ಬಾಡಿ ಹೋದ್ದ್… ಬೊಂಡದಗೆ ನೀರ್ ಇಪ್ಪುದಿಲ್ಲಿಯೇ…(ಸುಮ್ನೆ ಕುಶಾಲಿಗ್ ಅಣಕ)

Posted: ಮೇ 21, 2013 in anaka, anakavaadu, ಅಣಕ, ಅಣಕವಾಡು, ಇತ್ಯಾದಿ.., ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
ಟ್ಯಾಗ್ ಗಳು:, , , , , , , , , , , , , , , , , , , , , , , , , , , ,

‘ಎರಡು ಕನಸು’ ಪಿಚ್ಚರಿನ ‘ಬಾಡಿಹೋದ ಬಳ್ಳಿಯಿಂದ’ ಹಾಡ್ ಕುಂದಾಪ್ರ ಕನ್ನಡದಗೆ… ಸುಮ್ನೆ ಕುಶಾಲಿಗ್ ಮರ್ರೆ 🙂

 

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ
ಬತ್ತಿ ಇರದ ಚಿಮ್ಣಿಯಿಂದ
ದೀಪ ಉರ್ಸುಕಾತಿಲ್ಯೇ

ಮೆಣ್ಸ್ ತಿಂದ್ ಬಾಯಿಯೆಲ್ಲಾ
ಖಾರಆಯಿತ್ ಉರಿತಿತ್ತಲ್ದಾ
ಒಂದ್ಲೋಟ ನೀರಿಲ್ಲಿಯಾ?

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಹಣ್ ತಿನ್ನಲ್ಯೇ ಬೀಜ ತೆಗ್ದಿನೆ
ಅಂಗಡಿಯಲ್ ಮಾರುಕೆ
ಹಣ್ ತಿನ್ನಲ್ಯೇ ಬೀಜ ತೆಗ್ದಿನೆ
ಅಂಗಡಿಯಲ್ ಮಾರುಕೆ

ಪವಾಣಿ ಒಟ್ಟ್ ಮಾಡಿ-ನಾಕ್
ಹಬ್ಬದಗ್-ಹೊಡಿ ಹಾರ್ಸಕೇ
ಪವಾಣಿ ಒಟ್ಟ್ ಮಾಡಿ-ನಾಕ್
ಹಬ್ಬದಗ್-ಹೊಡಿ ಹಾರ್ಸಕೇ

ಬತ್ತಿ ಇರದ ಚಿಮ್ಣಿಯಿಂದ
ದೀಪ ಉರ್ಸುಕಾತಿಲ್ಯೇ

ಮೆಣ್ಸ್ ತಿಂದ್ ಬಾಯಿಯೆಲ್ಲಾ
ಖಾರಆಯಿತ್ ಉರಿತಿತ್ತಲ್ದಾ
ಒಂದ್ಲೋಟ ನೀರಿಲ್ಲಿಯಾ?

ಬಾಡಿ ಹೋದ್ದ್ ಬೊಂಡದಗೆ
ನೀರ್ ಇಪ್ಪುದಿಲ್ಲಿಯೇ

ಮಾಯಿನ್-ಹಣ್ ಕಣ್ಣಿಗ್ ಬಿದ್ರೆ
ಕಲ್ ಹೊಡ್ದಾರೂ ತಾಳ್ಸುವೆ
ಮಾಯಿನ್-ಹಣ್ ಕಣ್ಣಿಗ್ ಬಿದ್ರೆ
ಕಲ್ ಹೊಡ್ದಾರೂ ತಾಳ್ಸುವೆ

ಗಾಳಿಗ್ ಹಣ್ ಉದರಿ ಬಿದ್ರೆ
ಹೆಕ್ಕದೆ ಇಪ್ಪುಕೆ ಆಪುದೆ?
ಗಾಳಿಗ್ ಹಣ್ ಉದರಿ ಬಿದ್ರೆ
ಹೆಕ್ಕದೆ ಇಪ್ಪುಕೆ ಆಪುದೆ?

ಬಾಳಿ ಹಣ್ಣಾರೂ ತಿಂಬ ಅಂದ್ರೆ
ಪೂರ್ತಿ ಕಾಯಿ ಎಲ್ಲದೂ
ಹುಡ್ಕಂಡ್ ಹೋಪ ಗ್ವಾಯಿ… ಮರನ್ನ
ಸಿಕ್ವಾ ಬೀಜ ನಾಕಾರೂ

_____________________________________________________________________________
ಮೂಲ ಪದ್ಯ : ‘ಎರಡು ಕನಸು’ ಪಿಚ್ಚರಿನ ‘ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ’
ಕೃಪೆ: Namma Bengaluru(ಫೇಸ್ಬುಕ್)

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ
ತಂತಿ ಹರಿದ ವೀಣೆಯಿಂದ ನಾದ
ಹರಿಯಬಲ್ಲದೆ

ಮನಸು ಕಂಡ ಆಸೆ ಎಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ
ಬೆಳಕಿನಲ್ಲಿ ಬಾಳುವೆ

ಧರೆಯೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ
ಬದುಕಲೆಲ್ಲಿ ಓಡುವೆ

ತಂತಿ ಹರಿದ ವೀಣೆಯಿಂದ ನಾದ
ಹರಿಯಬಲ್ಲದೆ

ಮನಸು ಕಂಡ ಆಸೆ ಎಲ್ಲ
ಕನಸಿನಂತೆ ಕರಗಿತಲ್ಲ
ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ
ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ
ಈಜಿ ದಡವ ಸೇರುವೆ

ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ?
ಸುಳಿಗೆ ದೋಣಿ ಸಿಲುಕಿದಾಗ
ಬದುಕಿ ಬರಲು ಸಾಧ್ಯವೆ?

ಬಾಳ ಪಗಡೆ ಆಟದಲ್ಲಿ
ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ… ಅವನ
ಇಚ್ಚೆ ಯಾರು ಬಲ್ಲರೂ?

ನಿಮ್ಮ ಟಿಪ್ಪಣಿ ಬರೆಯಿರಿ