದೆಲ್ಲಾರೂ ಚೂರು ಬೆಳದ್ರೆ ಅದ್ರ ರುಚಿ ಪೂರಾ ಹೋಯಿ ಒಂದ್ನಮನಿ ರಬ್ಬರ್ ಜಗ್ದಾಂಗ್ ಆತ್ತ್

images

ಆಗೆಲ್ಲಾ ಜೋರ್ ಮಳಿ ಬಂದ್ರ್ ಸಾಕ್.. ಶಾಲಿಗೆ ರಜಿ… ಯಾಕಂದ್ರೆ ಹೊಳಿ, ತೋಡ್, ಹಳ್ಳ ದಾಟ್ಕಂಡ್, ಸಂಕದ ಮೇಲೆ ನೆಡ್ಕಂಡ್ ಬಪ್ಪರಿಗೆ ಮನಿಗೆ ಹೋಪುಕೆ ಕಷ್ಟ ಆಪ್ಕಾಗ ಅಂದೇಳಿ. ನಾನ ಸಿದ್ಧಾಪ್ರದಗೆ ಎಂಟನೇ ಕ್ಲಾಸಿಗೆ ಹೋಪ್ ಸಮಿಗೆ ಒಂದಿನ ಜೋರ್ ಮಳಿ ಬಂದ್ ಶಾಲಿಗ್ ಬೆಳಿಗ್ಗೆಯೆ ರಜಿ ಕೊಟ್ಟಿದ್ರ್. ಮನಿಗ್ ಹೋಪ ಅಂದ್ರೆ ಹತ್ತ್ ಗಂಟಿ ಬಸ್ಸ್ ಹೋಯಾಯಿತ್ತ್. ಇನ್ನ್ ಬಸ್ ಇಪ್ದ್ ಹನ್ನೆರ್ಡ್ ಗಂಟಿಗೇ ಸೈ. ಸರಿ ಎಂತ ಮಾಡುದ್ ಅಂದೇಳಿ ನಂ ಬದಿಗೆ ಹೋಪ ಮಕ್ಳೆಲ್ಲಾ ಒಟ್ಟಾಯಿ ಮಾತಾಡ್ಕಂಡ್… ನೆಡ್ಕಂಡ್ ಹೋಪ ಅಂದೇಳಿ ತೀರ್ಮಾನ ಆಯ್ತ್. ಸಿದ್ಧಾಪ್ರದಿಂದ ನಮ್ಮ್ ಮನಿಗೆ ಸುಮಾರ್ ಹನ್ನೊಂದ್-ಹನ್ನೆರ್ಡ್ ಕಿಲೋಮೀಟ್ರ್ ಆತ್ತ್. ಆರೆ ಆಗ್ಳಿಕೆ ಅದೆಲ್ಲ ಒಂದ್ ಲೆಕ್ಕವಾ? ಸರಿ ಹೊರ್ಟೇ ಬಿಡ್ತ್. ನಮ್ಗ್ ಶಾಲಿ ಬಿಡುಕೂ ಮಳಿ ಕೈದ್ ಆಪುಕೂ ಸಮಾ ಆಯ್ತ್. ಆರೂ ನಾಕೆಂಟ್ ಹುಂಡ್ ಬೀಳ್ತಾ ಇದ್ದಿತ್. ಹೀಂಗೆ ಪಟ್ಟಾಂಗ ಹೊಡಿತಾ ನೆಡ್ಕಂಡ್ ಹೋಪತಿಗೆ , ದಾರಿ ಬದ್ಯಗೆ ಒಂದ್ ಬದಿ ಉಜರ್ ಬತ್ತಾ ಇದ್ದಿತ್ತ್. ಅಲ್ಲೇ ಬುತ್ತಿ ಊಟ ಮುಗ್ಸಿ, ಬುತ್ತಿ ತೊಳ್ಕಂಡ್ ಮತ್ತ ನೆಡುಕ್ ಶುರು ಮಾಡದ್ದೇ… ಮಾತಾಡ್ತಾ ಮಾತಾಡ್ತಾ ಕಮಲಶಿಲೆ ಪಾರಿ ಹತ್ತದ್ದೇ ಗೊತ್ತಾಯಲ್ಲ. ಪಾರಿ ಹತ್ತಿ ಆರ್ ಮೇಲೆ ನಮ್ಮ್ ಮಂಗನಾಟ ಶುರುವಾಯ್ತ್. ಎಲ್ಲ್ ನೆಲ್ಲಿಮರ, ಚಾಪಿ ಮರ, ಚೂರಿ ಹಣ್ಣಿನ ಗಿಡ, ನೇರ್ಲ್ ಮರ ಅಂದೇಳಿ ಹುಡ್ಕಂಡ್ ಸಿಕ್ಕದ್ದನ್ನೆಲ್ಲಾ ಗುಳುಂ ಸ್ವಾಹಾ ಮಾಡಿ, ಚಡ್ಡಿ ಕಿಸಿಗಿಷ್ಟ್, ಬುತ್ತಿ ಒಳ್ಗ್ ಇಷ್ಟ್ ಅಂದೇಳಿ ತುಂಬಿ ಮನಿಗ್ ಬಪ್ಪತಿಗೆ ಮೂರ್ ಗಂಟಿ ಬಸ್ಸಿನ ಹಾರ್ನ್ ಕೇಂತಾ ಇದ್ದಿತ್ತ್. ಅಷ್ಟ್ ನೆಡದ್ರೂ ಸಾಕಾಯ್ತ್ ಅಂತ ಅನ್ಸಲೇ ಇಲ್ಲ.

ಹೀಂಗೇ ಹೇಳುಕ್ ಹೊರಟ್ರೆ ಈ ನಮನೀದ್ ಸುಮಾರ್ ಕತಿ ಇತ್ತ್. ಎಲ್ಲಾ ಇವತ್ತೇ ಹೇಳ್ರೆ ನಾಳಿಗೂ ಒಂಚೂರ್ ಬ್ಯಾಡ್ದಾ? ನಿಮ್ದೂ ಹೀಂಗಿಂದೆಂತಾರೂ ನೆನ್ಪ್ ಇದ್ರೆ ಹೇಳಿ ಕಾಂಬ 🙂


ಯಾವ್ದಾರೂ ಬೇಕ್ ಕಾಣಿ, ಈ ಸಂತಿ ದಿನ ಬಸ್ಸಗೆ ಹೋಪುದ್ ಮಾತ್ರ ಎಷ್ಟ್ ಕೊಟ್ರೂ ಬ್ಯಾಡ್ದೆ. ಅದ್ರಗೂ ಜೋರ ಸೆಕಿ ಇಪ್ಪ್ ಸಮಿಗೆ ಹೋಯ್ಕಾರೆ ಸಾಕ್‌ಬೇಕ್ ಅಂಬಂಗಾತ್. ಬುಧ್ವಾರ ಸಿದ್ಧಾಪ್ರದಗೆ ಸಂತಿ. ಹಾಂಗಂತೇಳಿ ಎಂತಾರೂ ಕೆಲ್ಸ ಇದ್ರೆ ಈ ವಾರ ಎಲ್ಲ ಕಾಂತ ಕೂಕಂಬುಕೆ ಆತ್ತಾ? ಅದೂ ದಿನ ಕೇಂಡರೊಟ್ಟಿಗ್ ಆ ದಿನ್‌ವೇ ಎಂತಾರೂ ಕೆಲ್ಸ ಬಂದ್ರೆ ಎಂತ ಮಾಡುಕಾತ್ತ್? ಒಟ್ಟ್ ಹೋಯ್ದಿರ್ ಉಪಾಯಿಲ್ಲ.

 

ನಾನ್ ಶಾಲಿಗ್ ಹೋಪತಿಗೆ ಬುಧ್ವಾರ ಬಂದ್ರ್ ಸಾಕ್. ಯಾಕಾರೂ ಬಂತೋ ಅಂತ್ ಅನ್ಸ್‌ತಿದ್ದಿತ್. ಬೆಳಿಗ್ಗೆ ಹ್ಯಾಂಗಿದ್ರೂ ಬೇಗ್ ಹೋಪುದಲ್ದಾ. ಹಾಂಗಾಯ್ ಬಚಾವ್. ಆರೆ ಸಾಂಯ್ಕಾಲ ಬಪ್ಪ್ ಕತಿ ಕೇಂಡ್ರ್ ಮಾತ್ರ ಸುಕ ಇಲ್ಲ. ಈ ಮಾಯ್ನ್‌ಕಾಯಿ ಉಪ್ಪಿಗ್ ಹಾಕ್ತ್ರ್ ಅಲ್ದಾ..ಥೇಟ್ ಅದೇ ನಮ್ನಿ. ಅದ್ರಗೂ ಬೆನ್ ಮೇಲೆ ಶಾಲಿ ಚೀಲ ಬೇರೆ. ಅದನ್ನ್ ಹೊತ್‌ಕಂಡ್ ಆ ಜನ್ರ್ ಎಡ್ಕಿಯಲ್ ನುರ್ಕಂತ ಒಳ್ಗ್ ಹೋಪ್ರ್ ಒಳ್ಗ್ ಮೈಯೆಲ್ಲ ಹೊಡಿಯಾದಂಗಾತ್. ಅರವತ್ತ್ ಜನ ಹಿಡೂ ಬಸ್ಸಿಗೆ ನೂರಿಪ್ಪತ್ ಜನ ತುಂಬ್ಸರೂ, ಇನ್ನೂ ನಾಕ್ ಜನ ಹಿಡ್ಸ್‌ಲಕ್ಕಲಾ ಅಂಬ್ ಉಮೇದಿ ಬಸ್ಸಿನರಿಗೆ. ಬಸ್ಸ್ ಹತ್ತುದ್ ಹ್ಯಾಂಗಿದ್ರೂ ಹತ್ತಿಯಾಯ್ತ್. ಆರೆ ಒಳ್ಗೆ ಉಸ್ರಾಡ್ತೆ ಅಂದ್ರೂ ಗಾಳಿ ಆಡುದಿಲ್ಲ. ಬೆವ್ರ್ ವಾಸ್ನಿ, ಸಂತಿಯಿಂದ ಎಲ್ಲ ಹಿಡ್ಕಂಡ್ ಬಂದ್ ಹೊಳಿ ಬಾಳಿಕಾಯಿ ವಾಸ್ನಿ ಎಲ್ಲಾ ಸೇರಿ ಗುಂ ಅಂತಿರತ್ತ್. ಕೆಳಗಿಪ್ಪತ್ತಿಗೆ ಹ್ವಾಯ್..ಒಂಚೂರ್ ಜಾಗ ಬಿಡಿನಿ ನಾ ಒಂಚೂರ್ ಮೇಲ್ ಬತ್ನೆ.. ಅಂದೇಳಿ ಮೇಲ್ ಹತ್‌ದರೆಲ್ಲ ಈಗ …ಪ್ಲೇಟ್ ಬದ್ಲ್ ಮಾಡಿ.. ಎಂತಾ ತುಂಬ್‌ತ್ರ್ ಮಾರಾಯ್ರೆ ಹಂಗಾರೆ..ಈ ಬಸ್ಸ್ ಬಿಡುದೇ ಇಲ್ಯಾ ಕಾಂತ್ ಅಂದ್ ಗೊಣಗೊಣ ಅಂದ್ರೂ ಬಸ್ಸಿನ್ ಕಂಡೆಕ್ಟ್ರಿಗೆ , ಏಜೆಂಟ್ರಿಗೆ ಎಡ್ದಷ್ಟ್ ಜನ ತುಂಬ್ಸುವರಿಗೆ ಮನ್ಸಿಗ್ ಸಮ್ದಾನ ಇಲ್ಲ. ಹಿಂದೋಯ್ನಿ, ಮುಂದೋಯ್ನಿ, ಮೇಲ್ ಹತ್ತಿ… ಅಂದೇಳಿ ನಿಂತ್ ಜಾಗದಗೂ ನಿಲ್ಲುಕ್ ಬಿಡ್ದೆ ಅವ್ರ್ ಜನ ತುಂಬುವಷ್ಟೊತ್ತಿಗೆ ಇಲ್ಲ್ ಒಳ್ಗ್ ಇದ್ದರಿಗೆ ಒಂದ್ ಬೆವ್ರ್ ಸ್ನಾನ ಆಯಿರತ್

 

ಅಂತೂ ಒಳ್ಗ್ ಸಾಸ್ಮಿ ಕಾಳ್ ಹಾಕುಕೂ ಚಡಿ ಇಲ್ಲ ಅಂತ್ ಗ್ಯಾರಂಟಿ ಆರ್ ಮೇಲೆ ಟಾಪ್ ಹತ್ತುವರನ್ನೆಲ್ಲಾ ಹರ್ಸಿ, ಅವ್ರಿಗೆಲ್ಲಾ ಟಿಕೇಟ್ ಕೊಟ್ಟ್, ಬಾಗ್ಲಗೂ ಒಂದ್ ಇಪ್ಪತ್ತೈದ್ ಜನ ನೇಲುಕ್ ಶುರುವಾರ್ ಮೇಲೆ ಅಂತೂ ಬಸ್ಸ್ ಬಿಡ್ತ್ ಅಂದೇಳಿ ಆಯ್ತ್. ಬಸ್ಸ್ ಹೊರ್‌ಟ್ರಾರೂ ಸುಕ ಇತ್ತ? ನಾಕ್ ನಾಕ್ ಮಾರಿಗೊಂದೊಂದ್ ಸ್ಟಾಪ್. ಎಲ್ಲೋ ಮಧ್ಯ ಸೇರ್ಕಂಡರ್ ದಾರ್ಯಗಿದ್ದರದ್ದೆಲ್ಲ ಕಾಲ್ ಮೆಟ್ಟಿ, ಅವ್ರನ್ ದೂಡ್ಕಂಡ್ ಬಾಗ್ಲಿಗೆ ಬಪ್ಪತಿಗೆ ಬಸ್ ಹೊರ್ಟಾಯಿರತ್. ಹೋಯ್…ಹೋಯ್ ನಿಲ್ಸಿನಿ.. ಇಳುಕಿತ್ತೇ .. ಅಂತ್ ಕೂಗಿ, ಕೈ ತಟ್ಟಿ ಬಸ್ಸ್ ನಿಲ್ಸಿ, ಅವ್ರನ್ ಇಳ್ಸಿ ಇನ್ನೇನ್ ಪಷ್ಟ್ ಗೇರಿಂದ ಸೆಕೆಂಡ್ ಗೇರಿಗ್ ಬಿದ್ದಿರತ್ ಅಷ್ಟೇ… ಮತ್ತೊಂದ್ ಸ್ಟಾಪ್ ಬಂದಾಯ್ತ್. ಅಂತೂ ಹಣಿಮಕ್ಕಿ, ಆಜ್ರಿ ಮೂರ್‌ಕೈ, ತಾರಿಕೋಡ್ಲ್, ಮುತ್ತಾಬೇರ್, ಕೆಳಂಜಿ ಮೋರಿ, ಸೊಸೈಟಿ, ರಾಂ ಭಟ್ರ್ ಅಂಗ್ಡಿ, ಎಡಮೊಗೆ ದಾರಿ, ಕಮಲಶಿಲೆ ದೇವಸ್ಥಾನ ಅಂದೇಳಿ ನಾಲ್ಕ್ ಕಿಲೋಮೀಟ್ರಿಗೆ ಹನ್ನೆರ್ಡ್ ಹದಿಮೂರ್ ಸ್ಟಾಪ್. ಅರೂ ಜನ ಇಳ್ದ್ ಇಳ್ದ್ ಒಂಚೂರ್ ಗಾಳಿ ಆಡುವಂಗೆ ಆಯಿರತ್ತ್. ಕಮ್ಲಶಿಲೆ ಏರ್ ಹತ್ತುಕ್ ಎಡಿದೋ ಅಂದೇಳಿ ಒರ್ಲತಾ ಎಕ್ಸ್‌ಟ್ರಾ ಗೇರಗೆ ಹಗೂರ ನಕ್ಕುಳ ಹರ್ದಂಗೆ ಹತ್ತಿ ಮೇಲ್ ಬಂದ್ ಮೇಲೆ ಅಯ್ಯಬ್ಬ ಅನ್ಸತ್ತ್. ಅಲ್ಲಿಂದ್ ಬಸ್ಸು ಮತ್ತೆ ಎಳ್‌ಬೇರ್ ದಾರಿ, ನಡ್‌ಮದ್ರಿ ದಾರಿ, ಸಾಯ್ಬರಂಗಡಿ, ಬಾಚುಗುಳಿ ಅಂತ ಮತ್ತೆ ಕಟ್ಟೆ ಪೂಜೆ ಮಾಡಿ ನಮ್ ಮನಿ ಹತ್ರ ಇಳು ಸುರಿಗೆ ಮೈಕೈ ಪೂರಾ ನೋವ್, ಅಂಗಿ ಚಡ್ಡಿ ಎಲ್ಲಾ ಬೇವ್ರ್ ವಾಸ್ನಿ. ಹೊಟ್ಟಿ ತಾಳ ಹಾಕ್ತಾ ಇದ್ರೂ, ನಾಕ್ ಚಂಬ್ ನೀರ್ ಮೈಮೇಲ್ ಬೀಳ್ದೆ ಎಂತ ತಿಂಬ್ಕೂ ಎಡಿಯ. ಅಂತೂ ಒಂದ್ ಸಂತಿ ದಿನದ ಬಸ್ಸಿನ ರಗ್ಳಿ ಮುಗೀತಲ್ಲ ಅಂತ್ ಸುಧಾರ್ಸ್‌ಕಂಬಷ್ಟೊತ್ತಿಗೆ ಮತ್ತೊಂದ್ ಬುಧ್ವಾರ ಬಂದಾಯಿರತ್ತ್.