Mumbai-Protest-against-Assam-riots-turns-violent
ಮೊನ್ನೆ ಕಡಲ ತಡಿಯ ತಲ್ಲಣ ಪುಸ್ತಕ ತಕಂಡ್ ಬಂದ್ ಓದ್ತಾ ಇದ್ದೆ. ಈ ಪುಸ್ತಕ ಓದ್ತಾ ಇಪ್ಪತಿಗೆ ನಮ್ ಕುಂದಾಪ್ರ ಬದಿಯಗೆ ನಾ ಶಾಲಿಗ್ ಹೋಪತಿಗೆ ನೆಡದ್ ಒಂದ್ ಗಲಾಟಿ ನೆನ್ಪ್ ಆಯ್ತ್. ಅದಕ್ಕೂ ಮೊದ್ಲ್ ಅಷ್ಟ್ ದೊಡ್ಡ್ ಗಲಾಟಿ ನೆಡ್ದಿತೋ ಇಲ್ಯೋ ಗೊತ್ತಿಲ್ಲ. ಆರೆ ಅದ್ ಮಾತ್ರ ಕುಂದಾಪ್ರ ಬದ್ಯಗೆ ನಾ ಕಂಡ್ ದೊಡ್ಡ್ ಗಲಾಟಿ

ಆಗ ನಾನ್ ಏಳ್ನೇ ಕ್ಲಾಸಗೆ ಇದ್ದೆ. ಕಮಲಶಿಲೆ ಶಾಲಿಗ್ ಹೋತಾ ಇದ್ದೆ. ಒಂದಿನ ನನ್ ಕ್ಲಾಸ್ಮೇಟ್ ರಘು ಅಂಬನ್ ಬೆಳಿಗ್ಗೆ ಬಂದನ್ ಒಂದ್ ಸುದ್ದಿ ಹಿಡ್ಕಂಡ್ ಬಂದಿದ್ದ. ಯಾರೋ ಸಾಯ್ಬ್ರ್ ಅಂಬ್ರ್… ಕಾರಗೆ ಬಂದದ್ದಂಬ್ರ್. ಒಬ್ಬ ಹಿಂದೂ ಹುಡ್ಗನ್ ಕಾರಿಗ್ ತುಂಬ್ಕಂಡ್ ಹೋಯಿರ್ ಅಂಬ್ರ್. ಪ್ಯಾಟಿ ಬದ್ಯಗೆ ಜೋರ್ ಗಲಾಟಿ ಶುರುವಾಯಿತ್ ಅಂಬ್ರ್. ಹಿಂದೂ ಹುಡ್ಗನಿಗೆ ಸಮಾ ಹೊಡ್ದಿರ್ ಅಂಬ್ರ್. ಹಾಂಗಂಬ್ರ್ ಹೀಂಗಂಬ್ರ್… ಅಂದೇಳಿ ಕತಿ ಹೇಳುಕ್ ಶುರು ಮಾಡಿದ. ನಾವೆಲ್ಲಾ ಅವ್ನ್ ಸುತ್ತ ಬಾಯ್ ಕಳ್ಕಂಡ್ ಅವ ಹೇಳ್ತಿದ್ ಕತಿ ಕೇಂತಾ ಕೂಕಂಡಿದ್ದಿತ್. ನಮ್ ನಮ್ಮೊಳ್ಗೇ ನಮ್ಗ್ ತಿಳ್ದ್ ಮಟ್ಟಿಗೆ ಗುಸು-ಗುಸು ಮಾತಾಡ್ಕಂತಾ ಇದ್ದಿತ್. ನಮ್ಗ್ ಆ ಸುದ್ದಿ ಎಷ್ಟ್ ವಿಚಿತ್ರ ಆಯಿ ಕಂಡಿತ್ ಅಂದ್ರೆ ಅದನ್ ನಂಗ್ ಹೇಳುಕ್ ಬತ್ತಿಲ್ಲ. ಅಲ್ಲಿವರಿಗೆ ನಾವ್ ಕೇಂಡದ್ ಏನಿದ್ರೂ ಪೇಪರಗೆ ಓದದ್ ಏನಿದ್ರೂ ಎಲ್ಲೋ ಹಾಂಗ್ ಆಯ್ತಂಬ್ರ್. ಕರ್ಫ್ಯೂ ಹಾಕಿರಂಬ್ರ್… ಇಷ್ಟ್ ಜನ ಸತ್ತ್ ಹೋರಂಬ್ರ್… ಆ ಎಲ್ಲೋ ಈಗ ನಮ್ ಕುಂದಾಪ್ರ ಆಯ್ತಲೆ ಅಂದೇಳಿ ಒಂಥರಾ ಹೆದ್ರಿಕಿ, ಒಂದ್ ನಮೂನಿ ಕುತೂಹಲ, ಟೆನ್ಷನ್. ಮಧ್ಯಾಹ್ನದ ಹೊತ್ತಿಗೆ ಸುದ್ದಿ ಹಗೂರ ಎಲ್ಲ ಬದಿಗ್ ಹರ್ಡುಕ್ ಶುರುವಾಯಿತ್ತ್. ಹುಡ್ಗ ಮೂಡ್‌ಬಗಿಯನ್ ಅಂಬ್ರ್. ಸಾಯ್ಬ್ರ್ ಹುಡ್ಗಿನ ಲವ್ ಮಾಡಿದ ಅಂಬ್ರ್… ಅದ್ಕೇ ಸಾಯ್ಬ್ರ್ ಎಲ್ಲಾ ಒಟ್ಟಿಗ್ ಸೇರಿ ಅವನ್ ಹೊತ್ಕಂಡ್ ಹೊಯಿರಂಬ್ರ್… ಹೀಂಗೆ ರೆಕ್ಕಿ-ಪುಕ್ಕ-ಬಾಲ ಎಲ್ಲ ಕಟ್ಕಂಡ್ ಇದ್ದದ್ ಇಲ್ದಿದ್ದದ್ ಎಲ್ಲಾ ಸೇರಿ ಸುದ್ದಿಯೇ ಸುದ್ದಿ.

ಮಧ್ಯಾಹ್ನದ ಮೇಲ್ ಬಸ್ ತಿರ್ಗುದ್ ಎಲ್ಲಾ ಕೈದ್ ಆಯ್ತ್. ಕಡಿಗ್ ಶಾಲಿಗ್ ರಜಿ ಕೊಟ್ರ್. ಬಸ್ಸಿಲ್ದೇ ನೆಡ್ಕಂಡೇ ಮನಿಗ್ ಹೋಪತಿಗೆ ಸಾಕ್ ಬೇಕಾಯ್ತ್. ಆರೂ ಮಾತಾಡುಕ್ ಬಿಸಿ ಬಿಸಿ ಸುದ್ದಿ ಇದ್ದಿತಲ್ದಾ… ಹಾಂಗಾಯ್ ನೆಡದ್ ದೂರ ಗೊತ್ತೇ ಆಯಲ್ಲ. ಮನಿಗ್ ಬಪ್ಪುರೊಳ್ಗೇ ಎಲ್ಲಾ ಬದ್ಯಗೂ ಸುದ್ದಿ ನಮ್‌ನಮೂನಿ ಬಣ್ಣ ಕಟ್ಕಂಡ್ ಎಲ್ಲರ್ ಬಾಯಗೂ ಅದೇ ಮಾತ್. ಅದ್ರೊಟ್ಟಿಗೆ ಕಂಡ್ಲೂರಗೆ ಗಲಾಟಿ ಅಂಬ್ರ್, ಸಿದ್ದಾಪುರ್ದಗೆ ಬಂದ್ ಅಂಬ್ರ್, ಕುಂದಾಪ್ರದಗೆ ಸಾಯ್ಬ್ರ್ ಗೂಡಂಗ್ಡಿಗೆಲ್ಲ ಬೆಂಕಿ ಕೊಟ್ಟಿರಂಬ್ರ್. ಹೊಸಂಗ್ಡಿಯಗೆ ಸಾಯ್ಬ್ರ್ ತ್ವಾಟ ಎಲ್ಲ ಹೊಡಿ ಮಾಡಿ ಹಾಕ್ರಂಬ್ರ್, ಕುಂದಾಪ್ರದಗೆ ಕರ್ಫ್ಯೂ ಹಾಕಿರಂಬ್ರ್… ಹೀಂಗೇ ಸುದ್ದಿಯೇ ಸುದ್ದಿ
ಅಂತೂ ರಾತ್ರಿ ಆಯ್ತ್. ಯಾವ್ ಬದಿಗ್ ಕೆಮಿ ಕೊಟ್ರೂ ಗಲಾಟಿದೇ ಸುದ್ದಿ. ರಾತ್ರಿ ಮಲ್ಕಂಡ್ ಬೆಳಿಗ್ಗೆ ಏಳುವತಿಗೆ ಮತ್ತೊಂದ್ ಭಯಂಕರ ಸುದ್ದಿ ಬಂದಿತ್ತ್. ನಮ್ ಊರಗ್ ಇದ್ದ್ ಒಂದೇ ಒಂದ್ ಸಾಯ್ಬ್ರ್ ಅಂಗ್ಡಿಗ್ ಯಾರೋ ಬೆಂಕಿ ಕೊಟ್ಟಿರ್. ಅಂಗ್ಡಿ ಪೂರ್ತಿ ಸುಟ್ಟ್ ಹೋಯ್ತ್. ಮುಲ್ಲಿಯಗೆ ಇದ್ದ್ ನಮ್ ಊರಗೇ ಹೀಂಗೆಲ್ಲ ಆತ್ತ್ ಅಂದೇಳಿ ಯಾರೂ ಎಣ್ಸ್‌ಕಂಡಿರಲ್ಲ. ಇನ್ನ್ ಪ್ಯಾಟಿ ಬದ್ಯಗೆ ಎಂತ ಆಯಿತ್ತೋ ಅಂದೇಳಿ ಸಮಾ ಸುದ್ದಿ ಇಲ್ಲ. ಬಸ್ಸ್ ಓಡುದ್ ಕೈದ್ ಆಪುಕೋಯಿ ಪೇಪರ್ ಸತೇ ಬತ್ತಿಲ್ಲ. ಶಾಲಿಗೆಲ್ಲ ಒಂದ್ ವಾರ ರಜಿ ಕೊಟ್ಟಿರ್ ಅಂದೇಳಿ ಟಿ.ವಿ. ವಾರ್ತೆಯಗೆ ಕೇಂಡದ್ ಕಂಡ್ ರಜಿ ಸಿಕ್ಕದ್ದಕ್ ಖುಷಿ ಪಡುಕೂ ಆಗ್ದಿದ್ದ್ ನಮನಿ ಹೆದ್ರಿಕಿ ಹುಟ್ಟಿ ಹೋಯಿತ್ತ್. ಹೆಚ್ಚು ಕಡ್ಮಿ ಒಂದ್ ವಾರ ಹೀಂಗೇ ನಡಿತ್. ಎಷ್ಟೋ ಗೂಡಂಗ್ಡಿ ಬೆಂಕಿಯಗೆ ಸುಟ್ಟ್ ಬೂದಿಯಾಯ್ತ್. ಎಷ್ಟೋ ಚೂರಿ ಹಾಕದ್, ಕಲ್ಲ್‌ ಬಿಸಾಡದ್, ಬೆಂಕಿ ಹಚ್ಚದ್ ಸುದ್ದಿ

ಒಟ್ರಾಶಿ ಇಡೀ ಕುಂದಾಪ್ರಕ್ಕೆ ಬೆಂಕಿ ಬಿದ್ದಂಗಾಯಿತ್ತ್. ಎಷ್ಟೋ ಜನ ಅವ್ರ್ ಹಗಿ ತೀರ್ಸ್‌ಕಂಡ್ರ್. ಅಲ್ಲಿನೊರಿಗೆ ಅಷ್ಟ್ ಸೇಲ್ ಇಲ್ದಿದ್ದ್ ಕುಂದಪ್ರಭ ಪೇಪರಿಗೆ ಏಕ್‌ದಂ ಡಿಮ್ಯಾಂಡ್. ಒಂದಕ್ಕೆರ್ಡ್ ರೇಟಿಗೆ ಮಾರಾಟ ಆಯ್ತ್. ಎಲ್ಲಾ ಗಲಾಟಿ ಮುಗ್ದ್ ತಣ್ಣಗಾರ್ ಮೇಲ್ ಸುದ್ದಿ ಹಗೂರ ಹೊರ್ಗ್ ಬಂತ್. ಹುಡ್ಗನ್ ಹೆಸ್ರ್ ಭಾಸ್ಕರ ಕೊಠಾರಿ ಅಂಬ್ರ್. ಅವ ಒಬ್ಳ್ ಸಾಯ್ಬ್ರ್ ಹುಡ್ಗಿನ ಲವ್ ಮಾಡ್ತಿದ್ದ ಅಂಬ್ರ್. ಹುಡ್ಗಿ ಮನ್ಯರಿಗ್ ಒಪ್ಗಿ ಇದ್ದಿತಂಬ್ರ್. ಅವ್ನ್ ಮನ್ಯರಿಗೆ ಒಪ್ಗಿ ಇರ್ಲ್ಲಿಲ್ಲ ಅಂಬ್ರ್. ಅಲ್ಲಲ್ಲ ಅವ್ನ್ ಮನ್ಯರ್ ಒಪ್ಪಿರಂಬ್ರ್. ಹುಡ್ಗಿ ಕಡ್ಯರದ್ದೇ ರಗ್ಳಿ ಅಂಬ್ರ್. ಅಂತೂ ಹೀಂಗೆ ಇದ್ರೆ ಮದಿ ಆಪುದ್ ಕಷ್ಟ ಅಂದೇಳಿ ಅವ್ನೇ ಕಿಡ್ನ್ಯಾಪ್ ಆದ್ ನಾಟ್ಕ ಮಾಡದ್ ಅಂಬ್ರ್… ಅಲ್ಲಲ್ಲ ಹುಡ್ಗಿ ಕಡ್ಯರೇ ಅವನ್ನ ಹುಗ್ಸಿ ಇಟ್ಟದಂಬ್ರ… ಯಾವ್ದನ್ ನಂಬ್ಕೋ ಬಿಡ್ಕೋ ಗೊತ್ತಿಲ್ಲ… ಇವತ್ತಿಗೂ… ಕತಿ ಎಂತದೇ ಇರ್ಲಿ… ಇದೆಲ್ಲಾ ಆರ್ ಮೇಲೆ ಮತ್ತ್ ಕುಂದಾಪ್ರದಗೆ ಹಿಂದೂಗಳ ಮಧ್ಯ ಸಾಯ್ಬ್ರ್ ಮಧ್ಯೆ ಮುಂಚಿನ ಆ ವಿಶ್ವಾಸ ಇವತ್ತಿಗೂ ವಾಪಾಸ್ ಬರಲ್ಲ. ಮೇಲಿಂದ್ ಮೇಲೆ ಎಲ್ಲಾ ಸಮಾ ಇರತ್. ಯಾವ್ದಾರೂ ಬದ್ಯಗೆ ಗಲಾಟಿ ಸುರುವಾದ್ ಸುದ್ದಿ ಗೊತ್ತಾರೆ, ಇಲ್ಲೂ ಕಿಡಿ ಹಾರುಕ್ ಸುರುವಾತ್ತ್. ಗಂಗೊಳ್ಳಿ, ಕಂಡ್ಲೂರು ಕುಂದಾಪುರದಗೆ ಇವತ್ತಿಗೂ ಬೂದಿಯೊಳ್ಗಿನ ಕೆಂಡವೇ ಇದ್

ಇಷ್ಟೆಲ್ಲಾ ಗಲಾಟಿ ಮುಗ್ದ್ ಆರ್ ಮೇಲೆ ಕುಂದಪ್ರಭದಗೆ ಒಂದ್ ಸುದ್ದಿ ಬಂತ್. ಭಾಸ್ಕರ ಕೊಠಾರಿ ಮತ್ತು ಮುನಾವರ್‌ಗೆ ಮದಿ ಅಂಬ್ರ್. ಮುನಾವರ್‌ಗೆ ಸ್ನೇಹಲತಾ(?) ಅಂದೇಳಿ ಪುನರ್‌ನಾಮ್ಕರ್ಣ ಆಯ್ತ್. ಅಂತೂ ಅಷ್ಟೆಲ್ಲಾ ರಾಮಾಯ್ಣ ಮಾಡ್ದ ಕತಿ ಹೀಂಗ್ ಮುಗಿತ್. ಕಡಿಕೆ ಎಲ್ಲ ಸುಖ್ದಂಗೆ ಇದ್ರ್…
ಇದ್ರಾ… ನೀವೆ ಆಲೋಚ್ನಿ ಮಾಡಿ ಹೇಳಿ…. ‘ಕಡಲ ತಡಿಯ ತಲ್ಲಣ’ ಪುಸ್ತ್ಕ ಓದುಕ್ ಸುರು ಮಾಡ್ರ್ ಕೂಡ್ಲೇ ಇದೆಲ್ಲ ಎಂತಕೋ ನೆನ್ಪ್ ಆಯ್ತ್… ಅದನ್ನ್ ಹಾಂಗೇ ನಿಮ್ಮತ್ರ ಹೇಳ್ಕ್ ಅನ್ಸಿ ಹಾಂಗೇ ಹೇಳಿದೆ… ಆಲೋಚ್ನಿ ಮಾಡುದ್-ಬಿಡುದ್ ನಿಮ್ಗೆ ಬಿಟ್ಟಿದೆ…

ಟಿಪ್ಪಣಿಗಳು
  1. ವಿಜಯರಾಜ್ ಕನ್ನಂತ ಹೇಳುತ್ತಾರೆ:

    nimm nima abhipraaya hELaddakke nimgond dhanyavaada akaa..

  2. ರಾಜೇಶ್ ನಾಯ್ಕ ಹೇಳುತ್ತಾರೆ:

    ನಿಮ್ಮ ನೆನಪು ಭಾರೀ ಇದೆಯಲ್ರೀ! ಚಾಚೂ ತಪ್ಪದೆ ಎಲ್ಲಾ ವಿವರಿಸಿದ್ದೀರಿ.

  3. ಸಂತು ಹೇಳುತ್ತಾರೆ:

    ವಿಜಯ್,

    ನಾನು ’ ಕಡಲ ತಡಿಯ ತಲ್ಲಣ’ ಪುಸ್ತ್ಕದ್ ಬಗ್ಗೆ ಕೇಂಡಿನೆ. ಆದ್ರೆ, ನಂಬದೆಗೆ ಪರಿಸ್ಥಿತಿ ಅಷ್ಟ್ ಕೆಟ್ ಹೋಯ್ತಾ ಮರ್ರೆ?. ಕರ್ನಾಟಕದ್ ಎಲ್ಲು ಇಲ್ದಿದ್ ಜಗಳ ನಮ್ ಬ್ಯಾಲಿ ಬದೆಗೆ ಆತಿತ್ ಅಂದೇಳೀ ಕೂಗ್ ಹೊಡಿತ್ರಪ. ನಂ ಬದಿ ಜನ ಸ್ವಲ್ಪ over react ಮಾಡುದ್ ಜಾಸ್ತಿ. 60s, 70s, 80sಗೆಲಾ ಕತ್ತಿ ಸುತ್ತಿ ನಕ್ಷತ್ರದವರು ಜಾಸ್ತಿ ಇದ್ದಿರ್. ಈಗ ಕೆಸರಿ ಬಾವುಟದವರು ಜಾಸ್ತಿ ಇದ್ರು. ಇನ್ನೋಂದು 20 ವರ್ಶ ಆದ್ರ್ ಮೇಲ್ ಬೇರೆ ಯಾವುದು ಬಾವುಟದರ್ (ಹಳದಿಯೊ, ನೀಲಿಯೊ) ಬತ್ರ್. ಅಪ್ಪನಿಂದ ಮಗ್ನಿಗೆ, ಮಗ್ನಿನಿಂದ ಮೊಮ್ಮಗನಿಗೆ political orientation ಬದ್ಲಾತ್ತಪ. ಎಲ್ಲರನ್ನ್ ಹೀಂಗೆ ಅಂದೇಳಿ ಜನರಲೈಸ್ ಮಾಡಿ ಕೋಳಿಪಡಿ ಮಾಡುದ್ ಎಂತಕಪಾ?

  4. deepa ಹೇಳುತ್ತಾರೆ:

    ನಮಸ್ಕಾರ ಕನ್ನಂತ್ರೆ
    ಈದ್ ಓದಿ ಮಸ್ತ್ ಖುಷಿ ಆಯ್ತ್ .ಮೊನ್ನೆನು ಹೀಂಗೆ ಗಲಾಟೆ ಶುರುವಯ್ತ್ ಕಡಿಕೆ ಅಲ್ಲೇ ಗಮ್ಧೋಯ್ತ್ .ಒಂಚೂರ್ ಹೆಳಿ ಸಿಕ್ಕರೆ ಸಾಕೆ ಮುಂದೆಂಥ ಅತ್ ಅಂತೇಳಿ ಹೇಳುಕಾತಿಲ್ಲ .ಹಳಿ ದ್ವೇಷ ಇದ್ದದೆಲ್ಲ ಅದರಲ್ಲೇ ತಿರ್ಸ್ಕಂಬುದ್ .ಯಾರೋ ಮಾಡುದ್ ಯಾರಿಗೋ ಶಿಕ್ಷೆ ಆಪುದ್.
    ಲಾಯ್ಕಯ್ತ್ ಬರದ ಬರದ ಹೀಂಗೆ ಬರಿತ ಇರಿ ಅಕ
    ದೀಪಾ

  5. Sadananda Adiga ಹೇಳುತ್ತಾರೆ:

    what happened to Bhaskar Kotari and Sneha Latha ? I remember they got married in presence of citizens of kundapur.
    16 years later i hope , even they find it as a fable
    please update if you any info

  6. suresh kota ಹೇಳುತ್ತಾರೆ:

    ನೀವ್ ಬರದ್ ಓದಿ ಪುನಾ ಎಲ್ಲ ನೆನಪಾಯ್ತ್ ಕಾಣಿ!
    ಆವತ್ತು ಹತ್ತಿಕೊಂಡ ಬೆಂಕಿ ಇವತ್ತಿಗೂ ಆರದೆ ಇಡೀ ದ.ಕ.ವನ್ನು ಸುಡ್ತಾ ಇದೆ.
    ಇದಕ್ಕೆಲ್ಲಾ ಕೊನೆ ಏಗಳಿಕೆ ಮಾರಾಯ್ರೆ?

  7. Praveen Kumar Shetty ಹೇಳುತ್ತಾರೆ:

    Nice writing, but sad story at the end, no one knows the mistrey behind the kidnap,including the guy involved!!

    But everyone knows the damages that happen between the communities and roles played by the outsiders!

    But every one knows and remembers, the way hindus given shelter to Muslim families in thier home during that time!!

    But everyone knows how local muslims stopped outsiders to enter the villages!!

    Now people should learn from histroy that we are here in this earth to live for our life time peacefully! Jai Ho

ನಿಮ್ಮ ಟಿಪ್ಪಣಿ ಬರೆಯಿರಿ