ಇನ್ನೊಂದೆರ್ಡ್ ಒಳ್ಳೇ ಆಟದ್ ಸುದ್ದಿ ಹಿಡ್ಕಂಡ್…

Posted: September 15, 2008 in ಯಕ್ಷಗಾನ
Tags: , , , ,

ಮೊನ್ನೆ ಶನಿವಾರ ರಾತ್ರಿ ಅಮೃತೇಶ್ವರಿ ಮೇಳ ಮತ್ತೆ ಅತಿಥಿ ಕಲಾವಿದ್ರೆಲ್ಲ ಸೇರಿ ವೀರ ವೃಷಸೇನ, ನಾಗಶ್ರೀ ಆಡಿದ್ರ್. ಕಾಂಬುಕೆ ನಾನೂ ಹೋಯಿದ್ದೆ. ಹೋದನಿಗೆ ಮತ್ತೆರ್ಡ್ ಒಳ್ಳೆ ಆಟದ್ ಸುದ್ದಿ ಸಿಕ್ತ್. ಅದನ್ನ್ ನಿಮ್ಗ್ ಹೇಳ್ವ ಅಂದೇಳಿ…

ಇತ್ತಿತ್ಲಾಯಿ ಹೊಸ ಆಟ ಆಡ್ರೆ ಬೆಂಗ್ಳೂರಗೆ ಜನವೇ ಬತ್ತಿಲ್ಲ ಅಂದೇಳಿ ಮೊನ್ನೆ ಮ್ಯಾಳ್ದರ್ ಒಬ್ರ್ ಹೇಳ್ತಿದ್ರ್. ಹಾಂಗಾಯ್ ಎಲ್ಲಾ ಮ್ಯಾಳ್ದರೂ ಪೌರಾಣಿಕ ಪ್ರಸಂಗವೇ ಹೆಚ್ಚ್ ಹೆಚ್ಚ್ ಆಡುಕ್ ಶುರು ಮಾಡಿರ್. ಇದಾದ್ರೆ ಪೌರಾಣಿಕ ಪ್ರಸಂಗ ಅಂದ್ರೆ ಖುಷಿ ಪಡುವರಿಗೆ ಒಳ್ಳೆ ಸುದ್ದಿ.

 

ಸಪ್ಟಂಬರ್ 26ನೇ ತಾರೀಕ್ ರಾತ್ರಿ ಹತ್ತೂವರಿಗೆ ರವೀಂದ್ರ ಕಲಾಕ್ಷೇತ್ರದಗೆ ಸಾಲಿಗ್ರಾಮ ಮ್ಯಾಳದವ್ರ್ ಬೆಂಗ್ಳೂರಗೆ ಮೊದಲ್ನೇ ಪ್ರಯೋಗ ಆಯಿ ಶ್ರೀ ಸೂರಾಲು ಕ್ಷೇತ್ರ ಮಹಾತ್ಮೆ ಪ್ರಸಂಗ ಆಡ್ತ್ರ್ ಅಂಬ್ರ್. ಇದನ್ನ್ ಬರ್ದದ್ ಪತ್ರಕರ್ತ ಕೆ. ಬಸವರಾಜ್ ಶೆಟ್ಟಿಗಾರ್.

ಆವತ್ತ್ ವಿಶೇಷ ಅಂದ್ರೆ- ರಾತ್ರಿ ಬೆಳ್ಗಾಪದ್ರೊಳ್ಗೆ ಒಟ್ಟ್ ನೂರಕ್ಕೂ ಹೆಚ್ಚ್ ವೇಷ ರಂಗಸ್ಥಳಕ್ ಬತ್ತ್ ಅಂಬ್ರ್. ಅದೂ ಅಲ್ದೇ ಅಣಿ ಕಟ್ಟುವರಿಂದ ಅಣಿಕಟ್ಕಂಡ್ ಕುಣ್ತಾ, ಮತ್ತೆ ಭೂತಕೋಲದ ಬಾರಿ ಇತ್ತಂಬ್ರ್. ಅಣಿವೇಷದಗೆ ಕ್ಷೇತ್ರಪಾಲ, ಬೊಬ್ಬರ್ಯ, ವೀರಭದ್ರ, ಕಲ್ಲುಕುಟಿಕ, ಪಂಜುರ್ಲಿ, ಕಾಳಿ, ಕಾಳಭೈರವ, ಕುಮಾರಸ್ವಾಮಿ ಎಲ್ಲಾ ಬತ್ರಂಬ್ರ್.

 

ಕ್ಷೇತ್ರ ಮಾಹಾತ್ಮೆ ಕತಿಯೊಳ್ಗೇ ಎಂತೆಲ್ಲಾ ಇತ್ತ್ ಅಂದ್ರೆ

ಕೃಷಿಕ ಕಾಳ ಬ್ರಹ್ಮರಾಕ್ಷಸ ಹ್ಯಾಂಗಾದ್?

ಮೂರ್ ಶಿವಲಿಂಗ ಭೂಲೋಕಕ್ ತಂದದ್ ಯಾರ್?

            ಸೂರಾಲಿಗೆ ಕ್ರೋಧಾಸುರ, ಮದಾಸುರ, ಸೂರಕ ಸೂರಾಲಿಗೆ ಬಂದದ್ ಯಾಕೆ?

ನೀಲಾಂಬರಿನ ಮದಿ ಆದ್ದ್ ಯಾರ್?

ಮಹಾಲಿಂಗೇಶ್ವರನ ಭಂಟ ಕಣ್ಣಪ್ಪ ಸ್ವಾಮಿ ರಂಗ ಪ್ರವೇಶ ಹ್ಯಾಂಗೆ?

ವೀರಭದ್ರ, ಪದೆಮಠ, ಸುರಾಲು ಜೆಡ್ಡಿನಲ್ಲಿ ನಿಂತದ್ ಹ್ಯಾಂಗೆ?

ರಾಜೇಂದ್ರ ತೋಳಾರ ಬ್ರಹ್ಮರಾಕ್ಷಸನ್ನ್ ಕೊಂದದ್ದ್ ಹ್ಯಾಂಗೆ?

ಕುಡುಬಿ ಜನಾಂದದವ್ರ್ ಸೂರಾಲಿಗೆ ಎಲ್ಲಿಂದ ಬಂದದ್?

ಮೊಗವೀರ ಪೇಟೆ ಆದ್ದ್ ಹ್ಯಾಂಗೆ?

ಸೂರಾಲನ್ ಹಾಳ್ ಮಾಡುಕ್ ಬಂದ ಸೂರಕನ್ನ್ ಕೊಂದದ್ದು ಯಾರ್?

ಶಿವ-ಪಾರ್ವತಿ ತಾಂಡವ ನೃತ್ಯ ಮತ್ತೆ ಆರ್ ಜನ ಸ್ತ್ರೀವೇಷದರಿಂದ ಸೂರಾಲನ್ನ ಹೊಗಳಿ ಹಾಡುವ ನೃತ್ಯ

 

ಹೀಂಗೆ ಪ್ರಸಂಗ ಭಾರೀ ಲಾಯ್ಕ್ ಇತ್ತಂಬ್ರ್.

 

ಮಾರ್‌ನೇ ದಿನ ಅಂದ್ರೆ 27ನೇ ತಾರೀಕ್ ಶನಿವಾರ ಇನ್ನೊಂದ್ ಭರ್ಜರಿ ಆಟ ಇತ್ತ್. ಸಾಲಿಗ್ರಾಮ ಮ್ಯಾಳ್ದರೊಟ್ಟಿಗೆ ಹೆಸ್ರ್‌ವಾ ಸಿ ಅತಿಥಿ ಕಲಾವಿದ್ರೆಲ್ಲ ಇದ್ರ್. ಪ್ರಸಂಗ ಕಾರ್ತವೀರ್ಯ- ಕಾರ್ತವೀರ್ಯ- ಕಾರ್ತವೀರ್ಯ

 

ಅತಿಥಿ ಕಲಾವಿದ್ರ್ ಯಾರೆಲ್ಲ ಕೇಂಡ್ರ್ಯಾ?

ಚಿಟ್ಟಾಣಿ , ಕೊಂಡದಕುಳಿ, ಸುಬ್ರಹ್ಮಣ್ಯ ಚಿಟ್ಟಾಣಿ, ಹಡಿನಬಾಳ, ತೋಟಿಮನೆ, ಚಪ್ಪರಮನೆ, ಕೊಳಗಿ

 

ಯಾರ ಕಾರ್ತವೀರ್ಯನಿಗೆ ಯಾರದ್ ರಾವಣ ಅಂದೇಳಿ ಆವತ್ ಆಟದಗೇ ಬಂದ್ ಕಾಣ್ಕ್ ಅಂಬ್ರ್.

 

ಇವತ್ತೇ ಗುರ್ತ್ ಹಾಂಯ್ಕಣಿ. ಆವತ್ ಬೆಂಗ್ಳೂರಗೆ ಇದ್ರೆ ತಪ್‌ದೇ ಆಟಕ್ ಬನಿ. ನಾ ಹ್ಯಾಂಗಿದ್ರೂ ಬಂದಿರ್ತನಲೆ.

 

Comments
  1. G Krishna Devadiga says:

    sumar dina iath marre nambashi kend tumba tumba thanks hoi!!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s