ಕಾಳ – ಏನ್ ಮಾಡುದ್ ಹೇಳಿ…ಇದ್ ನಮ್ಮನಿ…
ಸಾಯ್ಬ್ರ್– ಅಚ್ಚಾ…
ಕಾಳ – ಈ ಮನೀಲ್ ನಾನು ನನ್ ಹೆಂಡ್ತಿ ಇಬ್ರೆ ಇಪ್ಪುದ್
ಸಾಯ್ಬ್ರ್– ಅಚ್ಚಾ… ಅಚ್ಚಾ….
ಕಾಳ – ಅದೆಲ್ ಬಂತ್…
ಸಾಯ್ಬ್ರ್– ಅರೆ ಕ್ಯಾರೆ….
ಕಾಳ – ಅಲಾ…. ಹಚಾ ಹಚಾ ಅಂದ್ರ್ಯಲ…. ಹಚಾ ಅಂದ್ರೆ ನಂಬದೀಲ್ ನಾಯ್ ಬೆರ್ಸುದ್ ಮರಾಯ್ರೆ
ಸಾಯ್ಬ್ರ್– ಅರೇ ನಾನು ನಾಯಿಗೆ ಹೇಳ್ತು ಅಂತ ಮಾಡಿದೆ…
ಕಾಳ – ಅಲ್ದಾ…. ನಾಯ್ ಬೆರ್ಸದ್ ಅಲ್ದಾ?
ಸಾಯ್ಬ್ರ್– ಅರೇ ನಾನು ನಿಂಗೆ ಹೇಳ್ತು…
ಕಾಳ – ನಿಮ್ ಲೆಕ್ದಗೆ ನಾನೇನ್ ನಾಯಾ…?
ಸಾಯ್ಬ್ರ್– ಅರೇ ಇದೇನು ಹೇಳ್ತದೆ…ನಾನು ಹೇಳಿದ್ದು ಅಚ್ಚಾ ಅಚ್ಚಾ…
ಕಾಳ – ಹಚಾ ಅಂದದ್ದಲ್ದಾ…ಅದಿರ್ಲಿ…ಅಚ್ಚಾ ಅಚ್ಚಾ ಅಂದ್ರ್ ಎಂತದ್..?
ಸಾಯ್ಬ್ರ್– ಒಳ್ಳೇದು ಒಳ್ಳೇದು…
ಕಾಳ – ಅಚ್ಚಾ ಅಂದ್ರೆ…ಒಳ್ಳೇದಾ… ಹೋಯ್ಲಿ ಬಿಡಿ… ಇದ್ ನಮ್ಮನಿ…
ಸಾಯ್ಬ್ರ್– ಅಚ್ಚಾ…
ಕಾಳ – ಈ ಮನೀಲ್ ನಾನ್ ನನ್ ಹೆಂಡ್ತಿ ಇಬ್ರೆ ಇಪ್ದ್….
ಸಾಯ್ಬ್ರ್– ಅಚ್ಚಾ…..ಅಚ್ಚಾ…..
ಕಾಳ – ಮೊನ್ನೆ ಒಂದಿನ ನಾನಿಲ್ದಿದ್ ಹೊತ್ತಿಲ್ ನಮ್ಮನಿಗೆ ಯಾರೋ ಬಂದ್ರ್…
ಸಾಯ್ಬ್ರ್– ಅಚ್ಚಾ…..ಅಚ್ಚಾ…
ಕಾಳ – ಸಾಯ್ಬ್ರೆ… ಅಚ್ಚಾ ಅಚ್ಚಾ ಅಂದ್ರ್ ಎಂತ ಅಂದ್ರಿ..
ಸಾಯ್ಬ್ರ್– ಅರೇ…ಒಳ್ಳೇದು..ಒಳ್ಳೇದು…
ಕಾಳ – ಸುಮ್ನಾಯ್ಕಣಾ…ಇದ್ ನಮ್ಮನಿ ಅಂದ್ರೂ ಒಳ್ಳೇದ್… ನಾನು ನನ್ ಹೆಂಡ್ತಿ ಇಬ್ರೆ ಇಪ್ದಂದ್ರೂ ಒಳ್ಳೇದ್.. ನಾ ಇಲ್ದಿದ್ ಹೊತ್ತಿಲ್ ಯಾರಾರು ಬಂದಿರ್ ಅಂದ್ರೂ ಓಳ್ಳೇದ್…ಯಾರಾಉ ಇದ್ರ್ ಅಂದ್ರೂ ಒಳ್ಳೇದ್…ಯಾರಾರು ಸತ್ತ್ ಹೋರ್ ಅಂದ್ರೂ ಒಳ್ಳೇದಾ….
ಸಾಯ್ಬ್ರ್– ನಂದೂ ಜಾತಿಲಿ ಹೂಂ ಹೇಳುದಿಲ್ಲ…ನಮ್ದು ಮತ್ತೊಬ್ರು ಮಾತಾಡ್ ಬೇಕಾದ್ರೆ ಅಚ್ಚಾ ಅಚ್ಚಾ ಹೇಳ್ತದೆ..
ಕಾಳ – ಇರ್ಲಿ ಬಿಡಿ.. ಮೊನ್ನೆ ನಾನಿಲ್ದಿದ್ದ್ ಹೊತ್ತಿಗೆ ನಮ್ಮನಿಗೆ ಒಬ್ಬ ಕಾಮುಕ ಬಂದ್ ನನ್ ಹೆಂಡ್ತಿ ಶೀಲ ಹಾಳ್ ಮಾಡಿ ಬಿಟ್ಟ
ಸಾಯ್ಬ್ರ್– ಅರೇ ನಿಂದು ಹೆಂಡ್ತಿ ಚೀಲ ಹೋಯ್ತು…? ಚೋಟಾ ಚೀಲ ಹೋಯ್ತಾ.. ಬಡಾ ಚೀಲ ಹೋಯ್ತಾ…?
ಕಾಳ – ನೀ ಎಲ್ಲಿ ಹಪ್ಗೆಟ್ಟನ್ ಮರಾಯಾ….
ಸಾಯ್ಬ್ರ್– ಇದೇನಿದು.. ಹಪ್ಪುಗೆಟ್ಟದ್ದು ಹೇಳ್ತದೆ…. ನಂಗೇ ನೀನು ಬೈತದೆ…ಬೈತದೇ….?
ಕಾಳ – ಅಲ್ದಾ… ಬಯ್ಯದ್ದಲ್ದಾ… ಹಪ್ಗೆಟ್ಟನ್ ಅಂದ್ರೆ ಭಾರೀ ಒಳ್ಳೆಯನ್ ಅಂದೇಳಿ….
ಇಕಾಣ್ ಚೀಲ ಅಲ್ಲ… ನಾನಿಲ್ದಿದ್ ಹೊತ್ತಿಗೆ ಒಬ್ಬ ಕಾಮುಕ ಬಂದ್ ನನ್ ಹೆಂಡ್ತಿ ಶೀಲ ಹಾಳ್ ಮಾಡಿದ… ನನ್ ಮರ್ಯಾದಿಯೇ ಹೋಯ್ತ್… ಮರ್ಯಾದಿ ಹೋರ್ ಮೇಲೆ ಈ ಊರಂಗೆ ತಲಿ ಎತ್ಕಂಡ್ ತಿರ್ಗುದಾರು ಹ್ಯಾಂಗೆ… ಅದ್ಕೇ ಎಲ್ಲಾರೂ ಹೋಯಿ ಸಾವುದಂದೇಳಿ ಮಾಡಿದೆ… ನೀವ್ ಬಂದ್ರಿ… ನಿಮ್ಮತ್ರ ಎಲ್ಲಾ ಹೇಳ್ದೆ…. ನನ್ ಮರ್ಯಾದಿ ಹೋರ್ ಮೇಲೆ ನಾ ಯಾಕಾರೂ ಬದ್ಕ್ಕ್ ಹೇಳಿನಿ…
ಸಾಯ್ಬ್ರ್– ಅರೇ ಮರ್ವಾದಿ ಹೋಯ್ತು….ಯಾರಿಂದ ಹೋಯ್ತು..
ಕಾಳ – ಬೇರೆ ಯಾರಿಂದ್ಲೂ ಅಲ್ಲ ಸಾಯ್ಬ್ರೆ…. ಈ ಊರಿನ ಮಹಾರಾಜ ವೀರ್ಯಗುಪ್ತ ಅಂದೇಳಿ. ಅವ್ರಿಂದ್ಲೇ ನನ್ ಹೆಂಡ್ತಿ ಶೀಲ ಹಾಳಾಯ್ತ್…
ಸಾಯ್ಬ್ರ್– ಅದ್ಕೇ ನೀನು ಸಾಯ್ತದೇ…. ಅರೇ ಕಾಳು… ನೀನು ಸಾಯ್ಬೇಡ…. ಸತ್ರೇ ಜೀವ ಹೋಗ್ತದಲ್ಲ…
ಕಾಳ – ಜೀವ್ ಹೋತ್ತ್…
ಸಾಯ್ಬ್ರ್– ಜೀವ ಓದ್ರೆ ಪ್ರಾಣ ಓಗ್ತದಲ್ಲ…
ಕಾಳ – ಎಂತಾ…
ಸಾಯ್ಬ್ರ್– ಅರೇ…ಜೀವ ಓದ್ರೆ ಪ್ರಾಣ ಓಗ್ತದಲ್ಲ…
ಕಾಳ – (ಸಾಯ್ಬ್ರ್ ಮಾತಾಡು ಸ್ವರದಗೆ….)ಹೌ..ದ…ಲ್ಲಾ..
ಜೀವ ಅಂದ್ರ್ ಪ್ರಾಣ… ಪ್ರಾಣ ಅಂದ್ರ್ ಜೀವ…. ಎರ್ಡೂ ಹ್ವಾರ್ ಮೇಲೆ ಎಂತದೂ ಇಲ್ಲ….
ಸಾಯ್ಬ್ರ್– ಅರೆ ಅಲ್ಲಾ॒
ಕಾಳ – ಅಲ್ಲ ಅಂದೇಳ್ರ್ ಹಿಡ್ಕಂಡ್ ಬಡ್ದ್ ಬಿಡ್ವೆ… ಸಿಟ್ ಬಂದ್ರ್ ನಾ ಮನ್ಸನೇ ಅಲ್ಲ..
ಸಾಯ್ಬ್ರ್– ಅರೇ ನೀನು ಯಾಕೆ ಸಿಟ್ಟು ಮಾಡ್ತದೆ…
ಕಾಳ – ಇಲ್ಲ ಇಷ್ಟೂ ನೆಡದ್ ಹೌದ್ ॒ನೀವ್ ಬಂದ್ಕಂಡ್ ಅಲ್ಲ ಅಂತ್ರ್ಯಲ…
ಸಾಯ್ಬ್ರ್– ಅರೆ ॒ಕಾಳು ನಿಂದು ಮಂಡೆ ಎಲ್ಲಿ ಇಟ್ಟಿದ್ದೆ ನೀನು…
ಕಾಳ – ಎಚಿತ ಅರೆ ಕಾಳು… ಅರೆ ಕಾಳು ಅಲ್ಲ ಇಡೀ ಕಾಳು
ಸಾಯ್ಬ್ರ್– ಏ ಇಡೀ ಕಾಳು
ಕಾಳ – ಇಗಾಣಿ ಹಾಂಗಿಂದೆಲ್ಲ ಹೇಳ್ಬೇಡಿ ॒ಬರೀ ಕಾಳು ಅಂದೇಳಿ॒
ಸಾಯ್ಬ್ರ್– ಬರೀ ಕಾಳು॒
ಕಾಳ – ಮತ್ ಸುರುವಾಯ್ತಲ ಇವ್ರದ್
ಸಾಯ್ಬ್ರ್– ಅರೇ ಕಾಳು ಅಂದ್ರೆ ಇಡೀ ಕಾಳು ಅಂತ ಹೇಳ್ತದೆ… ಇಡೀ ಕಾಳು ಅಂದ್ರೆ ಬರೀ ಕಾಳು ಹೇಳ್ತದೆ…
ಕಾಳ – ಯಾವ್ದೂ ಬೇಡ… ಕಾಳು… ಸಾಕ್…
ಸಾಯ್ಬ್ರ್– ಯಾವ್ದೂ ಬೇಡ ಕಾಳು…
ಕಾಳ – ಅಗ ಮತ್….
ಸಾಯ್ಬ್ರ್– ಕಾಳು… ನಿನ್ಗೆ ಹೇಗೆ ಮಾತಾಡುದು ನಾನು…
ಕಾಳ – ಎಂಥಾರೂ ಹೇಳಿನಿಯತ್ ನೀವ್
ಸಾಯ್ಬ್ರ್– ಅರೇ ಕಾಳು.. ನೀನು ಚಲೋ ಚಲೋ…
ಕಾಳ – ಅದಿರ್ಲಿ… ನೀವ್ ಅಲ್ಲ ಅಂದ್ರ್ಯಲ ಎಂಥಕೆ?
ಸಾಯ್ಬ್ರ್– ನಾನು ನಿಂದು ವಿಷ್ಯ ಅಲ್ಲ ಅಂತ ಹೇಳಿದ್ದಲ್ಲ… ಅರೇ ನಮ್ದು ಭಗವಾನ್ ಇಲ್ಲಾ…ನಮ್ದು ಅಲ್ಲಾ ದೇವ್ರು ಇಲ್ಲಾ…
ಕಾಳ – ಹೋ… ನಿಮ್ದ್ ಅಲ್ಲ ದೇವ್ರು ಇಲ್ಲ್ಯಾ?
ಸಾಯ್ಬ್ರ್– ಅಲ್ಲ ದೇವ್ರು ಇಲ್ಲ ಅಂತ ಹೇಳ್ತದೆ… ಹಾಗಲ್ಲ… ನಮ್ದು ಅಲ್ಲ ದೇವ್ರು ಇಲ್ಲಾ…
ಕಾಳ – ಇಲ್ಲ…ಇಲ್ಲಾ…. ಹಾ ಹಾ… ಇತ್ತ್ ಇತ್ತ್
ಸಾಯ್ಬ್ರ್– ಅರೇ… ನಿಮ್ದು ಕುಟುಂಬದಲ್ಲಿ ಹೀಗಾಯ್ತಲ್ಲ ಅಂತ ನಮ್ದು ಅಲ್ಲಾ ದೇವ್ರ ನೆನ್ಪು ಮಾಡ್ತು…
ಕಾಳ – ಹೋ ಹಾಂ…ಗೆ… ಇಲ್ಲ್ ನೆಡದ್ ಅಲ್ಲ ಅಂದೇಳಿ ಹೇಳದ್ದಲ್ಲ…ದೇವ್ರ್ ನೆನ್ಪ್ ಮಾಡದ್ದಾ?
ಸಾಯ್ಬ್ರ್– ಏ ಕಾಳು ನೀನು ಸಾಯ್ಬೇಡ… ನೀನು ಚಲೋ ಚಲೋ…ಆಸ್ತಾನ್ ಕೋ ಚಲೋ
ಕಾಳ – ಈ ಚಲೋ ಅಂದ್ರೆ ಎಂತ ಸಾಯ್ಬ್ರೆ…?
ಸಾಯ್ಬ್ರ್– ಅರೆ ಚಲೋ ಚಲೋ.. ಓಗು… ಓಗು…
ಕಾಳ – ಎಲ್ಲಿಗೆ…?
ಸಾಯ್ಬ್ರ್– ಆಸ್ತಾನ್ ಕೋ ಚಲೋ…
ಕಾಳ – ಸಾಸ್ತಾನ ಅಂದ್ರೆ ಬ್ರಹ್ಮಾವರದ್ ಬುಡ್ದಲ್ ಅಲ್ದಾ?
ಸಾಯ್ಬ್ರ್– ಅರೇ ಇದೇನು ಹೇಳ್ತದೆ…?
ಕಾಳ – ಅಲಾ… ಸಾಸ್ತಾನ, ಬ್ರಹ್ಮಾವರ … ಆ ಬದಿಯಲ್ ಅಲ್ದಾ..?
ಸಾಯ್ಬ್ರ್– ನಿಮ್ದು ನವಾಬ ಇಲ್ಲಾ…
ಕಾಳ – ನವಾಬ್ನಾ…?
ಸಾಯ್ಬ್ರ್– ಅರೇ ನಿಮ್ದು ಮಹಾರಾಜ ಇಲ್ಲಾ…
ಕಾಳ – ಹಾ ಹ ಇದ್ರ್ ಇದ್ರ್…
ಸಾಯ್ಬ್ರ್– ಆಸ್ಥಾನ್ ಕೋ ಚಲೋ ಔರ್ ಮಹಾರಾಜ್ ಸೇ ಬೋಲೊ… ಮಹಾರಾಜ ನ್ಯಾಯ ಕೊಡ್ಬೇಕಲ್ಲ…
ಇಲ್ಲಿ ನೋಡು… ನ್ಯಾಯಿ ತೆಪ್ಪು ಮಾಡ್ಲಿ… ಞರಿ ತೆಪ್ಪು ಮಾಡ್ಲಿ…
ಕಾಳ – ಎಂಥಾ ನ್ಯಾಯಿ ಞರಿ ಅಂತ್ರಿ ಸಾಯ್ಬ್ರ್ರೆ…
ಸಾಯ್ಬ್ರ್– ಬಡವ ತೆಪ್ಪು ಮಾಡ್ಲಿ, ಶ್ರೀಮಂತ ತೆಪ್ಪು ಮಾಡ್ಲಿ.. ಅರೇ ಭಟ್ರು ತೆಪ್ಪು ಮಾಡ್ಲಿ, ಶೆಟ್ರು ತೆಪ್ಪು ಮಾಡ್ಲಿ…
ಕಾಳ – ಇಗಾ… ಶೆಟ್ರ್..ಭಟ್ರ್ ಸುದ್ದಿ ಬ್ಯಾಡ.. ಹ್ವಾ….
ಸಾಯ್ಬ್ರ್– ಯಾರು ತೆಪ್ಪು ಮಾಡಿದ್ರು ತೆಪ್ಪು ತೆಪ್ಪೇ ಅಲ್ವಾ? ಮಹಾರಾಜ ನ್ಯಾಯ ಕೊಡ್ಬೇಕಲ್ಲ…ನೀನು ಓಗಿ ಕೇಳು… ಮಹಾರಾಜ ನ್ಯಾಯ ಕೊಡ್ಲಿಲ್ಲ… ಹೊಳೆಗೆ ಬಿದ್ದು ಸಾಯಿ… ನಾನು ನೋಡ್ತದೆ…
ಕಾಳ – ಒಹೋ… ನೀವ್ ನಮ್ಗ್ ಉಪ್ಕಾರ ಮಾಡುದ್ ಇಷ್ಟೇ… ನಾನ್ ಸಾವತಿಲ್ ನೀವ್ ಮೇಲ್ ನಿಂತ್ಕಂಡ್ ಕಾಂತ್ರಿ ಅಲ್ದಾ…?
ಸಾಯ್ಬ್ರ್– ಅಷ್ಟೊತ್ತಿಗೆ ನಾನು ಮಹಾರಾಜನಲ್ಲಿ ಓಗಿ ಕೇಳ್ತದೆ… ನೀನು ಯಾಕೆ ನ್ಯಾಯ ಕೊಡ್ಲಿಲ್ಲ ಅಂತ ಕೇಳ್ತದೆ…
ಕಾಳ – ಆಯ್ಲಿ ಸಾಯ್ಬ್ರೆ… ಒಳ್ಳೇ ಹೊತ್ತಿನಂಗ್ ಬಂದ್ರಿ… ಬಂದ್ ನಂಗೊಂದ್ ದಾರಿ ತೋರ್ಸಿರಿ…ನಾನ್ ಮಹಾರಾಜ್ರ್ ಬುಡ್ಕ್ ಹೋತೆ…ಹೋಯಿ ನ್ಯಾಯ ಕೇಂತೆ… ನ್ಯಾಯ ಸಿಕ್ದಿರೆ ನೀವ್ ಹೇಳ್ದಂಗೆ ಮಾಡ್ತಿ… ಆರ್ ಒಂದ್ ಕೆಲ್ಸ… ನಾನ್ ಅಲ್ಲಿಗ್ ಹೋತೆ… ನೀವೆಲ್ಲಿಗೆ ಹೋತ್ರಿ..?
ಸಾಯ್ಬ್ರ್– ನೀನು ಅಲ್ಲಿಗೆ ಓಗು… ನೀನು ಬರುವವರೆಗೆ ನಿನ್ನ ಮನೆಯಲ್ಲಿ ನಿಂದು ಹೆಂಡ್ತಿ ಒಬ್ಳೇ ಇರ್ತದಲ್ಲ..
ಕಾಳ – ಹೌದ್.. ಅದಕ್ ಏನೀಗ…?
ಸಾಯ್ಬ್ರ್– ನಾನು ಇಲ್ಲಿ ಇರ್ತದೆ… ನೀನು ಅಲ್ಲಿಗೆ ಓಗು…
ಕಾಳ – ನೀವಿಲ್ ಇಪ್ಪುದ್ಯಾಕೆ?
ಸಾಯ್ಬ್ರ್– ಅದೇ ನಿನ್ನ ಹೆಂಡ್ತಿ ಒಬ್ಳೇ ಇರ್ತದಲ್ಲ… ನಾನು ನಿಂದು ಹೆಂಡ್ತಿಗೆ ರಸ್ಕಿಣಿ ಮಾಡ್ತದೆ…
ಕಾಳ – ನೀವ್ ರಸ್ಕಿಣಿ ಮಾಡುದು ಬ್ಯಾಡ.. ಎಂತ ಮಾಡುದು ಬ್ಯಾಡ.. ಎಲ್ಲಾ ಅಂಜಾದಾತ್ ಹ್ವಾಯ್…
ಸಾಯ್ಬ್ರ್– ಅರೇ ನಮ್ದು ಈಗ ಏನು ಮಾಡ್ಬೇಕು…?
ಕಾಳ – ಏನ್ ಮಾಡ್ಕಂದೇಳಿ ನಾನ್ ಹೇಳ್ತಿ ಹ್ವಾಯ್… ಈಗ ಇಲ್ಲಿವರಿಗ್ ಬಂದ್ ಇಂಥದ್ ಮಾಡ್ ಅಂದೇಳಿ ಹೇಳ್ದರೂ ನೀವೆ…ನಿಮ್ಮನೇನ್ ನಾನ್ ಕರಿಲ್ಲ.. ಆರೂ ಉಪ್ಕಾರ ಮಾಡ್ತ್ರಿ ಅಂದೇಳಿ ಹೇಲ್ತ್ರಿಯಲ್ದಾ.. ಹಾಂಗಿದ್ರ್ ಒಂದ್ ಕೆಲ್ಸ ಮಾಡಿ…
ಸಾಯ್ಬ್ರ್– ಬೋಲೋ…
ಕಾಳ – ನಾನ ರಾಜನ ಆಸ್ಥಾನಕ್ಕೆ ಹೋತೆ… ನನ್ನೊಟ್ಟಿಗೆ ನೀವೂ ಬನಿ, ನಾನ್ ಹೇಳದ್ ಹೌದ್ ಅಂದೇಳಿ ನೀವ್ ಸಾಕ್ಷಿ ಹೇಳಿ
ಸಾಯ್ಬ್ರ್– ಆಸ್ಥಾನದಲ್ಲಿ ನಾನು ಸಾಕ್ಷಿ ಹೇಳ್ಬೇಕು…? ಅಲ್ಲಿ ರಾಜ್ ಇದ್ರೆ ನಾನು ಸಾಕ್ಷಿ ಹೇಳ್ತದೆ… ಮಹಾರಾಜ ಇದ್ರೆ ನಾನು ಸಾಕ್ಷಿ ಹೇಳ್ತದೆ…
ಕಾಳ – ರಾಜರು ಇಲ್ದೇ ಎಲ್ಲಿಗ್ ಹೋತ್ರ್… ಬನಿ ಹೋಪ…
ಸಾಯ್ಬ್ರ್– ಅರೇ…ಚಲೋ…ಚಲೋ… ನೀನು ಮುಂದೆ ಮುಂದೆ ಓಗು… ನಾನು ಹಿಂದೆ ಹಿಂದೆ ಬರ್ತದೆ.. ಚಲೋ ಚಲೋ…
(ಅಷ್ಟೊತ್ತಿಗೆ ನಾಗ್ವೇಣಿ ಬೊಬ್ಬಿ ಹೊಡುಕ್ ಶುರು ಮಾಡ್ತ್ಲ್…)
ನಾಗ್ವೇಣಿ – ಹ್ವಾಯ್ ಇಲ್ಕಾಣಿ.. ಇಲ್ಕಾಣಿ… ನನ್ ಮೈ ಮುಟ್ತಾ… ಅಂವ…
ಸಾಯ್ಬ್ರ್– ಏ ಲಡ್ಕೀ…ಏ ಲಡ್ಕೀ…
ಕಾಳ – ಏನಾ… ಮುಂದ್ ಮುಂದ್ ಹೋಯ್ನಿ ಅಂದೇಳಿ ಹೇಳ್ಕಂಡ್… ನಾ ಮುಂದ್ ಹೋಪತಿಲ್ ಹಿಂದಿಂದ್ ನನ್ ಹೆಂಡ್ತಿ ಮೈ ಮುಟ್ತ್ಯಾ? ಏನಾ… ಎಂತದ್ ನಿನ್ ಕತಿ… ಎಂತ ಅಂದೇಳಿ ಮಾಡಿದ್ಯಾ ನೀನ್…
ಸಾಯ್ಬ್ರ್– ನಾನು ಮುಟ್ಟಿದ್ದಲ್ಲ… ಮುಟ್ಟಿ ಹೋದದ್ದು….
ಕಾಳ – ಎಂತದ್… ಮುಟ್ಟಿ ಹೋದ್ದಾ…ನಿನ್ ನಿನ್…. ನೀ ಆಗಳಿಂದೀಚಿಗ್ ಏನೋ ಒಂಥರಾ ಮಾತಾಡ್ತಿದ್ದೆ… ನಿನ್ ಕಂಡ್ರ್ ನಂಗ್ ಅನ್ಮಾನ ಬತ್ ಬಲ್ಯಾ…
ಸಾಯ್ಬ್ರ್– ಅರೇ ನಮ್ದು ಮ್ಯಾಲೆ ನಿಂಗೆ ಯಾಕೆ ಅನ್ಮಾನ…?
ಕಾಳ – ಅನ್ಮಾನ ಯಾಕಂದ್ರೆ.. ಇದನ್ನೆಲ್ಲಾ ಕಾಂತಿದ್ರೆ.. ನಿಂದ್ ಯಾಸ ಆಯಿ ಕಾಣತ್ ಬಲ್ಯಾ…?
ಸಾಯ್ಬ್ರ್– ಅರೇ… ಬರ್ಕತ್ತಿಲ್ಲ ಖಾನ್…ಉಉ
ಕಾಳ – ಬರ್ಕತ್ತಿಲ್ಲ…ಪುರ್ಸೊತ್ತಿಲ್ಲ… (ಗಡ್ಡ ಹಿಡ್ದ್ ಎಳಿತ… ಗಡ್ಡ ಕಳ್ಚಿ ಕೈಗ್ ಬತ್ತ್)
ಓ..ಹೋ… ಗಡ್ಡ ಕಟ್ಕಂಡ್ ಇಲ್ಲಿವರಿಗ್ ಬಂದನಾ ನೀನ್.. ನೀನ ಯಾರಾ…?
ನಾಗ್ವೇಣಿ – ಹ್ವಾಯ್.. ಮೊನ್ನೆ ಬಂದ್ ನನ್ ಶೀಲ ಹಾಳ್ ಮಾಡದ್ ಇವ್ನೇ… ಇವ್ನೇ..
ಕಾಳ – ಒಹೋ… ಇದ್ ಬ್ಯಾರೆ ಯಾರೂ ಅಲ್ಲ… ಇದ್ ಮಹಾರಾಜ… ವೀರ್ಯಗುಪ್ತ…
ಎಂಥಾ ಕೆಲ್ಸ ಮಾಡಿಬಿಟ್ಟೆ…ಮಹಾರಾಜ…. ಎಂಥಾ ಕೆಲ್ಸ ಮಾಡಿಬಿಟ್ಟೆ
( ಕಾಳನಿಗೂ ಮಹಾರಾಜನಿಗೂ ಜೋರ್ ಜೋರ್ ಮಾತ್ ಆತ್ತ್… ಕಡಿಗೆ ಕಾಳ ಮಹಾರಾಜನ ಎದುರು ಹುಲಿ ಕಣಗೆ ಅಬ್ರ ತೋರ್ಸಿ… ಕತ್ತಿ ತಕಂಡ್ ಅವನ್ನೇ ಕೊಂದ್ ಹಾಕಿ… ಹೆಂಡ್ತಿಯೊಟ್ಟಿಗೆ ಹೊಳಿಗ್ ಹಾರಿ ಜೀವ ತೆಕ್ಕಂತ)
hoi e kankrit kadinalli iruva nam kundapur jana neev, neev madthiro e kelsa nange khushi aith. namskara, matthe sikthi.