ಹೀಂಗೆ ಬೇಜಾರ್ ಆರ್ ಕೂಡ್ಲೇ ಎಂತಾರೂ ಜೋಕ್ ಸಿಕ್ಕತ್ತಾ ಹುಡ್ಕುದ್. ಜೋಕ್ ಒಳ್ಳೆದಿತ್ತ್ ಅನ್ಸಿರೆ ಅದನ್ನ ನಿಮಗೂ ಹೇಳ್ವಾ ಅಂದೇಳಿ ಬರುಕ್ ಕೂಕಂಡಿನೆ.

ನೆಗಿ ಬಂದ್ರ್ ಚೂರೇ ಚೂರ್ ನೆಗಾಡಿ ಅಕಾ 🙂

ಒಬ್ನಿಗೆ ಸಾವಿನ ಗಳ್ಗಿ ಹತ್ರ ಬಂತಂಬ್ರ್. ಅವನ್ನ ಕರ್ಕಂಡ್ ಹೋಪ್ಕೆ ಯಮ ಬಂದ ಅಂಬ್ರ್. ಯಮ ಬಂದನ್ ಅವ್ನತ್ರ ಹೇಳ್ದ…

“ಇಲ್ಕಾಣ್ ಮಾರಾಯ… ನಿಂದ್ ಆಯುಷ್ಯ ಮುಗಿತಾ ಬಂತ್… ಆರೂ ನೀನ್ ಭಾರೀ ಪುಣ್ಯ ಮಾಡಿದೆ. ಅದಕ್ಕೆ ನಿಂಗ್ ಒಂದ್ ವರ ಕೊಡ್ತೆ…

ನಿನ್ ಜೀವ ತೆಗಿಕಿದ್ರ್ ಮೊದ್ಲ್ ನಿಂದ್ ಕೊನೆ ಆಶಿ ಎಂತಾರೂ ಇದ್ರೆ ಹೇಳ್… ಅದನ್ ತೀರ್ಸಿಯೇ ನಿನ್ ಜೀವ ತಕ ಹೋತೆ”

ಆಗ್ಳಿಕೆ ಸಾಯುಕ್ ಬಿದ್ದನ್ ಮಂಡಿ ಸಾವ್ ತಪ್ಸಕಂಬ್ಕೆ ಒಳ್ಗೆ ಆಲೋಚ್ನಿ ಬಂತ್… ಅವ ಯಮನತ್ರ ಹೇಳ್ದ…

“ನಾನ್ ಈ ಜೀವಮಾನದಗೆ ಅನ್ಬೈಸುದೆಲ್ಲಾ ಅನಬೈಸಿ ಆಯ್ತ್. ನನ್ ಹೆಚ್ಚಿನ್ ಆಶಿ ಪೂರ್ತಿ ದೇವ್ರ್ ನೆಡಸಿ ತೀರಿತ್. ಆರೂ ನೀನ್ ಕೊನಿ ಆಶಿ ಎಂತಾ ಕೇಂಡಿ ಅಲ್ದಾ… ಬಿಡುದ್ ಯಾಕೆ? ಮತ್ತೆಂತ ಇಲ್ಲ… ನಂದ್ ಒಂದ್ ಸಣ್ಣ ಆಶಿ ಅಷ್ಟೇ. ಮನಮೋಹನ್ ಸಿಂಗ್ ಇದ್ರಲ್ದಾ… ಅವ್ರ್ ಸಲ್ಮಾನ್ ಖಾನ್ ಹೆಂಡ್ತಿ ಹತ್ರ ಮಾತಾಡುದ್ ಕಾಣ್ಕ ಅಂದೇಳಿ ನನ್ ಕೊನಿ ಆಶಿ”

ಯಮ ಅಲ್ಲೇ ಚಂಯ್ಕ 🙂

ಟಿಪ್ಪಣಿಗಳು
  1. suresh shetty ಹೇಳುತ್ತಾರೆ:

    Namsthe Sir nan hesas suresh antha nanage Acsident adaga 12 dina hospital admit eidhe mare 1 dina kantha kantha google ge niv sikari mare a 12 dina hyange hoith andali nanage gothila

    Hoi ond sala kundapura santhi mathe kundapura meen pyati barad haki kambu very good job sir

  2. Sharath Yadiyala ಹೇಳುತ್ತಾರೆ:

    😀 Olle itth.

  3. ಮಂಜುನಾಥ ಮರವಂತೆ ಹೇಳುತ್ತಾರೆ:

    ಯಮ ಚಂಯ್ಕ. ಎರ್ಡೆರ್ಡ ಆಗ್ದಿದ್ದ ಕೆಲ್ಸ ಹೇಳಕ್ಕ ಮರ್ರೆ ಅಂವಾ ಭಾರಿ ಬುದ್ದಿವಂತ ಹ ಹ ಹಾ!

ನಿಮ್ಮ ಟಿಪ್ಪಣಿ ಬರೆಯಿರಿ